ಪುಲ್ವಾಮದಲಿ ಕೊನೆಯಾಯಿತು ಅದೆಷ್ಟೋ ಯೋಧರ ಭವಿಷ್ಯದ ಕನಸು
ಭಾರತಾಂಬೆಯ ಪದತಲಕೆ ಅರ್ಪಿತವಾಯ್ತು ನಲವತ್ತಕ್ಕೂ ಹೆಚ್ಚು ಮನಸು
ಉಗ್ರರ ಉಪಟಳ ಇತಿ ಶ್ರೀ ಹಾಡಲು ಹೊರಟವು ಗಗನದಿ ಲೋಹದ ಹಕ್ಕಿ
ಭೇದಿಸಿ ರಕ್ಷಣೆ ನೆಲಸಮಗೈದವು ಉಗ್ರರ ಗೂಡನು ಆರಿಸಿ ಹೆಕ್ಕಿ
ಮಿಂಚಿನ ವೇಗದಿ ದಾಳಿಯ ಮಾಡಿ
ರಭಸದಿ ಮರಳಿ ಗುರಿಯು ತಾಯ್ನೆಲವ ಸೇರಿ
ಸಂಚನು ಪುಡಿ ಮಾಡಲು ಶತ್ರುವು ಬೆದರಿ
ಬುದ್ದಿಯು ಕಲಿಯದೆ ಹಾರಾಡುತ ಬರಲು
ವಂದನೆಯ ಭೂಮಿಯೊಳಗುದಿಸಿದ ಅಭಿನಂದನ
ಅಟ್ಟಾಡಿಸಿ ಓಡಿಸಿ ಹೊಡೆದುರುಳಿಸಿದ ತಾ ಇಳಿದನು ಅರಿಯದೆ ಶತ್ರುವಿನ ನೆಲದಲಿ ನಿಂತು ಭಾರತ ಮಾತೆಗೆ ಹಾಕಿದ ಜಯಕಾರ
ಅವ ಅಭಿನಂದನ
ನಿರಾಯುಧ ಯೋಧನ ಮೇಲೇರಲು ಪಾಪಿ ಜನರು
ಬಸಿದನು ರಕ್ತವ ಯೋಧನು ಛಲದಲಿ
ಹೊಡೆದರೂ ಬಡಿದರೂ ಕುಗ್ಗದೆ ನಡು ಬಗ್ಗದೆ ನಡೆದನು ವೀರ
ಪಾಪಿಗಳ ಹಿಡಿತದಲಿ ನಲುಗುತ ಹೂವು
ದ್ವೇಷ ಕರಗುವಂತೆ ಹರಿದಿದೆ ನೆತ್ತರು ಬಿಸಿಲ ಸೋಕಿದ ಹಿಮದಂತೆ ಕೆಚ್ಚೆದೆಯ ವೀರನ ಕಣ್ಣಲಿ ಮಾತೃ ಭೂಮಿಗೆ ಜೈಕಾರ
ದಿಟ್ಟತನದಲಿ ನುಡಿದ ನಾ ಅಭಿನಂದನ ನನ್ನ ತವರು ಭಾರತ ಹಾಕಿದ ಗುಟುರಿಗೆ ಶತ್ರು ಪಡೆ ಥರ ಥರ
ಸಮರ್ಥ ದೇಶ ಭಕ್ತನ ಕೈಲಿದೆ ಬಲಿಷ್ಠ ಭಾರತ ಚಾಟಿ ಬೀಸಿದನೊಮ್ಮೆ ನೇತಾರ
ನನ್ನ ಯೋಧನಿಗೆ ಕೆಡುಕಾದರೆ ಎಚ್ಚರ….
ಶಾಂತಿಯ ನಾಟಕವಾಡುತ ಖಳ ನಾಯಕ ಬೇಷರತ್ ಬಿಡುತ್ತೇನೆ ಎಂದ ನರಿ ಬುದ್ದಿಯ ಮನದೊಳಗೆ ಭಯವಿದೆ ಕಾದಿದೆ ಏನೋ ಗ್ರಹಚಾರ….
ರಣ ಕಹಳೆ ಮೊಳಗಿಸಲು ಹಿಂದೂ ದೇಶದ ಕಲಿ ನಾ ಎಚ್ಚರ ರಣ ಹೇಡಿಯಲ್ಲ
ಏಟಿಗೆ ಎದಿರೇಟು ಕೊಡಬಲ್ಲೆ ನೀ ಮೇಲೆಳದಂತೆ
ದಿಗ್ಬಂಧನ ವಿಧಿಸಿ ಬಂಧಿಸುವೆ ನೀ ಅರಿಯದಂತೆ
ನಿನ್ನ ಹಳ್ಳ ನೀ ತೋಡಿಕೋ ನಾ ಬರೆಸುವೆ ಹೆಸರು ಪಾಪಿ ದೇಶಕೆ ಕಿಚ್ಚನಿಡುವೆ ಎಂದು ಗುಡುಗಲು ಅಭಿಯ ಬಿಡುಗಡೆಗೊಳಿಸಿದೆ….
-ವಿಜಯಾ. ಆರ್
Discussion about this post