ಭದ್ರಾವತಿ: ಕಾರಣಾಂತರಗಳಿಂದ ಅಜ್ಞಾತವಾಗಿ ಉಳಿದಿರುವ ವಿಷಯ ವಸ್ತುಗಳ ಸಂಶೋಧನೆಯಿಂದ ಇತಿಹಾಸದಲ್ಲಿನ ಅನೇಕ ಚಾರಗಳನ್ನು ಹೊರತರುವ ಕೆಲಸವಾಗಬೇಕಿದೆ ಎಂದು ನಿವೃತ್ತ ಪ್ರಾದ್ಯಾಪಕ ಪ್ರೊ. ಎಂ. ಚಂದ್ರಶೇಖರಯ್ಯ ಹೇಳಿದರು.
ನ್ಯೂಟೌನ್ ಸರ್.ಎಂ. ಸರಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು ಹಾಗೂ ಯು.ಜಿ.ಪಿ.ಜಿ. ಇತಿಹಾಸ ಭಾಗ ಸಂಯುಕ್ತಾಶ್ರದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ 2 ದಿನಗಳ ಅಮೂರ್ತ ಪರಂಪರೆ ಸಂಶೋಧನ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನದಿಂದಲೇ ಸಂಶೋಧನಾ ಹವ್ಯಾಸವನ್ನು ರೂಢಿಸಿಕೊಂಡರೆ ಅದು ಮುಂದಿನ ದಿನಗಳಲ್ಲಿ ನಮಗೆ ಅನೇಕ ಹೊಸ ಹೊಸ ವಿಚಾರಧಾರೆಗಳಿಗೆ ಆಧಾರವಾಗುವ ಪಾರಂಪರಿಕ ಸಂಗತಿಗಳನ್ನು ತಿಳಿಯಲು ಸಹಕಾರಿಯಾಗುತ್ತದೆ. ಇದರಿಂದ ಕಾಲಗರ್ಭದಲ್ಲಿ ಹುದುಗಿ ಹೋಗಿರಬಹುದಾದ ಅನೇಕ ಸಂಗತಿಗಳು ಬೆಳಕಿ ಬರುವುದರ ಜೊತೆಗೆ ಸಮಾಜಕ್ಕೆ ಉಪಯುಕ್ತವಾದ ಸಂಗತಿಗಳನ್ನು ಒದಗಿಸಿದ ಸಂತೃಪ್ತಿ ಸಂಶೋಧಕನಿಗೆ ನೀಡುತ್ತದೆ ಎಂದರು.
ಪ್ರಾದ್ಯಾಪಕ ಡಾ. ಧನಂಜಯ ಮಾತನಾಡಿ, ಪುರಾತನ ವ್ಯವಸಾಯ ಪದ್ಧತಿಯಿಂದ ಬೆಳೆಯಲಾಗುತ್ತಿದ್ದ ಆಹಾರ ಪದಾರ್ಥಗಳು ಮನುಷ್ಯನ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುವಷ್ಟರ ಮಟ್ಟಿಗೆ ಸತ್ವಶಾಲಿಯಾಗಿರುತ್ತಿತ್ತು. ಆದರೆ ಆಧುನಿಕ ವ್ಯವಸಾಯ ಪದ್ಧತಿಯಲ್ಲಿ ರಾಸಾಯನಿಕ ವಸ್ತುಗಳ ಬಳಕೆಗೆ ಹೆಚ್ಚಿನ ಆಧ್ಯತೆ ನೀಡುತ್ತಾ ಬಂದ ಪರಿಣಾಮ ಆಹಾರ ಬೆಳೆಗಳು ಪ್ಠೌಕಾಂಶಗಳ ಕೊರತೆುಂದ ಸತ್ವಹೀನವಾಗಿ ಬೆಳೆದು ಅದನ್ನೇ ನಾವುಗಳು ಸೇಸುತ್ತಾ ಬಂದಿರುವ ಕಾರಣ ರೋಗ ರುಜಿನಗಳು ಹೆಚ್ಚುತ್ತಿವೆ ಎಂದರು.
ಆಧುನಿಕ ವ್ಯವಸಾಯ ಯಂತ್ರೋಪಕರಣ ಪರಿಕರಗಳನ್ನು ಬಳಸಿಕೊಂಡು ವ್ಯವಸಾಯದಲ್ಲಿ ಭೂುಯ ಫಲವತ್ತತೆ ಕಾಪಾಡಿಕೊಳ್ಳಲು ಸಾವಯವ ಕೃಷಿಪದ್ಧತಿಗೆ ಆಧ್ಯತೆ ನೀಡುವ ಮೂಲಕ ಪುನಃ ಉತ್ತಮ ಗುಣಮಟ್ಟದ ಆಹಾರ ಬೆಳೆಗಳನ್ನು ಬೆಳೆದು ಆರೋಗ್ಯ ಶಾಲಿ ಸಮಾಜ ನಿರ್ಮಾಣ ಮಾಡಬಹುದಾಗಿದ್ದು ಈ ನಿಟ್ಟಿನಲ್ಲಿಸಹ ಅಮೂರ್ತ ಪಾರಂಪರಿಕ ಸಂಶೋಧನ ವಿಚಾರ ಸಂಕಿರಣದಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಿ. ಉಮಾಶಂಕರ್, ಉಮಾ, ವೆಂಕಟೇಶ್ ಮತ್ತು ಕಾಲೇಜಿನ ಪ್ರಾಧ್ಯಾಪಕರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post