ಕಲ್ಪ ಮೀಡಿಯಾ ಹೌಸ್ | ಸೊರಬ |
ಸಾವಿರಕ್ಕೂ ಅಧಿಕ ಎಕರೆ ಕಾಯ್ದಿಟ್ಟ ಅರಣ್ಯ ಬೆಂಕಿಗಾಹುತಿ. ಅಧಿಕಾರಿಗಳ ನಿರ್ಲಕ್ಷತನ, ಅಪಕ್ವ ಸಿಬ್ಬಂದಿ ಬೇಸಿಗೆಯ ತಿಂಗಳುಗಳಲ್ಲಿ ಫೈರ್ ಲೈನ್ ಮಾಡಲು ಹೋಗಿ ಈ ಅವಘಡ ಸಂಬಂಧಿಸಿದೆ ಎಂದು ಸ್ಥಳೀಯರ ಅಂಬೋಣ.
ಪುರಾಣ ಹಾಗೂ ಐತಿಹಾಸಿಕ ಪ್ರಸಿದ್ಧ ಚಂದ್ರಗುತ್ತಿ ಶ್ರೀ ರೇಣುಕಾಂಬ ಬೆಟ್ಟದಲ್ಲಿ ಕಳೆದ 3-4 ದಿನಗಳಿಂದ ಕಾಣಿಸಿಕೊಂಡಿರುವ ಬೆಂಕಿ ಅಮೂಲ್ಯ ವನ್ಯ ಸಂಪತ್ತು ಮತ್ತು ಪ್ರಾಣಿ ಸಂಕುಲವನ್ನು ಹೊಸಕಿ ಹಾಕಿದೆ.
ಚಂದ್ರಗುತ್ತಿ ಹೋಬಳಿಯ ಬಹುತೇಕ ಪ್ರದೇಶಗಳಲ್ಲಿ ಬೆಟ್ಟ-ಗುಡ್ಡಗಳಲ್ಲಿ ಅಪಾರವಾದ ಜೀವ ಸಂಕುಲ ಮತ್ತು ಔಷಧೀಯ ಗುಣ ಇರುವ ಸಸ್ಯಗಳಿವೆ. ವಿಶೇಷವಾಗಿ ಮಳೆ ತರುವ ಶಿಲಾರಣ್ಯ ನಿರ್ನಾಮವಾಗಿದ್ದು, ಅಪರೂಪದ ಪಕ್ಷಿಸಂಕುಲಗಳಿಗೆ ರಕ್ಷಣೆ ಒದಗಿಸಿದ್ದ ಬೆಟ್ಟದಲ್ಲಿ ಇದೀಗ ಅನೇಕ ಪಕ್ಷಿಗಳ ಗೂಡು ಬೆಂಕಿಗೆ ಆಹುತಿಯಾಗಿದೆ.
Also read: ಚಲಿಸುತ್ತಿದ್ದ ರೈಲಿನಿಂದ ಬಿದ್ದು ವೈದ್ಯ ಸಾವು
ಕಳೆದ 3-4 ದಿನಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಫೋಟೋ ಫೋಸಿಗೆ ಮಾತ್ರ ಮುಂದಾಗುವ ಅರಣ್ಯ ಅಧಿಕಾರಿಯ ಬೇಜವಾಬ್ದಾರಿ ತನದಿಂದ ದಿನದಿಂದ ದಿನಕ್ಕೆ ಬೆಂಕಿ ನೂರಾರು ಎಕರೆ ವ್ಯಾಪಿಸಿದ್ದು ಇಷ್ಟೆಲ್ಲ ಅನಾಹುತಕ್ಕೆ ನಾಂದಿಯಾಯಿತು.
ಚಂದ್ರಗುತ್ತಿಯ ಗುಡ್ಡದಲ್ಲಿ ಕಳೆದ ಮರ್ನಾಲ್ಕು ದಿನಗಳ ಹಿಂದೆಯೇ ಕಾಣಿಸಿಕೊಂಡಿತು. ಈ ಬಗ್ಗೆ ಸ್ಥಳೀಯ ಅರಣ್ಯಾಧಿಕಾರಿಗಳು ಆರಂಭದಲ್ಲಿಯೇ ಎಚ್ಚೆತ್ತುಕೊಂಡಿದ್ದರೆ, ವನ್ಯ ಸಂಪತ್ತು ಬೆಂಕಿಗೆ ಆಹುತಿಯಾಗುತ್ತಿರಲಿಲ್ಲ. ಅರಣ್ಯ ರಕ್ಷಣೆ ಮತ್ತು ಕಾಡ್ಗಿಚ್ಚಿನಿಂದ ಸಂಭವಿಸುವ ಅನಾಹುತಗಳ ತಡೆಗೆ ಅರಣ್ಯ ಅಧಿಕಾರಿಗಳು ಹೆಚ್ಚಿನ ಗಮನ ನೀಡಬೇಕು.
ದತ್ತಾತ್ರೇಯ ಹೆಗಡೆ, ಅಧ್ಯಕ್ಷರು, ಜೀವ ವೈವಿಧ್ಯ ಮಂಡಳಿ, ಚಂದ್ರಗುತ್ತಿ ಗ್ರಾಪಂ.
ಬೆಂಕಿಯ ಕೆನ್ನಾಲಿಗೆ ಇನ್ನಷ್ಟು ಚಾಚಿದರೆ ಗುಡ್ಡದ ತಗ್ಗು ಪ್ರದೇಶದ ಚಂದ್ರಗುತ್ತಿ, ಬರದವಳ್ಳಿ, ಕಮಲಾಪುರ, ಬಸ್ತಿಕೊಪ್ಪ, ಮಾವಿನಬಳ್ಳಿ ಕೊಪ್ಪ ಸೇರಿದಂತೆ ಇತರೆ ಗ್ರಾಮಗಳಿಗೂ ಹಬ್ಬುವ ಸಂಭವವಿದೆ. ರೈತರ ನೂರಾರು ಎಕರೆ ಪ್ರದೇಶದಲ್ಲಿನ ಬೆಳೆಗಳ ನಾಶವಾಗುವ ಸಾಧ್ಯತೆ ಇದೆ. ಬೆಂಕಿ ಬಿದ್ದ ಮೇಲೆ ಬಾವಿ ತೋಡಿದರು ಎನ್ನುವ ಗಾದೆ ಯಂತೆ ಇದೀಗ ಅರಣ್ಯಾಧಿಕಾರಿಗಳು ಕಾಡು, ಕಲ್ಲು ಅವಲಂಬಿತರನ್ನು ಕೂಡಿಕೊಂಡು ಬೆಂಕಿ ಆರಿಸಲು ಮುಂದಾಗಿದ್ದಾರೆ.
ಒಂದುಕಡೆ ಅವ್ಯಾಹತ ಅಧಿಕೃತ ಅನಧಿಕೃತ ಗಣಿಗಾರಿಕೆ, ಮರಳು ಅಕ್ರಮ ಸಾಗಾಟ, ಸಾಲದೆಂಬಂತೆ ಈಗ ಬೆಂಕಿ ಹಾವಳಿ. ಅಲ್ಲಿಗೆ ಚಂದ್ರಗುತ್ತಿ ಕಾಯ್ದಿಟ್ಟ ಸಾವಿರಕ್ಕೂ ಮಿಕ್ಕ ಅರಣ್ಯ ದಾಖಲೆಯಲ್ಲಿ ಮಾತ್ರ ಉಳಿಯುತ್ತದೆ.
ಅರಣ್ಯ ಇಲಾಖೆಯಲ್ಲಿನ ಮೂರು ಮತ್ತೊಂದು ಸಿಬ್ಬಂದಿ, ಅಗ್ನಿ ಅವಘಡಗಳ ಸಂದರ್ಭದಲ್ಲಿ ಪೂರ್ವಭಾವಿ ಅನುಸರಿಸಬೇಕಾದ ಯಾವುದೇ ವ್ಯವಸ್ಥೆ ಇರದಿರುವುದು, ಇಲಾಖೆಗಳ ಅಸಡ್ಡೆ ಕಾರಣಗಳಿಂದಾಗಿ, ಜನಪ್ರತಿನಿಧಿಗಳ ಜ್ಞಾನ ದ ಚಿತ್ತ ಪರಿಸರದಿಂದ ದೂರವಿರುವುದು ಮುಂತಾದ ಕಾರಣಗಳಿಂದಾಗಿ ಚಂದ್ರಗುತ್ತಿ ಮಳೆತರುವ, ಭೂಮಿಯ ಸಮತೋಲನ ರಕ್ಷಿಸುವ, ಸಕಲ ಜೀವರಾಶಿಗಳಿಗೆ ಜೀವಜಲ ನೀಡುವ ವನ ಸಂಪತ್ತು, ವನ್ಯಜೀವಿ ಸಂಪತ್ತು ನಾಶದತ್ತ ಸಾಗಿದೆ.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post