Thursday, March 30, 2023
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ

ಕಾವೇರಿ: ನೀರು ಹರಿಸುವ ನಿರ್ಣಯ ಕೈಗೊಂಡ ವಿಧಾನಮಂಡಲ

October 3, 2016
in ಜಿಲ್ಲೆ
0 0
0
Share on facebookShare on TwitterWhatsapp
Read - 3 minutes

ಬೆಂಗಳೂರು, ಅ.3: ಅಧಿವೇಶನದ ಸಂದರ್ಭದಲ್ಲಿ ಸೇರಿದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಕಳೆದ ಸೆಪ್ಟೆಂಬರ್ 23ರಂದು ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಕೈಗೊಂಡ ನಿರ್ಣಯವನ್ನು ಮಾರ್ಪಾಡು ಮಾಡಿ ನೀರು ಹರಿಸುವ ನಿರ್ಣಯ ಕೈಗೊಳ್ಳುವ ತೀರ್ಮಾನವನ್ನು ಕೈಗೊಳ್ಳಲಾಯಿತು.

ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಕೇಂದ್ರ ಸರ್ಕಾರ ಆಕ್ಷೇಪಣೆ ಸಲ್ಲಿಸಿರುವುದರಿಂದ ಸದ್ಯಕ್ಕೆ ಈ ಆತಂಕದಿಂದ ದೂರವಾಗಿರುವ  ರಾಜ್ಯಸರ್ಕಾರ, ನ್ಯಾಯಾಂಗದ ಆದೇಶವನ್ನು ಪಾಲನೆ ಮಾಡಲು ಮುಂದಾಗಿದ್ದು, ಸೆ.23ರಂದು ಕಾವೇರಿ ಜಲಾಶಯಗಳಲ್ಲಿರುವ ನೀರನ್ನು ಕುಡಿಯುವ ನೀರಿಗೆ ಬಳಕೆ ಮಾಡಿಕೊಳ್ಳಲು ಮಾತ್ರ ಎಂಬ ನಿರ್ಣಯ ಬದಲಿಸಿ ನೀರು ಬಿಡುಗಡೆ ಮಾಡುವ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಯಿತು.

ಇಂದು ವಿಧಾನಸಭೆ ಅಧಿವೇಶನ ಕಲಾಪ ಮುಂದೂಡಿದಾಗ ಸ್ಪೀಕರ್ ಕಚೇರಿಯಲ್ಲಿ ಈ ಬಗ್ಗೆ ಚರ್ಚಿಸಿದಾಗ ಬಿಜೆಪಿಯವರು ಈ ಹಿಂದೆ ಕೈಗೊಂಡ ನಿರ್ಣಯಕ್ಕೆ ಬದ್ಧರಿರಬೇಕೆಂದು ಹೇಳಿದ್ದರು. ಜೆಡಿಎಸ್ ನಾಯಕರು ಯಾವುದೇ ನಿರ್ಣಯ ಕೈಗೊಂಡರೂ ಒಮ್ಮತದ ನಿರ್ಣಯ ಇರಬೇಕು ಎಂಬ ನಿಲುವು ವ್ಯಕ್ತಪಡಿಸಿದರು.

ಕಾನೂನು ತಂಡದ ವೈಫಲ್ಯಗಳು ಇಂದಿನ ಅಧಿವೇಶನದ ಪ್ರಮುಖಾಂಶಗಳು:

ನ್ಯಾಯಾಲಯದ ಆದೇಶ, ನೀರಿನ ಕೊರತೆ ಮತ್ತು ಕಾನೂನು ತಂಡದ ವೈಫಲ್ಯಗಳು ಇಂದಿನ ವಿಶೇಷ ಅಧಿವೇಶನದ ಪ್ರಮುಖ ಅಂಶಗಳಾಗಿದ್ದವು.

ಪ್ರತಿಪಕ್ಷಗಳು ಉಭಯ ಸದನಗಳಲ್ಲೂ ನೀರು ಬಿಡಬಾರದೆಂಬ ತೀರ್ಮಾನಕ್ಕೆ ಬದ್ಧವಾಗಬೇಕು ಮತ್ತು ಕಾನೂನು ತಜ್ಞರ ವೈಫಲ್ಯವನ್ನು ಪರಿಗಣಿಸಿ ಬದಲಾಯಿಸಬೇಕು ಎಂದು ಪದೇ ಪದೇ ಒತ್ತಾಯಿಸಿದ್ದರು. ಪರಿಷತ್ ನಲ್ಲಿ ಈಶ್ವರಪ್ಪ ನಾರಿಮನ್ ವೈಫಲ್ಯ ಎಂದು ಪದೇ ಪದೇ ಟೀಕಿಸಿ ಬದಲಾಯಿಸುವಂತೆ ಒತ್ತಾಯಿಸಿದರು. ಸಚಿವ ಜಯಚಂದ್ರ ನಿರ್ಣಯ ಮಂಡನೆ ನಂತರ  ಬೆಳಗ್ಗೆಯಿಂದಲೂಪ್ರತಿಪಕ್ಷ ನಾಯಕರು ಕಾವೇರಿ ಬಿಕ್ಕಟ್ಟಿನ ಮತ್ತು ನೀರಿನ ಇಕ್ಕಟ್ಟಿನ ಪರಿಸ್ಥಿತಿಯನ್ನು ತಮ್ಮ ತಮ್ಮ ಅನುಭವಕ್ಕನುಸಾರವಾಗಿ ವಿಶ್ಲೇಷಿಸಿದರು .ಜೊತೆಗೆ ಈ ಸಂಕಟವನ್ನು ಹಂಚಿಕೊಂಡರು.

ಸರ್ಕಾರದ ಬೆಂಬಲಕ್ಕೆ ನಿಲ್ಲುವುದಾಗಿ ಬಿಜೆಪಿ ನಾಯಕರು ಹೇಳಿದರೆ, ಮಾಜಿ ಪ್ರಧಾನಿ ದೇವೇಗೌಡರ ಪ್ರಯತ್ನಗಳನ್ನು ಕುಮಾರಸ್ವಾಮಿ ಬಿಡಿಸಿಟ್ಟರು. ಮನೆಯಲ್ಲಿಯೂ ಹಬ್ಬದ ಸಂದರ್ಭದಲ್ಲಿಯೂ ದೇವೇಗೌಡರು ತಮ್ಮೊಂದಿಗೆ ತೋಡಿಕೊಂಟ ಸಂಕಟವನ್ನು ವಿವರಿಸಿದರು.

ಪ್ರಮುಖ ಪ್ರತಿಪಕ್ಷಗಳ ನಾಯಕರಾಗಿರುವ ಜಗದೀಶ್ ಶೆಟ್ಟರ್ ಹಾಗೂ ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿಯೂ ಆಗಿರುವುದರಿಂದ ಕಾವೇರಿ ಸಂಕಷ್ಟಕ್ಕೆ ತಮ್ಮ ನೋವು ತೋಡಿಕೊಂಡರಾದರೂ ನಿರ್ಧಿಷ್ಟ ಪರಿಹಾರ ಸೂಚಿಸಲಿಲ್ಲ. ಒಟ್ಟಾರೆ ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗದಂತೆ ಮತ್ತು ರಾಜ್ಯದ ಹಿತರಕ್ಷಣೆಯಾಗುವಂತೆ ಕ್ರಮ ಕೈಗೊಳ್ಳುವ ಅಧಿಕಾರವನ್ನು ಒಂದು ಹಂತದಲ್ಲಿ ಸರ್ಕಾರಕ್ಕೆ ನೀಡಿದಂತಾಗಿತ್ತು. ಪರಿಣಾಮವಾಗಿ ಪ್ರಸ್ತುತ ಜಲಾಶಯಗಳಲ್ಲಿನ ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಂಡು ಮತ್ತು ರೈತರ ಹಿತರಕ್ಷಣೆ ಗಮನದಲ್ಲಿಟ್ಟುಕೊಂಡು ನೀರು ಬಳಕೆ ಮಾಡುವ ಒಂದು ಸಾಲಿನ ನಿರ್ಣಯವನ್ನು ಈ ವಿಶೇಷ ಅಧಿವೇಶನ ಅಂಗೀಕರಿಸಿತು.

ಸಿಎಂ ಉತ್ತರ:

ಪ್ರತಿಪಕ್ಷಗಳ ನೀರು ಬಿಡದ ಪಟ್ಟಿಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆಯ ಅಪಾಯ ಮತ್ತು ನೀರಿ ಲಭ್ಯತೆ ಬಗ್ಗೆ ವಿವರಿಸಿದರು. ಅಲ್ಲದೇ ತ್ರಿಸದಸ್ಯ ಪೀಠದ ಮುಂದೆ ಇದೇ 18 ರಂದು ಕಾವೇರಿ ನಿರ್ವಹಣಾ ಮಂಡಳಿ ಕುರಿತ ವಿಚಾರಣೆ ಬರಲಿದೆ. ಆಗ ನಾರಿಮನ್ ಅವರ ಅವಶ್ಯಕತೆ ಹೆಚ್ಚಾಗಿರುತ್ತದೆ ಎಂದು ಸಿಎಂ ಸ್ಪಷ್ಟಪಡಿಸಿದರು.

ಇದರೊಂದಿಗೆ ಹಿಂದೆ ಕೈಗೊಂಡ ನಿರ್ಣಯವನ್ನು ವಿವರಿಸಿ ಕುಡಿಯುವ ನೀರು ಅವಶ್ಯಕತೆಗಿಂತ ಹೆಚ್ಚಾಗಿರುವ ನೀರನ್ನು ಲಭ್ಯತೆಯ ಅನುಗುಣವಾಗಿ ರೈತ ಹಿತ ರಕ್ಷಣಕ್ಕೆ ಬಿಡಬೇಕಾಗುತ್ತದೆ ಎಂಬ ಹೇಳಿಕೆ ಮೂಲಕ ಆದೇಶದ ಉಲ್ಲಂಘನೆಯಿಂದ ಪಾರಾಗಿ ರೈತರ ಹಿತವನ್ನೂ ಕಾಯುವ ಸಾಧ್ಯತೆಯನ್ನು ತಿಳಿಸಿದರು.

ನಾಲ್ಕೂ ಜಲಾಶಯದಿಂದ ಒಟ್ಟು ನೀರಿನ ಸಂಗ್ರಹ 27.6 ಟಿಎಂಸಿ ಮಾತ್ರ ಇದೆ.ಈ ಬಗ್ಗೆ ಈಗಾಗಲೇ ಸದನದಲ್ಲಿ ಚರ್ಚೆ ಮಾಡಿದ್ದೇವೆ. ಜೂನ್ ವರೆಗೆ ಕುಡಿಯುವ ನೀರಿಗೆ ಮಾತ್ರ ಆಗಲಿದೆ. ನೀರಾವರಿಗೂ ನೀರು ಬಿಡಲು ಆಗುವುದಿಲ್ಲ, ತಮಿಳುನಾಡಿಗೂ ಬಿಡಲು ಆಗುವುದಿಲ್ಲ ಎಂಬ ಅಭಿಪ್ರಾಯವನ್ನು ಈ ಹಿಂದಿನ ಅಧಿವೇಶನದಲ್ಲಿ ವ್ಯಕ್ತಪಡಿಸಿದ್ದೆವು.

ಸುಪ್ರೀಂಕೋರ್ಟ್ ಸೆ.20 ರ ಆದೇಶದಲ್ಲಿ ಪ್ರತಿದಿನ ಸೆ.27 ರವರೆಗೆ 6 ಸಾವಿರ ಕ್ಯೂಸೆಕ್ ನೀರು ಬಿಡಲು ಆದೇಶಿಸಿತು. ಅದರ ಜೊತೆಗೆ ಕಾವೇರಿ ನಿರ್ವಹಣಾ ಮಂಡಳಿ ರಚನೆಗೂ ಆದೇಶಿಸಿತ್ತು.ಕೂಡಲೇ ಸೆ.21 ರಂದೇ ಸರ್ವಪಕ್ಷಗಳ ಸಭೆ ನಡೆಸಿದೆವು. ಸಭೆಯಲ್ಲಿ ನೀರು ಬಿಡಲು ಸಾಧ್ಯವಿಲ್ಲವೆಂಬ ಸರ್ವಸಮ್ಮತ ಸಲಹೆ ನೀಡಲಾಯಿತು.ಸೆ.23 ರಂದು ಕುಡಿಯಲು 24.11 ಟಿಎಂಸಿ ನೀರು ಬೇಕಾಗಿತ್ತು, ಇದನ್ನು ಲೆಕ್ಕ ಹಾಕಿದ್ದೆವು.ಇದೆಲ್ಲವೂ ಲೆಕ್ಕ ಹಿಡಿದರೆ ಇರುವ 27 ಟಿಎಂಸಿ ನೀರೂ ಸಾಕಾಗುವುದಿಲ್ಲ. ಅದಕ್ಕಾಗಿ ಸೆ.23 ರಂದು ಕುಡಿಯಲು ಮಾತ್ರವೆಂಬ ನಿರ್ಣಯ ಮಾಡಿದ್ದೆವು.

ಕಾವೇರಿ ಕೊಳ್ಳದ 600 ಹಳ್ಳಿಗಳು ಸೇರಿ ಬೆಂಗಳೂರಿಗೂ ಕುಡಿಯುವ ನೀರು ನೀಡುವ ಉದ್ದೇಶ ನಮಗಾಗಿತ್ತು.ಕೋರ್ಟ್ ಜೊತೆ ಸಂಘರ್ಷ ಮಾಡುವ ಉದ್ದೇಶ ನಮಗಿಲ್ಲ, ಯಾವತ್ತೂ ಮಾಡಿಲ್ಲ, ನೀರನ್ನೂ ನಾವು ಬಿಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.

ನಾವು ಎಂದಿಗೂ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಎಂದಿಗೂ ಹೇಳಿಲ್ಲ, 2006-07 ರಲ್ಲಿ353 ಟಿಎಂಸಿ ನೀರು ಕೊಟ್ಟಿದ್ದೇವೆ. 2008-09 ರಲ್ಲಿ 210 ಟಿಎಂಸಿ, 2010-11 ರಲ್ಲಿ 211 ಟಿಎಂಸಿ ,2011-12 ರಲ್ಲಿ 211 ಟಿಎಂಟಿ, 2012-13 ರಲ್ಲಿ 100 ಟಿಎಂಸಿ ನೀರು ಬಿಟ್ಟಿದ್ದೇವೆ. ಮತ್ತೆ 2013-14 ರಲ್ಲಿ 259 ಟಿಎಂಸಿ, 2014-15 ರಲ್ಲಿ 229 ಟಿಎಂಸಿ, ಕಳೆದ ವರ್ಷ ಅಂದರೆ 2015-16 ರಲ್ಲಿ 250 ಟಿಎಂಸಿ ನೀರು ಬಿಟ್ಟಿದ್ದೇವೆ ಹಾಗೂ ಪ್ರಸ್ತುತ ವರ್ಷದಲ್ಲಿ 53.2 ಟಿಎಂಸಿ ನೀರು ಬಿಟ್ಟಿದ್ದೇವೆ ಎಂದು ಮುಖ್ಯಮಂತ್ರಿಗಳು ಅಂಕಿ-ಅಂಶದೊಂದಿಗೆ ವಿವರಿಸಿದರು.

1 ಲಕ್ಷ 70 ಸಾವಿರ ಕ್ಯೂಸೆಕ್ ನೀರನ್ನು ಈವರೆಗೆ ತಮಿಳುನಾಡಿಗೆ ಬಿಟ್ಟಿದ್ದೇವೆ, ನಮಗೆ ಕುಡಿಯಲು ನೀರಿದ್ದಾಗ ಮಾತ್ರ ಅಸಹಾಯಕತೆಯಿಂದ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಾಗಲಿಲ್ಲ, ಕೋರ್ಟ್ ಆದೇಶ ವಿರುದ್ಧ ನಾವೇನು ಮಾಡಿದ್ದೇವೆ ಎಂದು ಪ್ರಶ್ನಿಸಿದರು. ಎಲ್ಲಾ ವರ್ಷಗಳಲ್ಲೂ ಕೂಡ 192 ಟಿಎಂಸಿ ಗಿಂತ ಹೆಚ್ಚು ನೀರು ಹೋಗಿದೆ. ಒಟ್ಟಾರೆ  ನಾವು ಬಿಡಬೇಕಿದ್ದ ನೀರಿಗಿಂತ 1400 ಟಿಎಂಸಿ ನೀರು ಹೆಚ್ಚು ಹೋಗಿದೆ. ಕರ್ನಾಟಕ ಒಕ್ಕೂಟದ ವ್ಯವಸ್ಥೆಯಲ್ಲಿದೆ.ನಮಗೆ ಅನ್ಯಾಯವಾಗಿದ್ದರೂ ನೀರು ಬಿಟ್ಟಿದ್ದೇವೆ.

ಕುಡಿಯುವ ನೀರು ಸಂವಿಧಾನದ ಹಕ್ಕು, ಕುಡಿಯುವ ನೀರಿಗೆ ಮೊದಲು ಆದ್ಯತೆ ನೀಡಲಾಗಿದೆ.ಮೊದಲು ಕುಡಿಯಲು, ನಂತರ ಬೆಳೆ, ನಂತರ ವಿದ್ಯುತ್ ಗೆ ಆದ್ಯತೆ ನೀಡಲಾಗಿದೆ. ನಾವು ಅದನ್ನೇ ಪಾಲಿಸಿದ್ದೇವೆ ಎಂದು ಹೇಳಿದರು. ಸುಪ್ರೀಂನಿಂದ ಈವರೆಗ 6 ಆದೇಶಗಳು ಬಂದಿವೆ. ನೀರು ನೀಡು ಬಿಡಿ ಎಂದೇ ಹೇಳಲಾಗಿದೆ. 18 ಲಕ್ಷದ 85 ಸಾವಿರ ಎಕರೆಗೆ ಬೆಳೆ ಬೆಳೆಯಲು ಟ್ರಿಬ್ಯುನಲ್ ಅವಕಾಶ ಮಾಡಿಕೊಟ್ಟಿದೆ. ಆದರೆ ಮಳೆ ಕೊರತೆಯಿಂದ ಈ ಬಾರಿ ಕೇವಲ  6 ಲಕ್ಷ 15 ಸಾವಿರ ಮಾತ್ರ ಬಿತ್ತನೆ ಮಾಡಲಾಗಿದೆ. ಮಳೆ ಕೊರತೆಯಿಂದ ರೈತರಿಗೆ ಬೆಳೆ ಬೆಳೆಯದಂತೆ ಮನವಿ ಮಾಡಿದ್ದೆವು. 1 ಲಕ್ಷದ 88 ಸಾವಿರ ಎಕರೆಗೆ ಹೇಮಾವತಿ ನಾಲೆ ಪ್ರದೇಶದಲ್ಲಿ ನೀರು ಕೊಡಲಾಗಲಿಲ್ಲ. ಬೆಳೆ ಒಣಗಿಹೋಯಿತು, ರೈತರು ತುಂಬಾ ಸಂಕಷ್ಟ ಪರಿಸ್ಥಿತಿ ಎದುರಿಸಿದರು. ಈಗ 4 ಲಕ್ಷದ 26 ಸಾವಿರ ಎಕರೆ ಪ್ರದೇಶದಲ್ಲಿ ಮಾತ್ರ ಬೆಳೆ ಬೆಳೆಯಲಾಗಿದೆ. ಇದಕ್ಕೂ ಸೆ.17 ಕ್ಕೆ ಮಾತ್ರ ನೀರು ಹರಿಸಲಾಗಿದೆ ಎಂದು ಸವಿವರವಾಗಿ ಹೇಳಿ, ಚಕಿತಗೊಳಿಸಿದರು.

ಈಗ ಬದಲಾದ ಪರಿಸ್ಥಿತಿ ಇದೆ- ಸಿಎಂ

ಅಲ್ಪಸ್ವಲ್ಪ ಮಳೆಯಿಂದಾಗಿ ಸೆ.23 ಕ್ಕೆ ಹೋಲಿಸಿದರೆ ಇಂದಿನ ಜಲಾಶಯದ ನೀರಿನ ಮಟ್ಟ 34.13 ಟಿಎಂಸಿ ಇದೆ.ಒಟ್ಟು ಆರೂವರೆ ಟಿಎಂಸಿ ಹೆಚ್ಚಾಗಿದೆ. ನಮ್ಮಲ್ಲಿ ನೀರಿರುವ ಬಗ್ಗೆ ಸುಪ್ರೀಂಕೋರ್ಟ್ ತಿಳಿದಿದೆ.ತಮಿಳುನಾಡಿಗೂ ಗೊತ್ತಿದೆ ಎಂದು ನೇರ ಮಾತಕತೆಯ ತಮ್ಮ ಶೈಲಿಯಲ್ಲಿ ನುಡಿದ ಸಿಎಂ ಸಿದ್ದರಾಮಯ್ಯ ನಾರಿಮನ್ ಸಲಹೆ ನೀಡಿದರೂ ನಿರ್ಣಯ ಕೈಗೊಂಡಿದ್ದರಿಂದ ನೀರು ಬಿಡಲಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದೆವು. ನೀರು ಬಿಡಲಾರದ ಸ್ಥಿತಿ ನಿರ್ಮಾಣವಾಗಿರುವುದರಿಂದ ನೀರು ಬಿಡಲಾಗಿಲ್ಲ, ಇದೀಗ ರೈತರ ಬೆಳೆ ಒಣಗುತ್ತಿರುವುದರಿಂದ ಬೆಳೆಗಳಿಗೆ ನೀರು ಬಿಡಲಾಗುವುದು ಎಂದು ಹೇಳಿದರು.

ಸೆ.29 ರಂದು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಅವರು ಉಭಯ ರಾಜ್ಯಗಳ ಸಭೆ ನಡೆಸಿದರು.ಸಭೆಯಲ್ಲಿ ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ ಭಾಗವಹಿಸಿದ್ದರು.ನಮ್ಮ ಬಳಿ ನೀರಿಲ್ಲ, ನಾವು ಸದನದಲ್ಲಿ ನಿರ್ಣಯ ಕೈಗೊಂಡಿದ್ದೇವೆ ಎಂಬ ಬಗ್ಗೆ ಸಭೆಯ ಮುಂದಿಡಲಾಯಿತು. ಆದರೆ ತಾವು ನಿರ್ಧಾರ ಕೈಗೊಳ್ಳಲು ಬರುವುದಿಲ್ಲ, ನ್ಯಾಯಾಲಯಕ್ಕೆ ವರದಿ ಮಂಡಿಸುತ್ತೇವೆ ಎಂದು ಹೇಳಿದರು. ಅಂತೆಯೇ ವರದಿ ನೀಡಿದರು. ಆದರೆ ಸುಪ್ರೀಂಕೋರ್ಟ್ ಸೆ.30 ರಂದು ನಾಲ್ಕು ದಿನದಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಲು ಆದೇಶಿಸಿತು. ಇನ್ನು ಈ ಮಂಡಳಿಗೆ ತಮ್ಮ ಪ್ರತಿನಿಧಿಗಳು ಕಳುಹಿಸಲು ಹೇಳಿತು. ಆದರೆ ಸರ್ವಪಕ್ಷ ಸಭೆಯ ಸಲಹೆಯಂತೆ ನಮ್ಮ ಪ್ರತಿನಿಧಿಗಳನ್ನು ಕಳುಹಿಸಿಕೊಡಲಾಗಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದರು.

ಸೆ.30 ರಂದು ಸುಪ್ರೀಂಕೋರ್ಟ್ ತೀರ್ಪು ತುಂಬಾ ಖಾರವಾಗಿತ್ತು ಎಂದರು.

ಹೀಗಾಗಿ ಅಂದು ನೀರು ಬಿಡಲಾಗಲಿಲ್ಲ. ಇಂದು ಬದಲಾದ ಸನ್ನಿವೇಶದಲ್ಲಿ ಅಲ್ಪಸ್ವಲ್ಪ ಮಳೆಯಿಂದಾಗಿ ಆರೂವರೆ ಟಿಎಂಸಿ ನೀರಿನ ಸಂಗ್ರಹವನ್ನು ಇತರೆ ಕಾರ್ಯಗಳಿಗೆ ಬಳಸಬಹುದಾಗಿದೆ ಹೀಗಾಗಿ ಕೃಷಿಗಾಗಿ ನೀರು ನೀಡಬೇಕಾದ ಅಗತ್ಯವಿದೆ ಎಂದು ಹೇಳಿ, ನಿರ್ಣಯವನ್ನು ಸಮ್ಮತಿಸಿದರು.

ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ನಿರ್ಣಯವನ್ನು ಮತಕ್ಕೆ ಹಾಕಿದಾಗ ವಿಧಾನಸಭೆಯಲ್ಲಿ ಅವಿರೋಧವಾಗಿ ಸದಸ್ಯರು ಅಂಗೀಕರಿಸಿದರು. ಇತ್ತ ವಿಧಾನಪರಿಷತ್ ನಲ್ಲಿ ವಿರೋಧದ ಹೊರತಾಗಿಯೂ ನಿರ್ಣಯ ಅಂಗೀಕಾರವಾಯಿತು.ನಿರ್ಣಯದ ಕೊನೇ ಸಾಲಿನಲ್ಲಿ ರಾಜ್ಯದ ಹಿತದೃಷ್ಟಿಯೆಂದು ಸೇರಿಸಬೇಕೆಂದು ಪ್ರತಿಪಕ್ಷ ನಾಯಕರಾದ ಕೆ.ಎಸ್. ಈಶ್ವರಪ್ಪ, ಪುಟ್ಟಣ್ಣಯ್ಯ ಒತ್ತಾಯಿಸಿದರು. ನಿರ್ಣಯ ಅಂಗೀಕಾರದ ನಂತರ ನಂತರ ಉಭಯ ಸದನಗಳನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಯಿತು.

ನಾರಿಮನ್ ಸಮರ್ಥನೆ: 

ನನ್ನ ಪತ್ರವನ್ನು ನ್ಯಾಯಾಲಯದ ಮುಂದೆ ಓದಿದ್ದಾರೆ.ಅದನ್ನು ಓದಲು ನಾವೇ ಹೇಳಿದ್ದೆವು. ತಮ್ಮ ಕರ್ತವ್ಯ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು.

ನಾರಿಮನ್ ಅವರು ಕಳೆದ 37 ವರ್ಷಗಳಿಂದ ಕರ್ನಾಟಕದ ಪರ ವಕೀಲರಾಗಿ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ತಮ್ಮದೇ ಗೌರವ ಸಂಪಾದಿಸಿದ್ದಾರೆ. ನಾರಿಮನ್ ನಮ್ಮ ಕಾಲದ ವಕೀಲರಲ್ಲ ದೇವೇಗೌಡರಿಂದ ಹಿಡಿದು ಎಲ್ಲಾ ಅವಧಿಗಳಲ್ಲೂ ಅವರೇ ಸಿಎಂ ಆಗಿದ್ದವರು ಎಂದು ಹೇಳಿದರು. ನೀರು ಬಿಡಲಾಗಿಲ್ಲ ಎಂಬ ಕಾರಣಕ್ಕಾಗಿ ಅವರು ವಾದ ಮಂಡಿಸಲು ಕಷ್ಟಸಾಧ್ಯ ಎಂದು ಹೇಳಿದ್ದರು. ಇದಕ್ಕಾಗಿ ವಾದ ಮಾಡಿಲ್ಲ ಎಂದು ಸಿಎಂ ತಿಳಿಸಿದರು.

ಅಲ್ಲದೇ ಕಾವೇರಿ ವಿವಾದದಲ್ಲಿ ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರಿಗೆ ಧನ್ಯವಾದ ಅರ್ಪಿಸಿದರು.

Previous Post

ಕಾವೇರಿ ನೀರು ರೈತರ ಹಿತಕ್ಕೂ ಬಳಕೆ: ವಿಧಾನಮಂಡಲದಲ್ಲಿ ಪರಿಷ್ಕೃತ ನಿರ್ಣಯ ಅಂಗೀಕಾರ 

Next Post

ಕಾವೇರಿ ವಿವಾದ: ರಾಷ್ಟ್ರಪತಿ ಮಧ್ಯಪ್ರವೇಶಕ್ಕೆ ಕರವೇ ಆಗ್ರಹ

kalpa

kalpa

Next Post

ಕಾವೇರಿ ವಿವಾದ: ರಾಷ್ಟ್ರಪತಿ ಮಧ್ಯಪ್ರವೇಶಕ್ಕೆ ಕರವೇ ಆಗ್ರಹ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/https://kalahamsa.in/services/https://kalahamsa.in/services/

Recent News

ಶಿವಮೊಗ್ಗಕ್ಕೆ ಬರಲಿವೆ ಸಿಆರ್’ಪಿಎಫ್ 6 ತಂಡಗಳು: ಜಿಲ್ಲೆಯಲ್ಲಿ ಎಷ್ಟು ಚೆಕ್ ಪೋಸ್ಟ್ ಸ್ಥಾಪನೆ?

March 29, 2023

ಪರಿಸರವಾದಿಗಳ ಪ್ರಯತ್ನಕ್ಕೆ ಸಿಕ್ಕ ಫಲ: ತ್ಯಾಜ್ಯ ಸಂಸ್ಕರಣಾ ಘಟಕಗಳ ಮರು ಕಾರ್ಯಾರಂಭಕ್ಕೆ ಸಿದ್ಧತೆ

March 29, 2023

ಶಿವಮೊಗ್ಗದ ಇಂದಿನ ಸುದ್ಧಿಗಳು | ಒಳ ಮೀಸಲಾತಿ ವಿರೋಧಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ

March 29, 2023

ಚುನಾವಣೆ ಘೋಷಣೆ: ಶಿವಮೊಗ್ಗ ಜಿಲ್ಲೆ ಎಷ್ಟು ಮತದಾರರಿದ್ದಾರೆ? ಎಷ್ಟು ಮತಗಟ್ಟೆಗಳಿವೆ?

March 29, 2023
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಶಿವಮೊಗ್ಗಕ್ಕೆ ಬರಲಿವೆ ಸಿಆರ್’ಪಿಎಫ್ 6 ತಂಡಗಳು: ಜಿಲ್ಲೆಯಲ್ಲಿ ಎಷ್ಟು ಚೆಕ್ ಪೋಸ್ಟ್ ಸ್ಥಾಪನೆ?

March 29, 2023

ಪರಿಸರವಾದಿಗಳ ಪ್ರಯತ್ನಕ್ಕೆ ಸಿಕ್ಕ ಫಲ: ತ್ಯಾಜ್ಯ ಸಂಸ್ಕರಣಾ ಘಟಕಗಳ ಮರು ಕಾರ್ಯಾರಂಭಕ್ಕೆ ಸಿದ್ಧತೆ

March 29, 2023

ಶಿವಮೊಗ್ಗದ ಇಂದಿನ ಸುದ್ಧಿಗಳು | ಒಳ ಮೀಸಲಾತಿ ವಿರೋಧಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ

March 29, 2023
  • About
  • Advertise
  • Privacy & Policy
  • Contact

© 2022 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2022 Kalpa News - All Rights Reserved | Powered by Kalahamsa Infotech Pvt. ltd.

Login to your account below

Forgotten Password?

Fill the forms bellow to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!