ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಹಣಕಾಸಿನ ಅನುಕೂಲಗಳನ್ನು ಹೊಂದಿರುವ ಪ್ರತಿಯೊಬ್ಬರೂ ಅಗತ್ಯವಿರುವ ಜನರಿಗೆ ವಿವಿಧ ರೀತಿಯಲ್ಲಿ ನೆರವಾಗುವ ಸಂಕಲ್ಪ ಮಾಡಿ, ಅದನ್ನು ಕಾರ್ಯಗತ ಮಾಡಿದರೆ ಅದು ರಾಮರಾಜ್ಯದ ಕನಸು ನನಸಾಗಲು ಸಾಧ್ಯವಾಗುತ್ತದೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಹೇಳಿದ್ದಾರೆ.
ಹಳೇನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಾತನಾಡಿದ ಅವರು, ಬಹಳಷ್ಟು ಮಂದಿ ತಮ್ಮ ಮನೆಯಲ್ಲಿ ಎಲ್ಲ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಮಾಡುತ್ತಾರೆ. ಇದಕ್ಕಾಗಿ ಲಕ್ಷಾಂತರ ಮಂದಿ ವ್ಯಯಿಸುತ್ತಾರೆ. ಲಕ್ಷಾಂತರ ರೂ. ಹಣ ಖರ್ಚ ಮಾಡುವ ಸಾಮರ್ಥ್ಯವಿದ್ದಾಗ ಅದರಲ್ಲಿ ಒಂದಷ್ಟು ಭಾಗ ಅಗತ್ಯವಿರುವವರಿಗೆ ಸಹಾಯ ಮಾಡಬೇಕು ಎಂದರು.
ನೀವು ಖರ್ಚು ಮಾಡುವ ಲಕ್ಷಾಂತರ ರೂ. ಹಣದಲ್ಲಿ ಕನಿಷ್ಠ ಶೇ.10ರಷ್ಟನ್ನು ವ್ಯಯಿಸಿ ಯಾರಿಗೆ ಮನೆಯಿಲ್ಲ ಅವರಿಗೆ ಮನೆ ಕಟ್ಟಿಕೊಳ್ಳಲು ನೆರವಾಗಿ. ಫಲಾನುಭವಿಗಳನ್ನು ನೀವೇ ಗುರುತಿಸಿ, ಒಬ್ಬರಿಗೊಬ್ಬರು ಕೈಗೂಡಿಸಿ ಇದನ್ನುಮಾಡಿ. ಇದು ರಾಮದೇವರ ಪ್ರಸಾದ ಎಂದು ತಿಳಿಸಿ. ರಾಮದೇವರ ಬಳಿ ಹೋದಾಗಿ ಇದು ನಿನಗೇ ಸಮರ್ಪಿತ ಎಂದು ತಿಳಿಸಿ ಎಂದರು.
Also read: ಅಯೋಧ್ಯೆಯಲ್ಲಿ ಶ್ರೀರಾಮದೇವರ ಪ್ರಾಣ ಪ್ರತಿಷ್ಠಾಪನೆ ಯಾವಾಗ? ಪೇಜಾವರ ಶ್ರೀಗಳು ಹೇಳಿದ್ದೇನು?
ವೈದ್ಯ ವೃತ್ತಿಯಲ್ಲಿರುವವರು ಇಂತಿಷ್ಟು ಬಡ ಮಂದಿಗೆ ಉಚಿತ ಚಿಕಿತ್ಸೆ ನೀಡಿ, ಬಡ ವಿದ್ಯಾರ್ಥಿಗಳಿಗೆ ಅಧ್ಯಾಪಕರು ಉಚಿತ ಪಾಠ ಮಾಡಿ, ಕೂಲಿ ಮಾಡುವವರೂ ಸಹ ಒಂದು ದಿನ ದುಡಿಮೆಯ ಹಣವನ್ನು ಸಮಾಜಕ್ಕಾಗಿ ನೀಡಬಹುದು. ಹೀಗೆ, ಪ್ರತಿಯೊಬ್ಬರೂ ಮಾಡಿದಾಗ ರಾಮರಾಜ್ಯದ ಕನಸು ನನಸಾಗುತ್ತದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post