Read - < 1 minute
ಹೊಸದಿಲ್ಲಿ: ಸಾಂಸದ ರಾಜೀವ್ ಚಂದ್ರಶೇಖರ್ ಅವರು ಕೇರಳದ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟ (ಎನ್ಡಿಎ)ದ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಕಲ್ಲಿಕೋಟೆಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಎನ್ಡಿಎಯ ಕೇರಳ ಘಟಕವನ್ನು ಪುನಾರಚಿಸಲಾಗಿ ಈ ನೇಮಕವನ್ನು ಘೋಷಿಸಲಾಯಿತು.
ಎನ್ಡಿಎ ಮೈತ್ರಿಕೂಟದ ಅಧ್ಯಕ್ಷ ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್ ಅವರು ಇರುತ್ತಾರೆ.
ಈ ಸಂದರ್ಭ ತನ್ನ ನೇಮಕ ಕುರಿತಂತೆ ಮಾತನಾಡಿದ ರಾಜೀವ್ ಚಂದ್ರಶೇಖರ್, ಕೇರಳದ ರಾಜಕೀಯದಲ್ಲಿ ಬಲಿಷ್ಠ ಪರ್ಯಾಯವೊಂದರ ಬಗ್ಗೆ ನಾನು ಸದಾ ಪ್ರತಿಪಾದಿಸುತತಲೇ ಬಂದಿದ್ದೇನೆ. ಲಕ್ಷಾಂತರ ಬಡವರು ಮತ್ತು ಅವಕಾಶಗಳಿಗಾಗಿ ಕಾಯುತ್ತಿರುವ ಯುವಶಕ್ತಿಯನ್ನೊಳಗೊಂಡು ಎಲ್ಲರ ಸಮಾನ ಅಭಿವೃದ್ಧಿಯನ್ನು ಆಧರಿಸಿರುವ ಪರ್ಯಾಯ ರಾಜಕೀಯ ರಂಗವೊಂದರ ಅಗತ್ಯ ಕೇರಳಕ್ಕಿದೆ. ಎನ್ಡಿಎ ಈ ಕೊರತೆಯನ್ನು ನೀಗಿ ಕೇರಳದಲ್ಲಿ ಅತ್ಯಂತ ವೇಗದಲ್ಲಿ ಬಲವರ್ಧಿಸಿಕೊಳ್ಳುತ್ತಿದೆ. ಕೇರಳವನ್ನು ದಕ್ಷಿಣ ಭಾರತದಲ್ಲೇ ಒಂದು ಅಭಿವೃದ್ಧಿ ಹೊಂದಿದ ರಾಜ್ಯವಾಗಿ ಪರಿವರ್ತಿಸಲು ತಾನು ಯತ್ನಿಸುವೆ ಎಂದು ಹೇಳಿದರು.
Discussion about this post