ಬೆಂಗಳೂರು: ಬಸವಧರ್ಮ ಪೀಠಾಧ್ಯಕ್ಷೆ ಡಾ. ಮಾತೆ ಮಹಾದೇವಿ ಲಿಂಗೈಕ್ಯರಾಗಿದ್ದಾರೆ.
ಒಂದು ವಾರದಿಂದ ಉಸಿರಾಟದ ಸಮಸ್ಯೆ ಹಾಗೂ ಶ್ವಾಸಕೋಶದ ಸೋಂಕಿನಿಂದ ಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೇ ಇಹಲೋಕ ತ್ಯಜಿಸಿದ್ದಾರೆ.
ರಾಷ್ಟ್ರೀಯ ಬಸವ ದಳದ ಅಧ್ಯಕ್ಷೆ ಹಾಗೂ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಅವರನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆದರೆ ಇಂದು ಚಿಕಿತ್ಸೆಗೆ ಸ್ಪಂದಿಸದೆ ಲಿಂಗೈಕ್ಯರಾಗಿದ್ದಾರೆ.
ಅವರ ಎರಡು ಕಿಡ್ನಿಗಳ ಕಾರ್ಯ ಸ್ಥಗಿತಗೊಂಡಿರುವುದರಿಂದ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ ಎಂದು ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ.
ಆಧ್ಯಾತ್ಮ ಸಾಗರದ ಅನರ್ಘ್ಯ ರತ್ನ ಪರಮ ಪೂಜ್ಯ ಮಾತೆ ಮಾಹದೇವಿಯವರ (ಬಸವಾತ್ಮಜೆಯವರ ) ಬದುಕಿನ ಒಂದು ನೋಟ
- ಕಾಯಕ: ವಿಶ್ವದ ಪ್ರಥಮ ಮಹಿಳಾ ಜಗದ್ಗುರುಗಳು (ಜಂಗಮರು)
- ದಿಕ್ಷಾ ಗುರು: ಪರಮ ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳು
- ಅಂಕಿತ ನಾಮ: ಸಚ್ಚಿದಾನಂದ
- ಜನನ: 1946 ಮಾರ್ಚ 13
- ಊರು: ಚಿತ್ರದುರ್ಗ ಜಿಲ್ಲೆಯ ಸಾಸಲಹಟ್ಟಿ
- ಜನ್ಮ ನಾಮ: ರತ್ನ
- ತಂದೆ : ಡಾ ಬಸಪ್ಪನವರು
- ತಾಯಿ : ಗಂಗಮ್ಮನವರು
- ಜಂಗಮ ದೀಕ್ಷೆ ಪಡೆದದ್ದು:5 ನೇ ಏಪ್ರಿಲ್ 1966
ಪರಮ ಪೂಜ್ಯ ಮಾತಾಜಿಯವರು ಬಾಲ್ಯದಿಂದಲೂ ಆಧ್ಯತ್ಮದ ಕಡೆ ತುಂಬ ಒಲವನ್ನ ಇಟ್ಟುಕೊಂಡಿದ್ದವರು, ಬಾಲ್ಯದಲ್ಲೆ ಸುಮಾರು 500ಕ್ಕು ಹೆಚ್ಚು ಪುಸ್ತಕಗಳನ್ನ ಓದಿ ಮುಗಿಸಿದ ಮಹಾನ್ಚೆ ಚೇತನ, ಅವರ ಪೂರ್ವಾಶ್ರಮದ (ರತ್ನ) ಹೆಸರೆ ಹೇಳುವಂತೆ ಅವರು ಬಸವ ಧರ್ಮಕ್ಕೆ ಸಿಕ್ಕ “ಅನರ್ಘ್ಯ ರತ್ನ”ವೆ ಸರಿ, ಕಿರಿದಾದ ವಯಸ್ಸಿನಲ್ಲಿಯೆ ತಮ್ಮನ್ನು ತಾವು ಧರ್ಮಕ್ಕೆ ಅರ್ಪಿಸಿಕೊಳ್ಳಬೆಕೆಂಬ ಉದ್ದೇಶದಿಂದ ಕಾಯುತಿದ್ದಾಗ ಅವರಿಗೆ ಸಿಕ್ಕಿದ್ದು “ಪರಮ ಪೂಜ್ಯ ಪ್ರವಚನ ಪರುಷ “ಲಿಂಗಾನಂದ ಮಹಾ ಸ್ವಾಮಿಗಳು” ಲಿಂಗಾನಂದ ಮಹಾಸ್ವಾಮಿಗಳ ಪ್ರವಚನದಿಂದ ಪ್ರಭಾವಿತರಾದ ರತ್ನ(ಮಾತಾಜಿಯವರು) ತಮ್ಮನ್ನು ತಾವು ಧರ್ಮಕ್ಕೆ ಅರ್ಪಿಸಿಕೊಳ್ಳುವ ಉದ್ದೇಶದಿಂದ 19 ಆಗಸ್ಟ್ 1965ರಂದು ತನ್ನ ತನವನ್ನು ಬಿಟ್ಟು ಧರ್ಮ ಪ್ರಚಾರಕ್ಕೆ ಮುಂದಿನ ಜೀವನವನ್ನು ಅರ್ಪಿಸುತ್ತಾರೆ ,21 ಅಗಸ್ಟ 1965ರಂದ ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳಿಂದ ಇಷ್ಟಲಿಂಗ ದಿಕ್ಷೆಯನ್ನು ಪಡೆದು ಕೊಳ್ಳುತ್ತಾರೆ ,ಆದರೆ ಅವರ ಮನಸ್ಸಿಗೆ ಸಮಾಧಾನವಿರುವುದಿಲ್ಲಾ ತಮ್ಮನ್ನು ತಾವು ತ್ಯಾಗ ಜೀವನಕ್ಕೆ ಅರ್ಪಿಸಿ ಕೊಂಡು ಬಸವಾದಿ ಶರಣರ ತತ್ವಗಳನ್ನ ಜಗತ್ತಿಗೆ ಬಿತ್ತಿ ಬೆಳೆಸುವ ಉದ್ದೇಶದಿಂದ 5-4-1966 ರತ್ನ ಅನರ್ಘ್ಯ ರತ್ನವಾಗಿ ಲಿಂಗಾಯತರ ಆಶಾಕಿರಣವಾಗಿ ತಮ್ಮ ಇಚ್ಛೆಯಂತೆ ಜಂಗಮ ದಿಕ್ಷೆ ಪಡೆದುಕೊಳ್ಳುತ್ತಾರೆ ,ಅಲ್ಲಿಂದ ನೆರವಾಗಿ ಋಷಿಕೇಶಕ್ಕೆ ಬಂದ ಪರಮ ಪೂಜ್ಯ ಮಾತಾಜಿಯವರು ಗಂಗಾ ತರಂಗ ಪುಸ್ತಕ ರಚನೆ ಮಾಡುತ್ತಾರೆ ,
- ಬೃಹತ್ ಗ್ರಂಥವಾದ “ಬಸವ ತತ್ವ ದರ್ಶನ” ಕೇವಲ 3 ತಿಂಗಳಲ್ಲಿ (1967. ಮೇ – ಜುಲೈ) ರಚಿಸಿ ಅಪ್ಪಾಜೀಯವರಿಗೆ ಮತ್ತು ಬಸವ ಭಕ್ತರಿಗೆ ಅರ್ಪಿಸುತ್ತಾರೆ,
- ಧರ್ಮ ಪ್ರಚಾರಕ್ಕೆ ಅನುಕೂಲವಾಗಲೆಂದು 1968 ಎಪ್ರಿಲ್ 13 ರಂದು ವೀರ ವೈರಾಗ್ಯ ನಿಧಿ ಅಕ್ಕಮಹಾದೇವಿ ತಾಯಿಯವರ ಜಯಂತಿಯಂದು ಧರಾವಡದಲ್ಲಿ ಅಕ್ಕಮಹಾದೇವಿ ಆಶ್ರಮ ಸ್ಥಾಪನೆ
- 14-1-1970 ಲಿಂಗಾಂಗ ಯೊಗಿ ಸಿದ್ದರಾಮೆಶ್ವರ ಜಯಂತಿಯಂದು ಬಸವ ಧರ್ಮಿಯರಿಗಾಗಿ ,ಬಸವ ತತ್ವ ಪ್ರಚಾರಕ್ಕೆ ಅನುಕೂಲವಾಗಲೆಂದು ಕಲ್ಯಾಣ ಕಿರಣ ಮಾಸ ಪತ್ರಿಕೆಯ ಮೊದಲ ಸಂಚಿಕೆ ಬಿಡುಗಡೆ
- 21- 4-1970 ಗುರು ಬಸವಣ್ಣನವರ ಆಶಿರ್ವಾದದಿಂದ ,ಪರಮ ಪೂಜ್ಯ ಲಿಂಗಾನಂದ ಅಪ್ಪಾಜಿಯವರ ದಿವ್ಯ ಸಾನಿಧ್ಯದಲ್ಲಿ ಐತಿಹಾಸಿಕ ಅಕ್ಕ ಮಹಾದೇವಿ ಅನುಭವ ಪಿಠವೆಂಬ ವಿಶ್ವದ ಮೊಟ್ಟಮೊದಲ ಮಹಿಳಾ ಜಗದ್ಗುರು ಪೀಠ ಸ್ಥಾಪನೆ ಅದರ ಪ್ರಥಮ ಪಿಠಾಧ್ಯಕರಾಗಿ ಮಾತಾಜಿಯವರು ಪ್ರತಿಜ್ಞಾವಿಧಿ ಸ್ವೀಕರಿಸಿದರು
- 9-12- 1973 ಸಾಮಾಜಿಕ ಕಾದಂಬರಿ #ಹೆಪ್ಪಿಟ್ಟ_ಹಾಲು ಪುಸ್ತಕ ಬಿಡುಗಡೆ, ಈ ಕೃತಿಗೆ ರಾಜ್ಯ ಸಾಹಿತ್ಯ ಆಕಾಡಮಿ ಪುರಸ್ಕಾರ ನಿಡಿ ಗೌರವಿಸಿತು ಕಿರಿಯ ವಯಸ್ಸಿನಲ್ಲಿಯೆ ಹಿರಿದಾದ ಸಾಧನ ಮಾಡಿದ ಕೀರ್ತಿ ಮಾತಾಜಿಯವರದು
- 4-5-1975 ರಂದು ಬೆಂಗಳೂರಿನ ರಾಜಾಜಿನಗರದಲ್ಲಿ ಬಸವ ಮಂಟಪ ಸ್ಥಾಪನೆ ,ಬಸವ ಜಯಂತಿಯಂದು ಉದ್ಘಾಟನೆ
- 1976 ಬಸವ ಧರ್ಮ ಪ್ರಚಾರಕ್ಕೆ ಇಂಗ್ಲೆಂಡ್ ಪ್ರವಾಸ
- 1977 ವಿಶ್ವ ಕಲ್ಯಾಣ ಮಿಷನ್(ಟ್ರಸ್ಟ್ )ಸ್ಥಾಪನೆ
- 1978 ಬೆಂಗಳೂರಿನ ಕುಂಬಳಗೋಡಿನಲ್ಲಿ ಬಸವ ಗಂಗೋತ್ರಿ ಆಶ್ರಮ ನಿರ್ಮಾಣ
- 1980 ಬಸವ ಧರ್ಮ ಪ್ರಚಾರಕ್ಕೆ ಅಮೆರಿಕ ಪ್ರವಾಸ
- 1983 ಗುರು ಬಸವಣ್ಣನವರ ಜೀವನ ಚರಿತ್ರೆ ಆಧರಿಸಿ ಕ್ರಾಂತಿ ಯೋಗಿ ಬಸವಣ್ಣ ಚಲನಚಿತ್ರ ನಿರ್ಮಾಣ
2002ರಲ್ಲಿ ಬಸವ ಕಲ್ಯಾಣದಲ್ಲಿ ಅಲ್ಲಮಪ್ರಭು ಶೂನ್ಯಪೀಠವನ್ನು ಸ್ಥಾಪಿಸಿ 12ನೇ ಶತಮಾನದ ಶೂನ್ಯಪೀಠ ಪರಂಪರೆಯನ್ನು ಮು೦ದುವರೆಸಿಕೊ೦ಡು ಬರುತ್ತಿದ್ದಾರೆ; ಮಾತ್ರವಲ್ಲ ಬಸವ ಕಲ್ಯಾಣದಲ್ಲಿ 108 ಅಡಿ ವಿಶ್ವಗುರು ಬಸವಣ್ಣನವರ ಮೂತಿ೯ಯನ್ನು ಸಹ ಸ್ಥಾಪಿಸಿದ್ದಾರೆ. 2007ರಲ್ಲಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಅಳತ್ ಗ್ರಾಮದಲ್ಲಿರುವ ಅಲ್ಲಮ ಗಿರಿಯಲ್ಲಿ ಅಲ್ಲಮಪ್ರಭು ಯೋಗಪೀಠವನ್ನು ಸ್ಥಾಪಿಸಿದ್ದಾರೆ. 2006ರಲ್ಲಿ ರಾಷ್ಟ್ರದ ರಾಜಧಾನಿ ನವ ದೆಹಲಿಯಲ್ಲಿ ಬಸವ ಧರ್ಮ ಪೀಠದ ಶಾಖೆಯನ್ನು ತೆರೆದು ಬಸವ ಮಂಟಪವನ್ನು ಸ್ಥಾಪಿಸಿದ್ಧಾರೆ.
Discussion about this post