ಹೌದು.. ಅಂತಹುದ್ದೊಂದು ಪ್ರಶ್ನೆ ಕದ್ರಿ ಪಾರ್ಕ್ ಗೆ ಬರುವ ಪ್ರತಿಯೊಬ್ಬರಲ್ಲೂ ಮೂಡುತ್ತಿದೆ. ಯಾಕೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ…
ಸಾರ್ವಜನಿಕರ ಉಪಯೋಗಕ್ಕಾಗಿ ಇಲ್ಲಿ ಉದ್ಯಾನವನ ಹಾಗೂ ಸ್ಕೇಟಿಂಗ್ ಜಾಗ ನಿರ್ಮಿಸಲಾಗಿದೆ. ಆದರೆ, ವ್ಯವಸ್ತೆಯ ನಿರ್ಲಕ್ಷಕ್ಕೆ ಒಳಗಾಗಿ, ಇದೊಂದು ಅನೈತಿಕ ಚಟುವಟಿಕೆಯ ತಾಣವಾಗಿ ಪರಿಣಮಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ವಿಚಾರ ಕುರಿತಂತೆ ಸಾಮಾಜಿಕ ಕಾರ್ಯಕರ್ತ ಸೌರಜ್ ಮಂಗಳೂರ್ ಅಧಿಕಾರಿಗಳ ನಿರ್ಲಕ್ಷ್ಯತನವನ್ನು ಎತ್ತಿ ತೋರಿಸಿದ್ದಾರೆ.
ಪ್ರತಿ ಭಾನುವರದ ದಿನ ರಾಮಕೃಷ್ಣ ಮಿಷನ್ ಮಂಗಳೂರು ಸ್ವಚ್ಚತಾ ಆಂದೋಲನದಡಿ ಮಂಗಳೂರಿನಲ್ಲಿ ಸ್ವಚ್ಚತಾ ಕಾರ್ಯವನ್ನು ಕಾರ್ಯಕರ್ತರ ಮುಖಾಂತರ ಮಾಡುತ್ತಿದ್ದಾರೆ. ಈ ಬಾರಿ ಕದ್ರಿ ಪಾರ್ಕ್ ಸ್ಕೇಟಿಂಗ್ ಏರಿಯಕ್ಕೆ ಬಂದಾಗ ಅಲ್ಲಿನ ಅವ್ಯವಸ್ಥೆ ನೋಡಿ ಸಾಮಾಜಿಕ ಜಾಲತಾಣದಲ್ಲಿ ಇಂತಹ ಸಾಮಾಜಿಕ ವಿಚಾರದಲ್ಲಿ ಜಾಗರೂಕರಾಗಿರುವ ಸೌರಜ್ ಮಂಗಳೂರು ಇವರು ಇಲ್ಲಿನ ಅವ್ಯವಸ್ಥೆಯನ್ನು ಎತ್ತಿ ತೋರಿಸಿದ್ದಾರೆ.
ನಾಗರಿಕರು ಪಾವತಿಸುವ ತೆರಿಗೆ ಹಣವನ್ನು ಅವರ ಉಪಯೋಗಕ್ಕೆ ವಿವಿಧ ರೀತಿಯಲ್ಲಿ ಬಳಸಬೇಕು. ಆದರೆ, ಜನರ ತೆರಿಗೆ ಹಣದಲ್ಲಿ ನಿರ್ಮಿಸಿರುವ ಈ ಪ್ರದೇಶ ಅಧಿಕಾರಿಗಳ ತಾತ್ಸಾರಕ್ಕೆ ಒಳಗಾಗಿರುವುದು ದುರಂತವೇ ಸರಿ.
ತೋಟಗಾರಿಕೆ ಇಲಾಖೆಯಿಂದ ಕಾಂಡೋಮ್ ಕೃಷಿ!
ಇಲ್ಲಿನ ಪೊಲೀಸ್ ಸ್ಟೇಷನ್’ಗೆ ಹತ್ತಿರದಲ್ಲೇ ಇರುವ ಕದ್ರಿ ಪಾರ್ಕ್’ನ ಹಿಂಬಾಗದ ತೋಟಗಾರಿಕೆ ಇಲಾಖೆಗೆ ಸಂಬಂಧಪಟ್ಟ ಜಾಗವನ್ನು ಹೆಸರಿಗೆ ಮಾತ್ರ ಲಕ್ಷ ಖರ್ಚು ಮಾಡಿ ಸ್ಕೇಟಿಂಗ್ ಪಾರ್ಕ್ ಮಾಡಿದ್ದರೂ, ಇಲ್ಲಿ ನಡೆಯುತ್ತಿರುವುದು ಬೇರೆಯೇ ಸ್ಕೇಟಿಂಗ್….!
ಇಲ್ಲಿ ಬಿದ್ದಿರುವ ಕಾಂಡೋಮ್ ಸಂಖ್ಯೆಗಳನ್ನು ನೋಡಿದರೆ ಇಲ್ಲಿ ಇನ್ನೆಷ್ಟು ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂಬುದನ್ನು ಸಾರಿ ಸಾರಿ ಹೇಳುತ್ತಿವೆ.
ಈ ಜಾಗಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ಆರಕ್ಷಣಾ ಇಲಾಖೆ ಯಾಕೆ ಕಣ್ಮುಚ್ಚಿ ಕುಳಿತಿದೆ?
ಇದನ್ನು ಗಮನಿಸಬೇಕಾದ ತೋಟಗಾರಿಕೆ ಇಲಾಖೆ ನಿದ್ರೆಯಲ್ಲಿರುವುದನ್ನು ಸಮಾಜಕ್ಕೆ ತೋರಿಸಿ ನಾಗರಿಕರು ಎಚ್ಚೆತ್ತುಕೊಳ್ಳಬೇಕು ಇದು ಸಾರ್ವಜನಿಕ ಸೊತ್ತು ಎಲ್ಲಾರು ಈ ಅವ್ಯವಸ್ಥೆಯ ಬಗ್ಗೆ ಧ್ವನಿ ಆ ಬೇಕು ಎಂದು ಸೌರಜ್ ಆಗ್ರಹಿಸಿದ್ದಾರೆ.
ಇಂತಹ ಸಾಮಾಜಿಕ ಸಮಸ್ಯೆಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಸಮಾಜಕ್ಕೆ ತೋರಿಸುತ್ತಿರುವ ಸೌರಜ್ ಮಂಗಳೂರು ಅವರ ಸಮಾಜಮುಖಿ ಕಾರ್ಯ ನಿಜಕ್ಕೂ ಅಭಿನಂದನೀಯ. ಇಂತಹ ಕಾರ್ಯದಿಂದ ಮಂಗಳೂರು ಮಾತ್ರವಲ್ಲ ಇಡಿಯ ರಾಜ್ಯವೇ ಪ್ರೇರಿತವಾಗಬೇಕಿದೆ. ಸೌರಜ್ ಅವರ ಈ ಮಾದರಿ ಸೇವೆಗಳು ಇತರರಿಗೆ ಪ್ರೇರಣೆಯಾಗಲಿ ಎಂದು ಕಲ್ಪ ನ್ಯೂಸ್ ತಂಡ ಆಶಿಸುತ್ತದೆ.
Discussion about this post