ಬೆಂಗಳೂರು: ಐಎಎಸ್ ದರ್ಜೆಯ ಮೂವರು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಇಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇಂಡಿ ಉಪವಿಭಾಗಾಧಿಕಾರಿ ಡಾ.ಪಿ. ರಾಜಾ ಅವರನ್ನು ಕಲಬರಗಿ ಜಿಲ್ಲಾ ಪಂಚಾಯತ್ ಡೆಪ್ಯೂಟಿ ಸೆಕ್ರೆಟರಿ ಆಗಿ ವರ್ಗಾವಣೆ ಮಾಡಲಾಗಿದ್ದು, ಸದ್ಯ ಜಿಪಂ ಸಿಇಒ ಆಗಿಯೂ ಉಸ್ತುವಾರಿಯಾಗಿ ಅಧಿಕಾರ ವಹಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಹುದ್ದೆ ನಿರೀಕ್ಷೆಯಲ್ಲಿದ್ದ ಐಎಎಸ್ ಅಧಿಕಾರಿ ಕೆ. ಆನಂದ್ ಅವರನ್ನು ಇಂಡಿ ಉಪವಿಭಾಗಾಧಿಕಾರಿಯನ್ನಾಗಿ ನಿಯೋಜಿಸಲಾಗಿದೆ. ಕಲಬುರಗಿ ಜಿಪಂ ಸಿಇಒ ಆಗಿದ್ದ ರಾಣಿ ಅವರನ್ನು ವರ್ಗಾವಣೆ ಮಾಡಲಾಗಿದ್ದ ಅವರಿಗೆ ಇನ್ನೂ ಹುದ್ದೆ ತೋರಿಸಿಲ್ಲ.
Discussion about this post