Read - < 1 minute
ಬೆಂಗಳೂರು: ಸೆ:10: ತೆಲಗು ಭಾಷಿಗರು ಮತ್ತು ಕನ್ನಡಿಗರು ಸೋದರ ಭಾವದಿಂದ ಬಾಳುತ್ತಿದ್ದಾರೆ, ಒಕ್ಕೂಟದ ವ್ಯವಸ್ಥೆಯಲ್ಲಿ ನಾವಿದ್ದೇವೆ,ಭಾಷೆಗಳು ಮಾತನಾಡಲು ಇಟ್ಟುಕೊಂಡಿದ್ದೇವೆ, ಇದುವರೆಗೂ ಆಂದ್ರ-ತೆಲಂಗಾಣ ಹಾಗೂ ರಾಜ್ಯದ ನಡುವೆ ಯಾವುದೇ ಸಮಸ್ಯೆಗಳು ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶ್ರೀ ಕೃಷ್ಣದೇವರಾಯ ಕಲಾಮಂದಿರ ಹಾಗೂ ಡಾ.ಟಿ.ಸುಬ್ಬರಾಮಿರೆಡ್ಡಿ ಕಲಾವೇದಿಕೆಗೆ ಚಾಲನೆ ನೀಡಿ ಮಾತನಾಡಿದ ಅವರು, ಎರಡು ಭಾಷಿಗರಲ್ಲಿ ಸ್ನೇಹ, ಭಾತೃತ್ವ ಹಲವು ವರ್ಷಗಳಿಂದ ಇದೆ. ರಾಜ್ಯದಲ್ಲಿ ತೆಲಗು ಜನರನ್ನು ಗುತರ್ಿಸುವುದು ಕಷ್ಟ. ಯಾಕೆಂದರೆ ಎಲ್ಲರೂ ಕನ್ನಡ ಮಾತನಾಡ್ತಾರೆ. ಲಿಪಿಯಲ್ಲಿ ಕೂಡ ಸಾಮರಸ್ಯ, ಭಾಂದವ್ಯ ಬೆರೆತಿದೆ. ಯಾವುದೇ ಸಮಸ್ಯೆಗಳು ಆಂದ್ರ,ತೆಲಂಗಾಣ ಹಾಗೂ ರಾಜ್ಯದ ನಡುವೆ ಬಂದಿಲ್ಲ, ಬರಬಾರದು.ಒಕ್ಕೂಟದ ವ್ಯವಸ್ಥೆಯಲ್ಲಿ ನಾವಿದ್ದೇವೆ. ಭಾಷೆಗಳು ಮಾತನಾಡಲು ಇಟ್ಟುಕೊಂಡಿದ್ದೇವೆ ಅಷ್ಟೇ ಎಂದರು.
ಇಂದು ನೀರಿಗಾಗಿ ನಮಗು ಮತ್ತು ತಮಿಳುನಾಡಿನ ನಡುವೆ ಜಗಳ ನಡೆಯುತ್ತಿದೆ.. ಇದನ್ನು ಪರಸ್ಪರ ಮಾತುಕತೆಯಲ್ಲಿ ಬಗೆಹರಿಸಿಕೊಳ್ಳಬಹುದು.. ಆದರೆ ನೂರಕ್ಕೂ ಹೆಚ್ಚು ವರ್ಷಗಳಿಂದ ಜಗಳ ನಡೆಯುತ್ತಲೆ ಇದೆ. ನಾವು ಕುಡಿಯಲು ನೀರು ಬೇಕೆಂದರೆ ಅವರು ಕುಡಿಯಲು ನೀರು ಕೇಳುತ್ತಿದ್ದಾರೆ. ರಾಜ್ಯ ಸಂಕಷ್ಣದಲ್ಲಿದೆ.. 45 ಟಿಎಂಸಿ ನೀರು ನಮ್ಮಲ್ಲಿದೆ. ಮೆಟ್ಟೂರಿನಲ್ಲಿ 36 ಟಿಎಂಸಿ ನೀರು ಇದೆ. ಇದನ್ನೆ ದಿನಕ್ಕೆ ಒಂದು ಟಿಎಂಸಿ ನೀರನ್ನು ತಮಿಳುನಾಡು ಬಳಸಿಕೊಳ್ಳಬಹುದು.. ನಮಗೆ ಕುಡಿಯಲು ನೀರು ಇಲ್ಲ.. ಅರ್ಥ ಮಾಡಿಕೊಳ್ಳದೆ ನೀರು ಕೇಳಿದ್ದಾರೆ. ಆದಾಗ್ಯೂ ಸುಪ್ರೀಂ ಕೋಟರ್ು ಆದೇಶದಂತೆ ಬಾರದ ಮನಸ್ಸಿನಿಂದ ನಿರುಕೊಟ್ಟಿದ್ದೇವೆ.. ಮತ್ತೆ ಕಷ್ಟದ ಪರಿಸ್ಥಿತಿಯನ್ನು ಸುಪ್ರೀಂ ಗೆ ಮನವರಿಕೆ ಮಾಡ್ತಿವಿ. ಈ ಸಂಬಂಧ 12 ಕ್ಕೆ ಸಭೆ ಕೂಡ ಇದೆ.. ಇಂತಹ ಬಿಕ್ಕಟ್ಟು ಯಾವತ್ತೂ ಇರಬಾರದು ಎಂದು ಹೇಳಿದರು.
ಜೊತೆಗೆ ಮಹದಾಯಿ ವಿಚಾರವಾಗಿ. ಮಹರಾಷ್ಟ್ರ ಸಿಎಂ, ಗೋವಾ ಸಿಎಂ, ಹಾಗೂ ಪ್ರದಾನಿಗೆ ಪತ್ರ ಬರೆದಿದ್ದೇನೆ .. ಇದಕ್ಕೆ ಕೋಟರ್ು ಪರಿಹಾರವಲ್ಲ.. ಕುಳಿತು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಆಗ ಮಾತ್ರ ಒಕ್ಕೂಟ ವ್ಯವಸ್ಥೆ ನಿಮರ್ಾಣ ಮಾಡಲು ಸಾಧ್ಯ,
ಈ ಎಲ್ಲ ನೀರಿನ ಸಮಸ್ಯೆಗಳು ಬಗೆ ಹರಿಯಬೇಕಾದರೆ ಕೇಂದ್ರ ಸಕರ್ಾರ ರಾಷ್ಟ್ರೀಯ ಜಲ ನೀತಿಯನ್ನು ಕೂಡಲೆ ಜಾರಿಗೆ ತರಬೇಕು. ಇಲ್ಲದಿದ್ದರೆ, ಹೀಗೆ ಜಗಳ ನಡೆಯುತ್ತಲೆ ಇರುತ್ತವೆ.. ಕಷ್ಟದ ಸ್ಥಿತಿ ಎದುರಿಸಲೆ ಬೇಕಾಗುತ್ತದೆ ಎಂದು ಹೇಳಿದರು.
ಗಣ್ಯರಿಗೆ ಸನ್ಮಾನ:
ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ ನಾಲ್ಕು ಮಂದಿ ಗಣ್ಯರಿಗೆ ಶ್ರೀ ಕೃಷ್ಣದೇವರಾಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪದ್ಮಭೂಷಣ ಡಾ.ಯಾರ್ಲಗಡ್ಡ ಲಕ್ಷ್ಮಿಪ್ರಸಾದ್, ಬಹುಭಾಷ ನಟಿ ಡಾ.ಜಯಪ್ರದ, ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ, ನಟ ಸಾಯಿಕುಮಾರ್ ಪ್ರಶಸ್ತಿಗೆ ಭಾಜನರಾದರು.
Discussion about this post