ಬೆಂಗಳೂರು: ಅ:8: ಕೆಂಪೇಗೌಡ ಬಡಾವಣೆಯಲ್ಲಿ 5ಸಾವಿರ ನಿವೇಶನಗಳನ್ನು ಮುಂದಿನ 15 ದಿನಗಳಲ್ಲಿ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ರಿಂಗ್ರಸ್ತೆಯ ಚೌಡೆಶ್ವರಿನಗರದಲ್ಲಿ ಹಾಲಿ ಇರುವ ಸೇತುವೆಯನ್ನು ಉಪಯೋಗಿಸಿಕೊಂಡು ಕೆಳಸೇತುವೆ ಮತ್ತು ಸವರ್ಿಸ್ ರಸ್ತೆ ನಿಮರ್ಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೆಂಪೇಗೌಡ ಬಡಾವಣೆಯ 5ಸಾವಿರ ನಿವೇಶನಗಳ ಜತೆ ಇನ್ನೂ 5ಸಾವಿರ ನಿವೇಶನಗಳನ್ನು ಹಂಚಿಕೆ ಮಾಡುವಂತೆ ಸೂಚನೆ ನೀಡಿದ್ದೇನೆ. ಒಟ್ಟು 40 ಸಾವಿರ ನಿವೇಶನಗಳನ್ನು ಬೆಂಗಳೂರಿನ ನಿವಾಸಿಗಳಿಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾವೇರಿ ನದಿ ವಿವಾದದಲ್ಲಿ ಹಿಂದೆ ಯಾವ ಸಕರ್ಾರವೂ ತೆಗೆದುಕೊಳ್ಳದಂತಹ ನಿಧರ್ಾರವನ್ನು ನಮ್ಮ ಸಕರ್ಾರ ತೆಗೆದುಕೊಂಡಿದೆ. ಕುಡಿಯುವ ನೀರಿಗೆ 24 ಟಿಎಂಸಿ ನೀರನ್ನು ಉಳಿಸಿಕೊಂಡು ಅದರ ಮೇಲ್ಪಟ್ಟು ನೀರು ಬಂದರೆ ಮಾತ್ರ ತಮಿಳುನಾಡಿಗೆ ಹರಿಸಲಾಗುವುದು. ಯಾವುದೇ ನ್ಯಾಯಾಲಯದ ಆದೇಶವಿದ್ದರೂ ತಮಿಳುನಾಡಿಗೆ ನೀರು ಬಿಡುವುದಿಲ್ಲ. ಅದರಿಂದ ಏನೇ ತೊಂದರೆ ಬಂದರೂ ಎದುರಿಸಲು ಸಿದ್ಧ ಎಂದು ಹೇಳಿದರು.
ಬೆಂಗಳೂರಿನಲ್ಲಿ ಸುಮಾರು 30 ಲಕ್ಷದಷ್ಟು ಆಸ್ತಿ ಇದೆ. ಆದರೆ 19 ಲಕ್ಷ ಮಾತ್ರ ಗುರುತಿಸಿ ತೆರಿಗೆ ವಸೂಲಿ ಮಾಡಲಾಗುತ್ತಿದೆ. ಇನ್ನು 11 ಲಕ್ಷ ಆಸ್ತಿ ಗುರುತಿಸಲಾಗಿಲ್ಲ. ಪೂರ್ಣ ಪ್ರಮಾಣದಲ್ಲಿ ಎಲ್ಲಾ ಆಸ್ತಿಗಳನ್ನು ಗುರುತಿಸಿ ತೆರಿಗೆ ವಸೂಲಿ ಮಾಡಿದರೆ ಸುಮಾರು ಎರಡೂವರೆಸಾವಿರ ಕೋಟಿಗೂ ಹೆಚ್ಚು ತೆರಿಗೆ ಸಂಗ್ರಹವಾಗುವ ಸಾಧ್ಯತೆ ಇದೆ. ನಮ್ಮ ಸಕರ್ಾರದ ಒತ್ತಾಸೆಯ ಮೇರೆಗೆ ತೆರಿಗೆ ಸಂಗ್ರಹಣೆಯಲ್ಲಿ ಯಶಸ್ಸು ಸಾಧಿಸಿದ್ದೇವೆ. ಇನ್ನು ಇದನ್ನು ಹೆಚ್ಚಿಸಬೇಕು ಎಂದರು.
ಬೆಂಗಳೂರಿನಲ್ಲಿ ಪ್ರತಿ ದಿನ ಮೂವರೆ ಸಾವಿರ ಟನ್ ಕಸ ಉತ್ಪಾದನೆಯಾಗುತ್ತಿದೆ. ಇದನ್ನು ವಿಲೇವಾರಿ ಮಾಡುವುದೇ ದೊಡ್ಡ ಸಮಸ್ಯೆ, ನಮ್ಮ ಸಕರ್ಾರ ವೈಜ್ಞಾನಿಕ ಕಸ ವಿಲೇವಾರಿಗೆ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಈ ಹಿಂದೆ ಬೆಂಗಳೂರು ಹವಾನಿಯಂತ್ರಿತವಾಗಿತ್ತು. ಎಸಿಯನ್ನು ಬಳಸುವ ಅಗತ್ಯವೇ ಇರಲಿಲ್ಲ. ಆದರೆ ಈಗ ಎಸಿ ಇಲ್ಲದೆ ಇರಲು ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿಯ ಕಾರಣಕ್ಕಾಗಿ ಮರ ಕಡಿಯುವುದು ಅನಿವಾರ್ಯ. ಆದರೆ, ಒಂದು ಮರ ಕಡಿದರೆ ಅಲ್ಲಿ 10ರಿಂದ 20 ಮರಗಳನ್ನು ಹೊಸದಾಗಿ ಬೆಳೆಸಬೇಕು. ಇಲ್ಲದೇ ಹೋದರೆ ಪರಿಸರ ಅಸಮತೋಲನವಾಗುತ್ತದೆ ಎಂದು ಸಿಎಂ ಎಚ್ಚರಿಸಿದರು.
ಹೆಬ್ಬಾಳದಿಂದ ಚಾಲುಕ್ಯ ವೃತ್ತದವರೆಗೆ 1700 ಕೋಟಿ ರೂ. ವೆಚ್ಚ ಮಾಡಿ ಉಕ್ಕಿನ ಸೇತುವೆ ರಸ್ತೆ ನಿಮರ್ಾಣ ಮಾಡುತ್ತಿದ್ದೇವೆ. ಇದರಿಂದ ಜನರಿಗೆ ಉಪಯೋಗವಾಗುತ್ತದೆ ಎಂದು ಹೇಳಿದರು.
ಇಂದು ಶಂಕುಸ್ಥಾಪನೆ ನೆರವೇರಿಸಿದ ರಸ್ತೆ ನಿಮರ್ಾಣಕ್ಕೆ 17ಕೋಟಿ ರೂ. ಖಚರ್ು ಮಾಡುತ್ತಿರುವುದಾಗಿ ಹೇಳಿದರು.
ಶಾಸಕರಾದ ಬೈರತಿ ಬಸವರಾಜು, ಮುನಿರತ್ನ, ಎಸ್.ಟಿ.ಸೋಮಶೇಖರ್ ಅವರು ಪೈಪೋಟಿಗೆ ನಿಂತವರಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.
Discussion about this post