ಬೆಂಗಳೂರು: ದೇಶ ವಿರೋಧಿಗಳಿಗೆ ಬೆಂಬಲ ನೀಡುತ್ತಾ, ಪ್ರಧಾನಿ ಮೋದಿ ವಿರುದ್ಧ ಸದಾ ಕಿಡಿ ಕಾರುವ ನಟ ಪ್ರಕಾಶ್ ರಾಜ್’ಗೆ ವೇದಿಕೆಯೊಂದರಲ್ಲಿ ಚಿತ್ರರಂಗದ ಪ್ರಮುಖ ಪ್ರಶಾಂತ್ ಸಂಬರಗಿ ನೇತೃತ್ವದ ದೇಶಪ್ರೇಮಿಗಳ ತಂಡ ಬೆವರಿಳಿಸಿರುವ ಘಟನೆ ನಿನ್ನೆ ನಡೆದಿದೆ.
ಜಮ್ಮುವಿನ ಪುಲ್ವಾಮಾದಲ್ಲಿ ಗುರುವಾರ ಪಾಕ್ ಉಗ್ರರು ನಡೆಸಿದ ಆತ್ಮಹತ್ಯಾ ದಾಳಿಗೆ ಬಲಿಯಾಗಿ ಸಿಆರ್’ಪಿಎಫ್’ನ 42 ಯೋಧರು ವೀರಸ್ವರ್ಗ ಸೇರಿದ ಹಿನ್ನೆಲೆಯಲ್ಲಿ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸಾರ್ವಜನಿಕ ಶ್ರದ್ದಾಂಜಲಿ ಹಾಗೂ ಗೌರವ ಸೂಚಕ ಸಭೆಯನ್ನು ಏರ್ಪಡಿಸಲಾಗಿತ್ತು.
ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ದೇಶಭಕ್ತರು ಪಾಲ್ಗೊಂಡು ಕ್ಯಾಂಡಲ್ ಹಿಡಿದು ವೀರಸ್ವರ್ಗ ಸೇರಿದ ಯೋಧರಿಗೆ ಅಶ್ರುತರ್ಪಣ ಸಲ್ಲಿಸಿದರು.
ಇದರಲ್ಲಿ ಗಣ್ಯ ವ್ಯಕ್ತಿಗಳಾದ ಸಿ.ಟಿ. ರವಿ, ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್, ಚಿತ್ರರಂಗದ ಪ್ರಮುಖರಾದ ಭುವನ್, ರಿಷಬ್ ಶೆಟ್ಟಿ, ಮಾಳವಿಕಾ, ಅವಿನಾಶ್, ಪ್ರಶಾಂತ್ ಸಂಬರಗಿ, ಪ್ರಕಾಶ್ ರಾಜ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ಪ್ರಕಾಶ್ ರಾಜ್ ಹೊರಗಿನ ಶತ್ರುಗಳು ನಮ್ಮ ಮೇಲೆ ಆಕ್ರಮಣ ಮಾಡಿದಾಗ ನಾವು ನಮ್ಮೆಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ದೇಶಕ್ಕಾಗಿ ಒಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪ್ರಶಾಂತ್ ಸಂಬರಗಿ, ನೀವು ಯೋಧರ ಹತ್ಯೆಯಾದಂತಹ ಸಂದರ್ಭದಲ್ಲಿ ಮಾತ್ರ ಈ ರೀತಿ ನಡೆದುಕೊಳ್ಳುವುದಲ್ಲ. ಎಲ್ಲ ಸಂದರ್ಭದಲ್ಲೂ ಇಂತಹುದ್ದೇ ಮಾತನಾಡಬೇಕು ಎಂದು ಪ್ರಕಾಶ್ ರಾಜ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಉಗ್ರವಾದಿಗಳಿಗೆ ಬೆಂಬಲ ನೀಡುವ ದೇಶವನ್ನು ತುಕುಡೆ ತುಕುಡೆ ಗ್ಯಾಂಗ್’ಗೆ ಬೆಂಬಲ ನೀಡಿದ್ದ ಪ್ರಕಾಶ್ ರಾಜ್, ಈಗ ನಮ್ಮ ನಡುವೆಯೇ ಇದ್ದಾರೆ. ದುಶ್ಮನ್ ಕಹಾ ಹೈ ಎಂದರೆ, ಧೋ ಬಗಲ್ ಮೆ ಹೈ ಎಂದು ಮೈಕ್ ಕಸಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪ್ರಕಾಶ್ ರಾಜ್ ಅವರ ಹಿಂದಿನ ನಡೆಗಳಿಗೆ ಆಕ್ರೋಶ ವ್ಯಕ್ತಪಡಿಸಿದ ದೇಶಭಕ್ತರು ಮೋದಿ… ಮೋದಿ… ಮೋದಿ ಎಂಬ ಘೋಷಣೆ ಕೂಗಿದರು. ಇದಕ್ಕೆ ಪ್ರಕಾಶ್ ಪ್ರತಿರೋಧ ವ್ಯಕ್ತಪಡಿಸಿದರೂ, ಮೋದಿ ಮೋದಿ ಮೋದಿ ಎಂಬ ಘೋಷಣೆಯ ಮುಂದೆ ಅವರು ಮಂಕಾಗಿ, ನಖಶಿಖಾಂತ ಉರಿಕೊಂಡರು.
ಅಂತಿಮವಾಗಿ ಮೋದಿಯವರನ್ನು ವಿರೋಧಿಸುವ ಸಿಂಗಲ್ ಅಜೆಂಡಾ ಹೊಂದಿರುವ ಪ್ರಕಾಶ್ ರಾಜ್ ಸಮಯಕ್ಕೆ ತಕ್ಕಂತೆ ಮಾತು ಬದಲಾಯಿಸುತ್ತಾ, ದೇಶ ವಿರೋಧಿಗಳಿಗೆ ಬೆಂಬಲ ನೀಡುತ್ತಾ ದೇಶದಾದ್ಯಂತ ಆಕ್ರೋಶಕ್ಕೆ ಈಗಾಗಲೇ ಗುರಿಯಾಗಿದ್ದಾರೆ. ಇದರ ನಡುವೆ ನಿನ್ನೆಯ ವೇದಿಕೆಯಲ್ಲಿ ಮಾತನಾಡಲು ಹೋಗಿ, ಪ್ರಶಾಂತ್ ಸಂಬರಗಿ ನೇತೃತ್ವದ ದೇಶಪ್ರೇಮಿಗಳ ತಂಡದ ಆಕ್ರೋಶದಿಂದ ತೀವ್ರ ಇರುಸುಮುರುಸಿಗೆ ಒಳಗಾದ ಪ್ರಕಾಶ್ ರಾಜ್, ವೇದಿಕೆಯಿಂದ ಕೆಳಗಿಳಿದು ತೆರಳಬೇಕಾಯಿತು.
Discussion about this post