ಕಲ್ಪ ಮೀಡಿಯಾ ಹೌಸ್ | ಹಾದಿಗಲ್ಲು |
ಹಾದಿಗಲ್ಲು ಗ್ರಾಮದಲ್ಲಿ ಗಣಪತಿ ದರ್ಶನ ಪಡೆಯಲು ಸಾಗರದಿಂದ ಬಸ್ ಹತ್ತಿ ತೀರ್ಥಹಳ್ಳಿ ಮಾರ್ಗವಾಗಿ ಸಾಗುತ್ತಾ ಸಿಗುವ ಹಾದಿಗಲ್ಲು ಬಸ್ ನಿಲ್ದಾಣದಲ್ಲಿ ಇಳಿದು ಮೂತ್ರ ವಿಸರ್ಜನೆ ಮಾಡಲು ಬಸ್ ನಿಲ್ದಾಣದಲ್ಲಿ ಜಾಗ ಹುಡುಕಿದರೆ 2006 ರಲ್ಲಿ ನಿರ್ಮಾಣವಾದ ಭವ್ಯವಾದ ಶೌಚಾಲಯ ನನ್ನ ಕಣ್ಣಿಗೆ ಬಿದ್ದಿತ್ತು.
ಇದು ಅಂತಿಂತ ಶೌಚಾಲಯವಲ್ಲ. ನಿರ್ವಹಣೆ ಎಂಬುದಿಲ್ಲ, ಸ್ವಚ್ಛತೆ ಎಂಬುದು ಇಲ್ಲಿ ಮರೀಚಿಕೆಯಾಗಿದೆ. ಹೆಸರಿಗೆ ಇಲ್ಲಿ ಶೌಚಾಲಯ ಇದೆ ಎಂದರೆ ಇದೆ, ಇಲ್ಲ ಎಂದರೆ ಇಲ್ಲ.

ಇಲ್ಲಿನ ಪ್ರಖ್ಯಾತ ದೇವಾಲಯಗಳಿಗೆ ಹಲವು ಊರುಗಳಿಂದ ಭಕ್ತರು ಭೇಟಿ ನೀಡುತ್ತಾರೆ. ಹೀಗೆ ಭೇಟಿ ನೀಡುವವರು ಪ್ರಕೃತಿಯ ಕರೆಗೆ ತೆರಳಬೇಕು ಎಂದರೆ ಪ್ರಕೃತಿಯ ನಡುವೆಯೇ ಹೋಗಬೇಕೇ ವಿನಾ ಇಲ್ಲಿನ ಶೌಚಾಲಯಕ್ಕೆ ತೆರಳಿದರೆ ನರಕ ದರ್ಶನ.

ಚಿತ್ರ ಬರಹ: ತೀರ್ಥಹಳ್ಳಿ ಅನಂತ ಕಲ್ಲಾಪುರ, ಪರಿಸರ ಪ್ರೇಮಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post