ಸ್ಯಾಂಡಲ್ ವುಡ್ ಯಶಸ್ವಿ ನಿರ್ದೇಶಕ ಪವನ್ ಒಡೆಯರ್ ತಾವು ಮೆಚ್ಚಿನ ಹುಡುಗಿ ಅಪೇಕ್ಷಾ ಪುರೋಹಿತ್ ಅವರೊಂದಿಗೆ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬಾಗಲಕೋಟೆಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ತಮ್ಮ ಮನಮೆಚ್ಚಿದ ಅಪೇಕ್ಷಾ ಅವರನ್ನು ವರಿಸಿದ ಒಡೆಯರ್ ಅವರ ಆರತಕ್ಷತೆ ನಿನ್ನೆ ಸಂಜೆ ನಡೆಯಿತು.
ಬಾಗಲಕೋಟೆಯಲ್ಲಿ ನಡೆದ ವಿವಾಹ ಸರಳ ಸಮಾರಂಭವಾಗಿದ್ದು, ಶೀಘ್ರದಲ್ಲೇ ಬೆಂಗಳೂರಿನಲ್ಲಿ ನಡೆಯುವ ಆರತಕ್ಷತೆ ಸಮಾರಂಭಕ್ಕೆ ಚಿತ್ರರಂಗದ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.
ಇಂದು ಸಾಂಪ್ರದಾಯಿಕವಾಗಿ ನಡೆದ ಸಮಾರಂಭದಲ್ಲಿ ಎರಡೂ ಕುಟುಂಬಗಳ ಸಮ್ಮುಖದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟರು. ಒಡೆಯರ್ ಹಾಗೂ ಅಪೇಕ್ಷಾ ಅವರದ್ದು ಲವ್ ಕಂ ಅರೇಜ್ಡ್ ವಿವಾಹವಾಗಿದೆ.
ಸ್ಯಾಂಡಲ್ ವುಡ್ ಯಶಸ್ವಿ ನಿರ್ದೇಶಕ ಪವನ್ ಒಡೆಯರ್, ಗೋವಿಂದಾಯ ನಮಃ, ಗೂಗ್ಲಿ, ರಣ ವಿಕ್ರಮ, ಜಸ್ಸಿ, ನಟರಾಜ ಸರ್ವೀಸ್ ಅಲ್ಲದೇ, ತೆಲುಗಿನ ಪೊಟ್ಟುಗಾಗಿ ಚಿತ್ರಗಳನ್ನು ನಿರ್ದೇಶಿಸಿದ್ದು, ಬಹುಪರಾಕ್ ಸೇರಿದಂತೆ ಮೂರು ಚಿತ್ರಗಳಲ್ಲಿ ನಟಿಸಿದ್ದಾರೆ.
ಇನ್ನು, ಕಾಫಿತೋಟ ಚಿತ್ರದ ಮೂಲಕ ಸ್ಯಾಂಡಲ್ ವುಡ್ಗೆ ಎಂಟ್ರಿ ಕೊಟ್ಟಿರುವ ಅಪೇಕ್ಷಾ ಪುರೋಹಿತ್ ಪವನ್ ಒಡೆಯರ್ ಕೈಹಿಡಿದು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
Discussion about this post