ಬ್ರಹ್ಮಪುರಿಯ ಭಿಕ್ಷುಕ ಕೃತಿ ಓದುತ್ತಿದ್ದೆ. ಡಿವಿಜಿ ಶತಮಾನಗಳಷ್ಟು ಹಿರಿಯರಿದ್ದರೂ, ಈ ಹೊತ್ತಿಗೆಯನ್ನು ಓದುತ್ತಿದ್ದರೆ ಎಷ್ಟೊಂದು ಆತ್ಮೀಯಭಾವ!
ಮಂಕುತಿಮ್ಮನ ಕಗ್ಗವಂತೂ ಕನ್ನಡ ಸಾಹಿತ್ಯಕ್ಕೆ ಎಂದೂ ಬಾಡದ ಮಲ್ಲಿಗೆಯೇ ಸರಿ, ಕಾಲಮಾನದ ಬದಲಾವಣೆಯಿಂದ ಸ್ವಲ್ಪವೂ ಘಮ ಕಳೆದುಕೊಳ್ಳದ ಕೃತಿ. ಧ್ಯೇಯಜೀವಿ ಡಿವಿಜಿಯವರ ಕೊಡುಗೆ ಸಮಾಜ ಮತ್ತು ಕನ್ನಡ ಸಾಹಿತ್ಯಕ್ಕೆ ಅಪಾರ.
ನಾನೂ ಈ ಒಂದುವರೆ ವರ್ಷದಿಂದ ಮೌಲ್ಯಾತ್ಮಕ ಗ್ರಂಥಗಳ ಅಧ್ಯಯನದಲ್ಲೇ ತೊಡಗಿದ್ದೇನೆ. ಸಾಕಷ್ಟು ಪ್ರಕಾಶಕ ವರ್ಗದವರ ಸಂಪರ್ಕದಲ್ಲೂ ಇದ್ದೇನೆ. ನನಗೆ ಬೇಕಾದ ಯಾವ ಗ್ರಂಥವೇ ಇರಲಿ, ಅದನ್ನು ಕಾದಿರಿಸಿ ತರಿಸಿಕೊಂಡು ಓದಿಕೊಳ್ಳುತ್ತೇನೆ. ಹೀಗೆ ಒಂದು ಸನ್ನಿವೇಶ, ನನಗೆ ಗೊರೂರ ಕೃತಿ ’ಭಗವಾನ್ ಕೌಟಿಲ್ಯ’ ಪುಸ್ತಕ ಎಲ್ಲಿ ದೊರೆಯುತ್ತದೆ ಎಂಬ ಮಾಹಿತಿ ದೊರೆಯಬೇಕಿತ್ತು. ಸಾಕಷ್ಟು ಕರೆಗಳನ್ನು ಮಾಡಿ ನನ್ನ ಸಂಪರ್ಕದಲ್ಲಿದ್ದ ಪ್ರಕಾಶಕರುಗಳಿಗೆ ಅದನ್ನು ಎಲ್ಲಿಂದಲಾದರೂ ತರಿಸಿಕೊಡುವಂತೆ ಒತ್ತಾಯಿಸಿದೆ. ನನ್ನ ದುದೃಷ್ಟ, ಆ ಪುಸ್ತಕದ ಒಂದು ಪ್ರತಿಯೂ ಕೂಡ ಯಾರ ಬಳಿಯೂ ದೊರಕಲಿಲ್ಲ.
ಅವಧಾನಿ ಗಣೇಶರನ್ನೇ ಕೇಳಿದರೆ ಈ ಮಾಹಿತಿ ಸಿಗಬಹುದು, ಅಥವಾ ಅವರ ಬಳಿಯೇ ಈ ಪುಸ್ತಕವಿದ್ದರೆ ಪ್ರತಿಮಾಡಿಸಿಕೊಳ್ಳಬಹುದು ಎಂಬ ಯೋಚನೆಯಲ್ಲಿ ಅವರನ್ನೂ ಕೇಳಿದೆ. ಆಗ ಅವರು ಸೂಚಿಸಿದಂತೆ ಆ ಪುಸ್ತಕ ಗೋಖಲೆ ಇನ್ಸ್ಟಿಟ್ಯೂಟ್’ನ ಗ್ರಂಥಾಲಯದಲ್ಲಿ ದೊರೆಯಿತು. ಆ ಸಂದರ್ಭದಲ್ಲೇ ಇಲ್ಲಿರುವ ಹಲವಾರು ಮೌಲ್ಯಾತ್ಮಕ ಗ್ರಂಥಗಳ ಪರಿಚಯವೂ ಆಗುತ್ತಾ ಹೋಯಿತು. ಇದು ನನಗೆ ಎರಡನೆಯ ್ಕಐ ಆಗಿ ಕಾಣಿಸಿತು. ಈಗ ಯಾವ ಅವಶ್ಯಕತೆ ಬಿದ್ದರೂ ಮೊದಲು ಅಲ್ಲಿಗೇ ಹೋಗಿ ನೋಡುತ್ತೇನೆ. ಇಲ್ಲಿಗೆ ಹೋದರಂತೂ ಇನ್ನೆಲ್ಲೂ ಹೋಗುವ ಅವಶ್ಯಕತೆಯೇ ಬಂದಿಲ್ಲ.
ಸ್ವಲ್ಪಕಾಲವಾದ ನಂತರ ಯಾರಿಂದಲೂ ತಿಳಿಯಿತು. ಡಿವಿಜಿಯವರ 80 ನೆಯ ವರ್ಷದಲ್ಲಿ ಅವರಿಗೆ ಗೌರವಸಮರ್ಪಣೆ ಎಂದು ಹಿತೈಷಿ, ಅಭಿಮಾನಿಗಳೆಲ್ಲರೂ ಒಟ್ಟು ಸೇರಿ ಒಂದು ಸನ್ಮಾನ ಕಾರ್ಯಕ್ರಮ ಏರ್ಪಡಿಸುತ್ತಾರೆ. ಅಲ್ಲಿ ಇವರಿಗೆ ಗೌರವಧನವಾಗಿ ಸ್ವಲ್ಪ ಹಣವನ್ನೂ ಕೊಡಬೇಕೆಂದು ನಿಶ್ಚಯಿಸಿಕೊಳ್ಳುತ್ತಾರೆ. ಆದರೆ ಸಮರ್ಪಣೆಯಾದ ಗೌರವಧನವನ್ನು ಪೂರ್ಣವಾಗಿ ಗೋಖಲೆ ಇನ್ಸ್ಟಿಟ್ಯೂಟ್’ನ ಅಭಿವೃದ್ಧಿಗಾಗಿ ಸ್ವತಃ ಡಿವಿಜಿಯವರೇ ಕೊಟ್ಟು ವೇದಿಕೆಯಿಂದ ಕೆಳಗಿಳಿದಿದ್ದರು ಎಂದು. ಇಷ್ಟಾಗಿಯೂ ಆ ಹಣದ ಮೊತ್ತ 1 ಲಕ್ಷ ರೂಪಾಯಿ!
ಈ ವಿಷಯ ಕಾಲಮಾನದ ಅಥವಾ ವಿತ್ತಮೌಲ್ಯದ ಬಗೆಗೂ ಅಲ್ಲ. ಒಬ್ಬ ವ್ಯಕ್ತಿಯಾಗಿ ಒಬ್ಬ ಶಕ್ತಿಯಾಗಿ ಇಂದು ನಮ್ಮ ಮುಂದಿರುವ ಡಿವಿಜಿಯವರ ಬಗೆಗೆ. ವಿಶೇಷವಾಗಿ ಅವರು ’ಜಿ ಞಛಿಜಿ’ದ ವಿರುದ್ಧವಿದ್ದರು. ಸಾಹಿತಿಯಾಗಿ, ಪತ್ರಕರ್ತನಾಗಿ ತನ್ನ ಪಾಲಿಗೆ ಬಂದ ಹಲವಾರು ಪದವಿ ಪ್ರೋತ್ಸಾಹಗಳನ್ನೂ, ಭವಿಷ್ಯದಲ್ಲಿ ಏನಾದರೂ ಆತ್ಮಾಭಿಮಾನಕ್ಕೆ ಕುತ್ತು ಬರಬಹುದು ಎಂದು ಅಂಗೀಕರಿಸಲಿಲ್ಲ.
ಇಂದು ಅವರ ಈ ಸಾಹಿತ್ಯನಿಷ್ಠೆ, ವ್ಯಕ್ತಿನಿಷ್ಠೆ, ವ್ಯಕ್ತಿತ್ವನಿಷ್ಠೆಗೆ ಒಂದು ಶರಣು!
ಲೇಖನ: ಅಜೇಯ್ ಕಿರಣ್ ಆಚಾರ್
Discussion about this post