ಕಲ್ಪ ಮೀಡಿಯಾ ಹೌಸ್ | ಕಲಬುರಗಿ |
ತಮ್ಮ ಗ್ರಾಮಕ್ಕೆ ಆಗಮಿಸಿದ್ದ ಹೊರ ರಾಜ್ಯದ ವ್ಯಕ್ತಿಯನ್ನು ಭೀಕರವಾಗಿ ಹತ್ಯೆ ಮಾಡಿ, ದೇಹವನ್ನು ಸುಟ್ಟುಹಾಕಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ತಾಜಸುಲ್ತಾನಪುರದಿಂದ ವರದಿಯಾಗಿದೆ.
Also read: ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ: 15 ಜನರ ಹೆಡೆಮುರಿ ಕಟ್ಟಿದ ಪೊಲೀಸರು
ಮಹಾರಾಷ್ಟ್ರದ ಪುಣೆಯಿಂದ ಗ್ರಾಮಕ್ಕೆ ಎರಡು ದಿನದ ಹಿಂದಷ್ಟೇ ಹೋಳಿ ಹಬ್ಬಕ್ಕಾಗಿ ಆಗಮಿಸಿದ್ದ 35 ವರ್ಷದ (ಹೆಸರು ಪ್ರಕಟಿಸುವುದಿಲ್ಲ) ವ್ಯಕ್ತಿಯನ್ನು ಹಂತಕರು ಕೊಲೆ ಮಾಡಿದ್ದಾರೆ. ಮಾತ್ರವಲ್ಲ ದೇಹವನ್ನು ಸುಟ್ಟಿದ್ದು, ಅದು ಅರ್ಧಂಬರ್ಧ ಕರಕಲಾಗಿದೆ. ಕೊಲೆಗೆ ಕಾರಣ ಹಾಗೂ ಹತ್ಯೆಕೋರರು ಯಾರು ಎನ್ನುವುದು ಇನ್ನೂ ತಿಳಿದುಬಂದಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post