Tuesday, May 20, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ

ರಾಯಣ್ಣ ಬ್ರಿಗೇಡ್ ಪೂರ್ವಭಾವಿ ಸಭೆ ಯಶಸ್ವಿ

September 22, 2016
in ಜಿಲ್ಲೆ, ಶಿವಮೊಗ್ಗ
0 0
0
Share on facebookShare on TwitterWhatsapp
Read - 3 minutes

ಶಿವಮೊಗ್ಗ, ಸೆ.22: ರಾಯಣ್ಣ ಬ್ರಿಗೇಡ್ ಆಶಯವೊಂದೇ, ಅದು ಬಿಜೆಪಿ ಸರ್ಕಾರವನ್ನು ಅಸ್ತಿತ್ವಕ್ಕೆ ತರುವುದು. ಯಡಿಯೂರಪ್ಪ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿಸುವುದು ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಮತ್ತೊಮ್ಮೆ ಘೋಷಿಸಿದರು.
ಅ.1ರಂದು ಹಾವೇರಿಯಲ್ಲಿ ನಡೆಯಲಿರುವ ಸಂಗೊಳ್ಳಿರಾಯಣ್ಣ ಬ್ರಿಗೇಡ್‌ನ ಸಮಾವೇಶದ ಸಿದ್ದತಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಯಣ್ಣ ಬ್ರಿಗೇಡ್ ಮೂಲಕ ಬಿಜೆಪಿಯನ್ನು ಬೆಂಬಲಿಸಬೇಕು. ಕಾಂಗ್ರೆಸ್‌ನ ದುರಾಡಳಿತದಿಂದ ಬೇಸತ್ತಿರುವ ಅನೇಕರು ಕಾಂಗ್ರೆಸ್ ಬಿಟ್ಟು ಅನೇಕರು ಬ್ರಿಗೇಡ್‌ಗೆ ಸೇರಿದ್ದಾರೆ. ಹಲವು ಮಠಾಧೀಶರು, ನಿವೃತ್ತ ಅಧಿಕಾರಿಗಳು ನೇರವಾಗಿ ಬಿಜೆಪಿಯನ್ನು ಸೇರದಿರುವವರು ಬ್ರಿಗೇಡ್ ಮೂಲಕ ಬಿಜೆಪಿಯನ್ನು ಕಟ್ಟಲಿದ್ದಾರೆ. ಇದರಿಂದ ಬಿಜೆಪಿ ಮತ್ತಷ್ಟು ಗಟ್ಟಿಯಾಗುತ್ತದೆ. ಇದನ್ನು ನಾವು ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೂ ಮನವರಿಕೆ ಮಾಡಿಕೊಟ್ಟಿದ್ದೇವೆ.
ಕಾಂಗ್ರೆಸ್ ಸರ್ಕಾರ ದಲಿತರಿಗೆ ಯಾವ ನ್ಯಾಯವನ್ನು ನೀಡಿಲ್ಲ ಕೇವಲ ಅವರನ್ನು ತಮ್ಮ ವೋಟ್‌ಬ್ಯಾಂಕ್‌ನ್ನಾಗಿ ಮಾಡಿಕೊಂಡಿದೆಯೇ ವಿನಾ ಯಾವ ಕಲ್ಯಾಣವನ್ನು ಮಾಡಿಲ್ಲ. ಅವರ ಅಭಿವೃದ್ಧಿಯೂ ಆಗಿಲ್ಲ, ದಲಿತರಿಗೆ ಕುಡಿಯಲು ನೀರು ಸಹಾ ಸಿಗದ ಪರಿಸ್ಥಿತಿ ಬಂದಿದೆ. ಅವರ ಸ್ಥಿತಿ ಹೀನಾಯವಾಗುತ್ತಿದೆ. ಸಿದ್ದರಾಮಯ್ಯನವರು ಚುನಾವಣೆ ಬರುತ್ತಿದ್ದಂತೆ ನಾವಿರುವುದು ದಲಿತರ, ಬಡವರ, ಹಿಂದುಳಿದ ವರ್ಗದವರ ಉದ್ದಾರಕ್ಕೆ ಅವರಿಗೆ ನ್ಯಾಯ ದೊರಕಿಸಿಕೊಡುತ್ತೇವೆ ಎಂದು ಹೇಳುತ್ತಾರೆ. ಆದರೆ ಅವರ ಮೂರುವರೆ ವರ್ಷದ ಆಡಳಿತದಲ್ಲಿ ಕೇವಲ ಇವರಿಗೆ ಅನ್ಯಾಯವಾಗಿದೆ ಹೊರತು ಯಾವುದೇ ಸೌಲಭ್ಯವಾಗಲಿ ಸಹಾಯವಾಗಲಿ ಸಿಗುತ್ತಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.


ರಾಯಣ್ಣ ಬ್ರಿಗೇಡ್ ಹುಟ್ಟಿರುವುದೇ ದಲಿತರ, ಹಿಂದುಳಿದವರ ಮತ್ತು ಬಡವರ ಏಳಿಗೆಗಾಗಿ. ಅವರಿಗೆ ಸಿಗಬೇಕಾದ ನ್ಯಾಯ, ಸೌಲಭ್ಯಗಳನ್ನು ದೊರಕಿಸುವುದಕ್ಕಾಗಿ. ದಲಿತರ ಹಿಂದುಳಿದವರ ಮತ್ತು ಬಡವರ ಅಭಿವೃದ್ಧಿ ಮಾಡುವುದೇ ಬಿಜೆಪಿಯ ಗುರಿ. ದಲಿತ, ಹಿಂದುಳಿದ ಮತ್ತು ಬಡವರಿಗೆ ಅನ್ಯಾಯವಾಗಲು ಎಂದಿಗೂ ಬಿಡುವುದಿಲ್ಲ. ಯಾವಾಗ ಕಾಂಗ್ರೆಸ್ ಸರ್ಕಾರ ದಲಿತರನ್ನ ಕಡೆಗಾಣಿಸಿತೋ ಆಗ ನಾವು ಬ್ರಿಗೇಡ್ ಮೂಲಕ ದಲಿತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದೇವೆ. ಆ ಮೂಲಕ ಬಿಜೆಪಿಯನ್ನು ಬೆಳೆಸುತ್ತಿದ್ಧೇವೆ ಎಂದರು.
ರಾಯಣ್ಣ ಬ್ರಿಗೇಡ್‌ನ ಪ್ರಮುಖರಾದ ವಿರೂಪಾಕ್ಷಪ್ಪ, ಹುಲ್ತಿಕೊಪ್ಪ ಶ್ರೀಧರ್, ವಿಶ್ರಾಂತ ಐಎಎಸ್ ಅಧಿಕಾರಿ ಪುಟ್ಟಸ್ವಾಮಿ, ವೆಂಕಟೇಶ ಮೂರ್ತಿ, ನೀಲಮೇಗನಾ, ಕೊಟ್ರೇಸ್, ಸೋಮಶೇಖರ್, ಹೊಳಲೂರು ಜಿಲ್ಲಾಪಂಚಾಯ್ತಿ ಸದಸ್ಯ ಕೆ.ಇ. ಕಾಂತೇಶ್, ವೆಂಕ್ಯಾನಾಯ್ಕ ಸೇರಿದಂತೆ ಹಲವರಿದ್ದರು.

ಈಶ್ವರಪ್ಪ ಹೇಳಿದ್ದು…
*ನಾನು ಎಂದಿಗೂ ಜಾತಿವಾದಿಯಲ್ಲ, ಹಿಂದುತ್ವದ ಪರ
*ಕಾಂಗ್ರೆಸ್‌ನಿಂದ ದಲಿತರಿಗೆ ನ್ಯಾಯ ದೊರೆತಿಲ್ಲ
*ದಲಿತವರ್ಗ ಕಾಂಗ್ರೆಸ್ ಪಾಲಿಗೆ ವೋಟ್‌ಬ್ಯಾಂಕ್
*ನಮ್ಮ ಗುರಿ ದಲಿತೋದ್ಧಾರ, ಬಿಜೆಪಿಗೆ ಬೆಂಬಲ
*ಹಾವೇರಿ ಸಮಾವೇಶಕ್ಕೆ ಬಿಎಸ್‌ವೈ ಬರುತ್ತಾರೆ
*ಬ್ರಿಗೇಡ್ ಸ್ಥಾಪನೆ ಹಿಂದೆ ರಾಜಕೀಯ ಹಿತಾಸಕ್ತಿಯಿಲ್ಲ

ನಮ್ಮ ಮುಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೇ. ಬ್ರಿಗೇಡ್ ಮೂಲಕ ಎಲ್ಲರೂ ಬಿಜೆಪಿಯನ್ನು ಬೆಂಬಲಿಸಬೇಕು. ಹಾವೇರಿಯಲ್ಲಿ ನಡೆಯಲಿರುವ ಸಮಾವೇಶಕ್ಕೆ ತಮ್ಮ ಜೊತೆಗೆ ತಮ್ಮ ತಂಡವನ್ನು ಕರೆದುತರಬೇಕು. ೫೦ ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಆ ಮೂಲಕ ದಲಿತರ, ಹಿಂದುಳಿದವರ ಏಳಿಗೆಗಾಗಿ ನಾವು ದುಡಿಯೋಣ. ಬಿಜೆಪಿ ಅಧಿಕಾರಕ್ಕೆ ಬಂದರೆ ಹಿಂದುಳಿದವರ ಮತ್ತು ದಲಿತ ವರ್ಗಗಳ ಉದ್ದಾರಕ್ಕೆ ಪ್ರಥಮ ಆದ್ಯತೆ. ಹಿಂದುಳಿದವರ, ದಲಿತರ, ಬಡವರ ಶ್ರೇಯೋಭೀವೃದ್ಧಿಗೆ, ಅತಿ ಹೆಚ್ಚು ಹಣ ಬಜೆಟ್‌ನಲ್ಲಿ ಮೀಸಲಿಡಲಾಗುವುದು.
– ಕೆ.ಎಸ್. ಈಶ್ವರಪ್ಪ

ಗಮನ ಸೆಳೆದ ಬೈಕ್ ರ‌್ಯಾಲಿ

ಕಾರ್ಯಕ್ರಮಕ್ಕೂ ಮುನ್ನಾ ಸರ್ಕ್ಯೂಟ್ ಹೌಸ್‌ನಿಂದ ಕಾರ್ಯಕ್ರಮ ಸ್ಥಳ ಕುವೆಂಪು ರಂಗಮಂದಿರದವರೆಗೂ ಬೈಕ್ ರ‌್ಯಾಲಿ ಹಮ್ಮಿಕೊಳ್ಳಲಾಗಿತ್ತು. ನೂರಾರು ಕಾರ್ಯಕರ್ತರು ರ‌್ಯಾಲಿಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಇದರಲ್ಲಿ ಬಿಜೆಪಿ ಕಾರ್ಯಕರ್ತರು, ಅದರಲ್ಲೂ ವಿಶೇಷವಾಗಿ ಮಹಿಳಾ ಕಾರ್ಯಕರ್ತರು ಅತಿ ಹೆಚ್ಚು ಪಾಲ್ಗೊಂಡಿದ್ದು ಕಂಡುಬಂದಿತು.

ಸಂಗೊಳ್ಳಿ ರಾಯಣ್ಣ ಭಾವಚಿತ್ರದ ಸಹಿತ ಈ ರ‌್ಯಾಲಿ ನಡೆಯಿತು. ಹೊಳಲೂರು ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಈ. ಕಾಂತೇಶ್ ರ‌್ಯಾಲಿಯ ನೇತೃತ್ವವಹಿಸಿ ಯುವಕರ ಉತ್ಸಾಹ ಇಮ್ಮಡಿಗೊಳಿಸುತ್ತಿದ್ದರು.

ರಸ್ತೆಯ ಇಕ್ಕೆಲಗಳಲ್ಲಿ ಸಾರ್ವಜನಿಕರು ನಿಂತುಕೊಂಡು ರ‌್ಯಾಲಿಯನ್ನು ಕಣ್ತುಂಬಿಕೊಂಡರು.

ಅತಿ ಹೆಚ್ಚು ಮಹಿಳೆಯರು ಭಾಗಿ

ಬಿಜೆಪಿ ಕಾರ್ಯಕರ್ತರು ಹಾಗೂ ಮಹಿಳಾ ಕಾರ್ಯಕರ್ತೆಯರು ಅತಿ ಹೆಚ್ಚು ಮಂದಿ ಸಮಾವೇಶದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಮಟ್ಟದ ವಿವಿಧ ಪ್ರಮುಖರು, ಕಾರ್ಯಕರ್ತರ ಉಪಸ್ಥಿತಿ ಕಂಡುಬಂದಿತು. ಕುವೆಂಪು ರಂಗಮಂದಿರದ ತುಂಬಿ ತುಳುಕುತ್ತಿತ್ತು. ರಂಗಮಂದಿರದಲ್ಲಿ ಇರುವ ಆಸನಗಳು ಸಾಲದೇ, ಕಾರ್ಯಕರ್ತರು ನಿಂತುಕೊಡೇ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಯುವಕ, ಯುವತಿಯರು ಗಮನವಿಟ್ಟು ಆಲಿಸುತ್ತಾ, ಮುಖಂಡರ ಮಾತುಗಳಿಗೆ ಹರ್ಷೋದ್ಘಾರ, ಕೇಕೆಯ ಪ್ರತಿಕ್ರಿಯೆ ನೀಡುತ್ತಿದ್ದರು.
ಹಿಂದುಳಿದ ವರ್ಗಗಳನ್ನು ಸಂಘಟಿಸಿ, ಅಭಿವೃದ್ಧಿ ಕಾರ್ಯಕ್ರಮ ರೂಪಿಸಿದವರು ಬಂಗಾರಪ್ಪ. ಅವರ ನಂತರ ಈಶ್ವರಪ್ಪ ಈ ವಿಚಾರದಲ್ಲಿ ಟೊಂಕ ಕಟ್ಟಿ ನಿಂತಿದ್ದಾರೆ. ಹಾವೇರಿ ಸಮಾವೇಶಕ್ಕೆ ಜಿಲ್ಲೆಯಿಂದ ಸುಮಾರು 200 ಬಸ್‌ನಲ್ಲಿ ಕಾರ್ಯಕರ್ತರು ತೆರಳಲಿದ್ದಾರೆ.
– ಆರ್. ಶ್ರೀಧರ್ ಹುಲ್ತಿಕೊಪ್ಪ
ಬ್ರಿಗೇಡ್ ಜಿಲ್ಲಾ ಸಂಚಾಲಕ
ಬ್ರಿಗೇಡ್ ಕಾರ್ಯಕ್ರಮಕ್ಕೆ ಯಾರೂ ಹೋಗಬಾರದು ಎಂದು ಕೆಲವರು ಹೇಳುತ್ತಿದ್ದಾರೆ. ತಾಕೀತು ಮಾಡುತ್ತಿದ್ದಾರೆ. ಹಾಗೆ ಹೇಳುವವರಿಗೆ ಈಗಾಗಲೇ ನಮ್ಮ ಸಂಘಟನೆಯ ಬಗ್ಗೆ ಭಯ ಆರಂಭವಾದಂತಿದೆ. ಬಿಜೆಪಿ ಬಲವರ್ಧನೆಯೊಂದೇ ನಮ್ಮ ಗುರಿ. ಬಿಗ್ರೇಡ್‌ಗೆ ಬೆಂಬಲಿಸಿ, ಗುರುತಿಸಿಕೊಳ್ಳಲು ಭಯಪಡುವ ಅಗತ್ಯವಿಲ್ಲ.
– ವಿರೂಪಾಕ್ಷಪ್ಪ
ಬ್ರಿಗೇಡ್ ರಾಜ್ಯಾಧ್ಯಕ್ಷ
ಯಡಿಯೂರಪ್ಪ ಹಾಗೂ ರಾಘವೇಂದ್ರ ಬ್ರಿಗೇಡ್ ಕಾರ್ಯಕ್ರಮಕ್ಕೆ ತೆರಳಬೇಡ ಎಂದು ನನ್ನನ್ನು ವಿಮುಖಗೊಳಿಸಲು ಯತ್ನಿಸಿದರು. ಅವರಿಗೆ ಬ್ರಿಗೇಡ್ ಉದ್ದೇಶ ಬಿಜೆಪಿ ಬೆಂಬಲ ಹಾಗೂ ತಮ್ಮನ್ನು ಮುಖ್ಯಮಂತ್ರಿ ಮಾಡುವುದು ಎಂದು ತಿಳಿಸಿ, ಇಲ್ಲಿಗೆ ಬಂದಿದ್ದೇನೆ.
– ಈಸೂರು ಬಸವರಾಜ್
ಬ್ರಿಗೇಡ್ ಜಿಲ್ಲಾ ಸಂಚಾಲಕ

ಪಾಲ್ಗೊಂಡಿದ್ದ ಪ್ರಮುಖರು

ಬ್ರಿಗೇಡ್ ರಾಜ್ಯ ಸಂಚಾಲಕ ವಿರೂಪಾಕ್ಷಪ್ಪ, ವಿಶ್ರಾಂತ ಐಎಎಸ್ ಅಧಿಕಾರಿ ಪುಟ್ಟಸ್ವಾಮಿ, ಬೆಂಗಳೂರು ಮಾಜಿ ಮಹಾಪೌರ ವೆಂಕಟೇಶ ಮೂರ್ತಿ, ನೇಕಾರ ಸಮಾಜದ ರಾಜ್ಯ ಪ್ರಮುಖ ಸೋಮಶೇಖರ್, ಸವಿತಾ ಸಮಾಜದ ರಾಜ್ಯ ಮುಖಂಡ ತ್ಯಾಗರಾಜ್, ಮಡಿವಾಳ ಸಮಾಜದ ರಾಜ್ಯ ನಾಯಕ ಎಂಜೀರಪ್ಪ, ಉಪ್ಪಾರ ಸಮಾಜದ ರಾಜ್ಯ ಮುಖಂಡ ಸೋಮಶೇಖರ್, ಹೊಳಲೂರು ಜಿಲ್ಲಾಪಂಚಾಯ್ತಿ ಸದಸ್ಯ ಕೆ.ಈ. ಕಾಂತೇಶ್, ವೆಂಕ್ಯಾನಾಯ್ಕ, ಬ್ರಿಗೇಡ್ ಜಿಲ್ಲಾ ಸಂಚಾಲಕ ಆರ್. ಶ್ರೀಧರ್ ಹುಲ್ತಿಕೊಪ್ಪ , ಈಸೂರು ಬಸವರಾಜ್ ಪ್ರಮುಖರಾದ ಎಸ್. ಜ್ಞಾನೇಶ್ವರ್, ಕೃಷ್ಣಪ್ಪ, ಮೋಹನ್ ರೆಡ್ಡಿ, ಸುರೇಖಾ ಮುರಳೀಧರ್, ರೇಖಾ ಪ್ರವೀಣ್ ಇನ್ನಿತರರು.

Previous Post

ರಾಹುಲ್ ಓಕೆ , ರಾಯಣ್ಣ ರಾಜಕೀಯ ಪ್ರೇರಿತ! ಎನ್‌ಎಸ್‌ಯುಐನ ಇಬ್ಬಗೆ ನೀತಿ

Next Post

ಉತ್ತರಾಧಿಕಾರಿ ಹುದ್ದೆ: ಪ್ರಾದೇಶಿಕ ಪಕ್ಷಗಳಲ್ಲಿ ವಿವಾದದ ಗಾಳಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಉತ್ತರಾಧಿಕಾರಿ ಹುದ್ದೆ: ಪ್ರಾದೇಶಿಕ ಪಕ್ಷಗಳಲ್ಲಿ ವಿವಾದದ ಗಾಳಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಒಂದೇ ಮಳೆಗೆ ಬ್ರಾಂಡ್ ಬೆಂಗಳೂರು ನಿಜ ಬಣ್ಣ ಬಯಲು | ಪ್ರತಿಪಕ್ಷದ ನಾಯಕ ಆರ್. ಅಶೋಕ್

May 19, 2025

ರಾಜ್ಯ ಸರ್ಕಾರದಿಂದ ಶೂನ್ಯ ಸಾಧನೆ |ಯಾವ ಪುರುಷಾರ್ಥಕ್ಕೆ ಸಮಾವೇಶ | ಸಿ.ಟಿ. ರವಿ ತರಾಟೆ

May 19, 2025

ಕಾಂಗ್ರೆಸ್ ಸರ್ಕಾರ ರಾಜ್ಯದ ಜನರನ್ನು ಸುಲಿಗೆ ಮಾಡುತ್ತಿದೆ: ಅರಗ ಜ್ಞಾನೇಂದ್ರ

May 19, 2025
File Image

ಮನಸೋಇಚ್ಛೆ ಒಡೆದು ಬಡಿದು ನುಂಗಲು ಜನರೆಂದರೆ ಜೀವರಹಿತ ಕಲ್ಲುಬಂಡೆಗಳೇ?

May 19, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಒಂದೇ ಮಳೆಗೆ ಬ್ರಾಂಡ್ ಬೆಂಗಳೂರು ನಿಜ ಬಣ್ಣ ಬಯಲು | ಪ್ರತಿಪಕ್ಷದ ನಾಯಕ ಆರ್. ಅಶೋಕ್

May 19, 2025

ರಾಜ್ಯ ಸರ್ಕಾರದಿಂದ ಶೂನ್ಯ ಸಾಧನೆ |ಯಾವ ಪುರುಷಾರ್ಥಕ್ಕೆ ಸಮಾವೇಶ | ಸಿ.ಟಿ. ರವಿ ತರಾಟೆ

May 19, 2025

ಕಾಂಗ್ರೆಸ್ ಸರ್ಕಾರ ರಾಜ್ಯದ ಜನರನ್ನು ಸುಲಿಗೆ ಮಾಡುತ್ತಿದೆ: ಅರಗ ಜ್ಞಾನೇಂದ್ರ

May 19, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!