ಬೆಂಗಳೂರು: ಭಾರತದ ದೇಶ, ಸನಾನತ ಪರಂಪರೆ ಕಂಡ ಮಹಾನ್ ಸನ್ಯಾಸಿ ಡಾ.ಶಿವಕುಮಾರ ಸ್ವಾಮೀಜಿಗಳ ಕುರಿತಾಗಿ ತೆರೆಕಂಡ ಜ್ಞಾನ ಜ್ಯೋತಿ ಸಿದ್ಧಗಂಗಾ ಎಂಬ ಚಿತ್ರದಲ್ಲಿ ಸ್ವತಃ ಶ್ರೀಗಳು ನಟಿಸಿದ್ದರು.
2008ರಲ್ಲಿ ತೆರೆಕಂಡಿದ್ದ ಈ ಚಿತ್ರದಲ್ಲಿ ಶ್ರೀಗಳು ನಟಿಸಿದ್ದರು ಎಂಬ ವಿಚಾರದ ಸಾಕಷ್ಟು ಮಂದಿಗೆ ತಿಳಿದಿಲ್ಲ. ಶ್ರೀಗಳ ಕುರಿತಾಗಿ ತೆಗೆಯಲಾಗಿದ್ದ ಈ ಚಿತ್ರದಲ್ಲಿ ಸ್ವತಃ ಅವರೇ ನಟಿಸಿದ್ದು ವಿಶೇಷ ವಿಚಾರ.
ಸಾಹಸಸಿಂಹ ಡಾ.ವಿಷ್ಣುವರ್ಧನ್, ಭಾರತಿ ವಿಷ್ಣುವರ್ಧನ್ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಇನ್ನೊಂದು ವಿಶೇಷ ಸಂಗತಿ. ಇನ್ನು ನಟರಾದ ಸುಚೇಂದ್ರ ಪ್ರಸಾದ್, ಶ್ರೀನಿವಾಸ್ ಮೂರ್ತಿ, ಶಿವಧ್ವಜ್, ಮಧನ್ ಹಾಗೂ ಗುರುಪ್ರಸಾದ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದರು.
ಓಂಕಾರ್ ಎನ್ನುವವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಶ್ರೀ ಮಠದ 700 ವರ್ಷದ ಇತಿಹಾಸ ಸಾರುವ ಸಿನಿಮಾ ಆಗಿತ್ತು. ಮಹಂತಪ್ಪ ಎನ್ನುವವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು.
Discussion about this post