ಶಿವಮೊಗ್ಗ: ಜಿಲ್ಲೆಯಾದ್ಯಂತ ಮಾರ್ಚ್ 20 ಮತ್ತು 23 ರಂದು ಹೋಳಿ ಹಬ್ಬ ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಯಾವುದೇ ಅತಕರ ಘಟನೆಗೆ ಅವಕಾಶ ನೀಡದಂತೆ ಶಾಂತ ರೀತಿಯಲ್ಲಿ ಆಚರಿಸಲು ಜಿಲ್ಲಾ ಪೊಲೀಸ್ ಅಧಿಕ್ಷಕರು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.
ಬಣ್ಣದ ಜೊತೆ ಆಯಿಲ್ ಪೈಂಟ್, ಮೊಟ್ಟೆ, ಟೊಮ್ಯಾಟೋ ಉಪಯೋಗಿಸಬಾರದು. ಬೈಕುಗಳಲ್ಲಿ ತ್ರಿಬಲ್ ರೈಡಿಂಗ್ ಮಾಡಿಕೊಂಡು ಜೋರಾಗಿ ಕೋಗಾಡುವುದು ಮತ್ತು ಕರ್ಕಷ ಶಬ್ಧ ಮಾಡಿಕೊಂಡು ಓಡಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಸರ್ಕಾರಿ /ಖಾಸಗಿ ಕೆಲಸಗಳಿಗೆ ಹೋಗುವ ನೌಕರರು, ಶಾಲಾ ಕಾಲೇಜು ವಿದ್ಯಾರ್ಥಿ/ವಿದ್ಯಾರ್ಥಿನಿಗಳಿಗೆ ಬಲವಂತವಾಗಿ ಬಣ್ಣ ಎರಚಬಾರದು. ಓಕುಳಿ ನಂತರದಲ್ಲಿ ಸಾರ್ವಜನಿಕರು ನಿಗಧಿಪಡಿಸಿದ ಹೊಳೆ/ಚಾನಲ್ಗಳಲ್ಲಿ ಸ್ನಾನ ಮಾಡುವುದು. ತಮ್ಮ ತಮ್ಮ ಕೇರಿಗಳನ್ನು ಹೊರತುಪಡಿಸಿ ಇತರೆ ಸ್ಥಳಗಳಿಗೆ ಹೋಗಿ ಬಣ್ಣ ಹಚ್ಚುವುದು, ಇತರೆ ಕೋುನ ರುದ್ಧ ಪ್ರಚೋದನಕಾರಿ/ಅವಹೇಳನಕಾರಿ ಘೋಷಣೆ ಕೂಗುವುದು ಹಾಗೂ ಬಣ್ಣ ಹಾಕುವುದನ್ನು ನಿಷೇಧಿಸಿದೆ. ರಸ್ತೆಗಳಲ್ಲಿ ಓಡಾಡುವವರಿಗೆ ಬಲವಂತವಾಗಿ ಬಣ್ಣ ಎರಚಬಾರದು ಹಾಗೂ ಗುಂಪುಗುಂಪಾಗಿ ಚಲಿಸಿ ತೊಂದರೆ ನೀಡಬಾರದು ಎಂದು ಎಚ್ಚರಿಸಿದ್ದಾರೆ.
ಸಾರ್ವಜನಿಕರು ಈ ಸಂದರ್ಭದಲ್ಲಿ ಯಾವುದೇ ರೀತಿಯ ಅತಕರ ಘಟನೆಗಳು ನಡೆದಲ್ಲಿ, ಪೊಲೀಸ್ ಕಂಟ್ರೋಲ್ ರೂ. 100, 08182-261413, ಪೊಲೀಸ್ ಉಪಾಧೀಕ್ಷಕರು-9480803321/08182-261404, ವೃತ್ತ ನಿರೀಕ್ಷಕರುಗಳು ದೊಡ್ಡಪೇಟೆ ವೃತ್ತ-9480803330/08182-261406, ಕೋಟೇ ವೃತ್ತ-9480803331/08182-261408, ಶಿವಮೊಗ್ಗ ಗ್ರಾಮಾಂತರ ವೃತ್ತ-9480803332/08182-261410, ಪೊ.ಉಪಾಧಿಕ್ಷಕರು ಭದ್ರಾವತಿ-08182-274252, ಸಾಗರ-08182-226082, ತೀರ್ಥಹಳ್ಳಿ-08181-220388, ಶಿಕಾರಿಪುರ-08187-222442 ಗಳನ್ನು ಸಂಪರ್ಕಿಸುವುದು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು 9480803302 ಹಾಗೂ ಎಸ್.ಪಿ 9480803301ಗಳಿಗೆ ಕರೆ ಮಾಡಿ ಮುಕ್ತವಾಗಿ ತಿಳಿಸುವಂತೆ ಪೊಲೀಸ್ ಇಲಾಖೆ ತಿಳಿಸಿದೆ.
(ವರದಿ: ಡಾ.ಸುಧೀಂದ್ರ)
Discussion about this post