ಶಿವಮೊಗ್ಗ: ಶಿವಮೊಗ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 282 ಮತದಾನ ಕೇಂದ್ರಗಳ ಮತದಾರರ ಜಾಗೃತಿ ಸಮಿತಿಯ ಸಮಾವೇಶವನ್ನು ಮಾರ್ಚ್ 19ರ ನಾಳೆ ನಗರದ ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ತಿಳಿಸಿದ್ದಾರೆ.
ಮತದಾರರಲ್ಲಿ ಜಾಗೃತಿಯನ್ನು ಮೂಡಿಸಲು ಎಲ್ಲಾ ಮತಗಟ್ಟೆ ವ್ಯಾಪ್ತಿಯಲ್ಲಿ ಮತದಾರರ ಜಾಗೃತಿ ಸಮಿತಿಗಳನ್ನು ಈಗಾಗಲೇ ರಚಿಸಲಾಗಿದೆ. ಮತದಾರರ ಜಾಗೃತಿ ಕುರಿತಾಗಿ ಕೈಗೊಂಡಿರುವ ಕ್ರಮಗಳು, ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಮತಗಟ್ಟೆ ಸಂಖ್ಯೆ 1ರಿಂದ 140ರವರೆಗಿನ ವ್ಯಾಪ್ತಿಯ ಸಮಿತಿ ಸದಸ್ಯರ ಸಮಾವೇಶವನ್ನು ಬೆಳಿಗ್ಗೆ 10ರಿಂದ 12ರವರೆಗೆ, 141ರಿಂದ 282ರವರೆಗಿನ ಮತಗಟ್ಟೆ ವ್ಯಾಪ್ತಿಯ ಸದಸ್ಯರ ಸಮಾವೇಶ ಮಧ್ಯಾಹ್ನ 12ರಿಂದ ಸಂಜೆ 5ರವರೆಗೆ ನಡೆಸಲಾಗುವುದು.
ಸಮಾವೇಶದಲ್ಲಿ ಎಲ್ಲರೂ ಮತ ಚಲಾಯಿಸಲು ಕೈಗೊಳ್ಳಬೇಕಾದ ಕ್ರಮಗಳು, ಮಾದರಿ ನೀತಿ ಸಹಿಂತೆ ಕುರಿತು ಅರಿವು ಮೂಡಿಸುವುದು, ನೀತಿ ಸಹಿಂತೆ ಉಲ್ಲಂಘನೆಗಳ ಬಗ್ಗೆ ದೂರುಗಳನ್ನು ನೀಡಲು ಪ್ರೇರೇಪಿಸುವುದು, ಶಾಂತಿಯುತ ಮತದಾನಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದವರು ಹೇಳಿದ್ದಾರೆ.
(ವರದಿ: ಡಾ.ಸುಧೀಂದ್ರ)
Discussion about this post