ಬೆಂಗಳೂರು: ಪ್ರವಾಹದಿಂದ ನಲುಗಿ ಹೋಗಿರುವ ಕೊಡಗಿನ ಮಂದಿಗೆ ಸಹಾಯ ಮಾಡಲು ರಾಜ್ಯದೆಲ್ಲೆಡೆಯಿಂದ ಜನರು ಕಳುಹಿಸಿರುವ ಊಟ, ತಿಂಡಿ, ಬಟ್ಟೆಗಳು ಈಗಾಗಲೇ ಸಾಕಾಗಿದ್ದು, ಸದ್ಯ ರವಾನಿಸುವುದು ಬೇಡ ಎಂದು ಸಾರಿಗೆ ಸಚಿವ ತಮ್ಮಣ್ಣ ಮನವಿ ಮಾಡಿದ್ದಾರೆ.
ಈ ಕುರಿತಂತೆ ಇಂದು ಮಾತನಾಡಿರುವ ಅವರು, ಮಂಗಳೂರಿಗೆ ಹೋಗುವ ಶಿರಾಡಿ ಘಾಟ್ ಕ್ಲೋಸ್ ಆಗಿದೆ ಹೀಗಾಗಿ ಕುದುರೆ ಮುಖದ ಮಾರ್ಗವಾಗಿ ಸಂಚಾರ ಕಲ್ಪಿಸಲಾಗಿದೆ. ಚಾರ್ಮಾಡಿ ಸಿದ್ದವಾಗುತ್ತಿದೆ, ಶಿರಾಡಿ ಘಾಟ್ ಇನ್ನು ತಡವಾಗಲಿದೆ ಎಂದಿದ್ದಾರೆ.
ಕೊಡಗಿನಲ್ಲಿ ರಸ್ತೆಗಳು ಕುಸಿದಿದೆ ಅದನ್ನ ಕೂಡ ಸರಿಪಡಿಸಲಾಗುತ್ತದೆ ಎಂದಿರುವ ಅವರು, ಸಂತ್ರಸ್ತರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಕೇಂದ್ರ ಸರ್ಕಾರ ಹಾಗು ರಾಜ್ಯ ಸರ್ಕಾರ ಒಟ್ಟಿಗೆ ಸೇರಿ ಮಾತುಕತೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
Discussion about this post