ಬೆಂಗಳೂರು: ಸಂಗೀತ ಪ್ರಿಯರಿಗೆ ಸಂಗೀತದ ರಸದೌತಣ ಉಣ ಬಡಿಸುವ ಉದ್ದೇಶದಿಂದ `ಸ್ಪ್ಲೆಂಡರ್ ಆಫ್ ಮಾಸ್ಟರ್ಸ್’ ಸಂಗೀತೋತ್ಸವ ಕಾರ್ಯಕ್ರಮವನ್ನು ಫೆಬ್ರವರಿ 22 ಸಂಜೆ 6:45 ಕ್ಕೆ ನಗರದ ಚೌಡಯ್ಯ ಸಭಾಂಗಣದಲ್ಲಿ ಏರ್ಪಡಿಸಿದೆ.
ಸಂಗೀತೋತ್ಸವದಲ್ಲಿ ಕಲಾವಿದರಾದ ಡಾ. ಉಮಾಯಾಲ್ಪುರಮ್ ಕೆ. ಶಿವರಾಮನ್ ಅವರು ಮೃದಂಗ ವಾದ್ಯವನ್ನು ನುಡಿಸಲಿದ್ದು, ಜಯಂತಿ ಕುಮಾರೇಶ್ ವೀಣೆಯನ್ನು ಹಾಗೂ ಆರ್. ಕುಮಾರೇಶ್ ಅವರು ವಯೊಲಿನ್ ನುಡಿಸಲಿದ್ದಾರೆ. ಗಾಯನದಲ್ಲಿ ಅಶ್ವಿನಿ ಭಿಂದೆ ದೇಶಪಾಂಡೆ ಅವರೊಂದಿಗೆ ಸಂಜೀವ್ ಅಭಯಂಕರ್ ಅವರು ಸಂಗೀತ ಕಛೇರಿಯನ್ನು ನಡೆಸಿಕೊಡಲಿದ್ದಾರೆ.
ಸ್ಪ್ಲೆಂಡರ್ ಆಫ್ ಮಾಸ್ಟರ್ಸ್’ನಲ್ಲಿ ಖ್ಯಾತ ಸಂಗೀತಗಾರರು ಭಾರತೀಯ ಶಾಸ್ತ್ರೀಯ ಸಂಗೀತದ ಪಾಂಡಿತ್ಯವನ್ನು ಉತ್ಸವದಲ್ಲಿ ಪ್ರದರ್ಶಿಸಲಿದ್ದಾರೆ. ಈ ಉತ್ಸವವು ವರ್ಷದಿಂದ ವರ್ಷಕ್ಕೆ ಕೆಲವು ವಿಶಿಷ್ಟವಾದ ಆಯಾಮವನ್ನು ಪಡೆದುಕೊಳ್ಳುತ್ತಿದೆ. ಅಲ್ಲದೇ ದೇಶದ ವಿವಿಧ ನಗರಗಳಲ್ಲಿ ನಡೆದ ಈ ಸಂಗೀತೋತ್ಸವದಿಂದ ಸಂಗೀತ ಪ್ರಿಯರಿಗೆ ವಿಶೇಷ ಅನುಭವವನ್ನು ನೀಡುತ್ತಾ ಬಂದಿದೆ. ಅದೇ ರೀತಿ 11 ನೇ ಆವೃತ್ತಿಯ `ಸ್ಪ್ಲೆಂಡರ್ ಆಫ್ ಮಾಸ್ಟರ್ಸ್’ ಸಂಗೀತೋತ್ಸವದಲ್ಲಿ ವಿಭಿನ್ನವಾದ ಸಂಗೀತ ಕಛೇರಿಗಳನ್ನು ಪರಿಚಯಿಸಲಾಗುವುದು. ವಿಶೇಷವಾಗಿ ಸಂಗೀತಗಾರರು ಜುಗಲ್ ಬಂದಿ ಮತ್ತು ಏಕವ್ಯಕ್ತಿ ಪಾಂಡಿತ್ಯವನ್ನು ಇಲ್ಲಿ ಪ್ರದರ್ಶಿಸಲಿದ್ದಾರೆ.
ಈ ಸಂಗೀತೋತ್ಸವವು ಮೊದಲು ಮುಂಬೈನಲ್ಲಿ ಆರಂಭವಾಗಲಿದ್ದು, ಫೆಬ್ರವರಿ 22 ರಂದು ಬೆಂಗಳೂರಿನಲ್ಲಿ ಪ್ರದರ್ಶನಗೊಂಡು ನಂತರ ಫೆಬ್ರವರಿ 24 ರಂದು ಪುಣೆಯಲ್ಲಿ ಕಲಾವಿದರ ವಿಶೇಷ ಸಂಯೋಜನೆಯೊಂದಿಗೆ ಪ್ರದರ್ಶನಗೊಳ್ಳಲಿದೆ.
Discussion about this post