ಉಡುಪಿ: ಇಂದು ದೇಶದೆಲ್ಲೆಡೆ ಗುರು ಪೂರ್ಣಿಮೆಯನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಣೆ ಮಾಡಲಾಗಿದೆ. ಶಿಷ್ಯರು ತಮ್ಮ ತಮ್ಮ ಗುರು ಕಾರುಣ್ಯದ ವೈಭವವನ್ನು ನೆನೆದು ಭಕ್ತಿಯಿಂದ ನಮಿಸಿದ್ದಾರೆ.
ಅದೇ ರೀತಿ ಇಡಿಯ ದೇಶಕ್ಕೇ ಗುರುವಾಗಿರುವ ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದಂಗಳವರ ಸಾಮಾಜಿಕ ಸೇವೆ, ಶಿಷ್ಯರ ಮೇಲಿನ ಅಪಾರ ಪ್ರೀತಿಗೆ ದೇಶವೇ ತಲೆದೂಗಿದೆ.
ಗುರು ಪೂರ್ಣಿಮೆ ಅಂಗವಾಗಿ ಇಂತಹ ಪೇಜಾವರ ಶ್ರೀಗಳ ದರ್ಶನ ಪಡೆದು, ಆರ್ಶೀವಾದ ಪಡೆಯಲು ಇಂದು ಕೇಂದ್ರ ಸಚಿವರ ದಂಡೇ ಉಡುಪಿಗೆ ಆಗಮಿಸಿತ್ತು.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಶಿಕ್ಷಣ ಸಚಿವ ಪ್ರಕಾಶ್ ಜಾವ್ಡೇಕರ್, ನೀರಾವರಿ, ಗಂಗಾ ನದಿ ಸಂರಕ್ಷಣಾ ಸಚಿವೆ ಉಮಾ ಭಾರತಿ ಪೇಜಾವರ ಶ್ರೀಗಳಿಗೆ ಗುರುವಂದನೆ ಸಲ್ಲಿಸಿ, ಆರ್ಶೀವಾದ ಪಡೆದರು.
ಎಲ್ಲ ಗಣ್ಯರಿಗೆ ಶ್ರೀಮಠದ ವತಿಯಿಂದ ಗೌರವ ಸಲ್ಲಿಸಿ, ಫಲ ಮಂತ್ರಾಕ್ಷತೆ ವಿತರಿಸಲಾಯಿತು.
Discussion about this post