ಜಕಾರ್ತಾ: ಏಷ್ಯನ್ ಗೇಮ್ಸ್ 2018ರಲ್ಲಿ ಭಾರತದ ಚಿನ್ನದ ಬೇಟೆ ಮುಂದುವರೆದಿರುವಂತೆಯಙೇ ಶಾಟ್ ಪುಟ್ನಲ್ಲಿ ಚಿನ್ನದ ಪದಕ ಪಡೆದು ದೇಶದ ಕೀರ್ತಿಯನ್ನು ಮುಗಿಲೆತ್ತರಕ್ಕೆ ಹಾರಿಸಿದ ತಜೀಂದರ್ ಪಾಲ್ ಸಿಂಗ್ ತಮ್ಮ ಯಶಸ್ಸಿನ ಹಿಂದಿನ ಸತ್ಯದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ತಮ್ಮ ಈ ಸಾಧನೆಯ ಹಿಂದಿನ ಕೋಚ್ ಆಡಿದ ಕಠೋರ ಮಾತುಗಳನ್ನು ಬಿಚ್ಚಿಟ್ಟಿದ್ದು, ಕೋಚ್ಗಳ ಕನಸು ಹೇಗಿರುತ್ತದೆ ಎಂಬುದನ್ನು ತೋರಿಸಿದೆ.
20.75 ಮೀಟರ್ ದೂರಕ್ಕೆ ಗುಂಡು ಎಸೆದು ಚಿನ್ನದ ಪದಕ ಗಳಿಸಿದ ಪಾಲ್ ಸಿಂಗ್, ಈ ಸಾಧನೆಗೂ ಮುನ್ನ ಅಂಗಳದಲ್ಲಿ ಕೋಚ್ ದಿಲೋನ್ ನೀವು ಪದಕ ಗೆಲ್ಲದಿದ್ದರೆ ಅನುಮಾನದಿಂದ ಸಾಯುವಿರಿ ಎಂದು ಕೂಗಿದ್ದರು. ಇದರಿಂದ ಆಕ್ರೋಶಗೊಂಡ ತಜೀಂದರ್ ಪಾಲ್ 20.75 ಮೀಟರ್ ದೂರಕ್ಕೆ ಎಸೆಯುವ ಮೂಲಕ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು.
ಆರಂಭಿಕ ಎಸೆತಗಳಲ್ಲಿ ಪಾಲ್ 20 ಮೀಟರ್ ಒಳಗೆಯೇ ಗುಂಡು ಎಸೆಯುತ್ತಿದ್ದರು. ಇದರಿಂದ ಆಕ್ರೋಶಗೊಂಡ ಕೋಚ್, ತಮ್ಮ ಶಿಷ್ಯನಿಗೆ ಕಠಿಣ ಮಾತುಗಳಿಂದ ಪ್ರೇರಿತಗೊಳ್ಳುವಂತೆ ಮಾಡಲು ಮುಂದಾಗಿ, ನೀವು ಪದಕ ಗೆಲ್ಲದಿದ್ದರೆ ಅವಮಾನದಿಂದ ಸಾಯಿವಿರಿ ಎಂದು ಕೂಗಿದ್ದರು.
ಇದರಿಂದ ಹಠಕ್ಕೆ ಬಿದ್ದಿದ್ದ ಪಾಲ್, ದೇಶವಾಸಿಗಳ ಕನಸನ್ನು ನನಸು ಮಾಡಿ, ದೇಶಕ್ಕೆ ಕೀರ್ತಿ ತರಬೇಕು ಎಂದು ಸಂಕಲ್ಪ ಮಾಡಿದ್ದರ ಫಲವಾಗಿ ಈಗ ಪಾಲ್ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.
Discussion about this post