ಶ್ರೀನಗರ: ಚುನಾವಣಾ ಭದ್ರತೆಯಲ್ಲಿದ್ದ ಸೇನಾ ಸಿಬ್ಬಂದಿ ಹಾಗೂ ಹಲವು ಭದ್ರತಾಧಿಕಾರಿಗಳ ವಿರುದ್ಧ ಚುನಾವಣಾಧಿಕಾರಿಯೇ ಎಫ್’ಐಆರ್ ದಾಖಲಿಸುವಂತೆ ಮನವಿ ಮಾಡಿರುವ ಘಟನೆ ನಡೆದಿದೆ.
ಎಸ್’ಎಚ್’ಒ ಕ್ವಾಜಿಘಡ್ ಅವರಿಗೆ ದೋರು ಉಪವಿಭಾಗಾಧಿಕಾರಿ ಗುಲಾಮ್ ರಸೋಲ್ ವನಿ ಅವರು ಈ ಕುರಿತಂತೆ ಪತ್ರ ಬರೆದಿದ್ದು, ಚುನಾವಣಾ ಕರ್ತವ್ಯದಲ್ಲಿದ್ದ ತಮ್ಮ ಮೇಲೆ ಭದ್ರತೆಯಲ್ಲಿದ್ದ ಸೇನಾ ಸಿಬ್ಬಂದಿ ಹಾಗೂ ಅಧಿಕಾರಿಗಳು ದಬ್ಬಾಳಿಕೆ ನಡೆಸಿದ್ದು ಮಾತ್ರವಲ್ಲದೇ, ಹಲ್ಲೆಗೆ ಮುಂದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.
ಅನಂತನಾಗ್ ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ ಎಂದು ದೂರಿರುವ ಅಧಿಕಾರಿ, ತಮ್ಮ ವಾಹನವನ್ನು ತಡೆದು ಈ ರೀತಿ ದಬ್ಬಾಳಿಕೆ ನಡೆಸಿದ್ದಾರೆ ಎಂದು ದೂರಿರುವುದಾಗಿ ವರದಿಯಾಗಿದೆ.
Discussion about this post