ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ/ಭದ್ರಾವತಿ |
ನಿಯಂತ್ರಣ ತಪ್ಪಿ ಸ್ಕೂಟರ್’ವೊಂದು ಅಂಗಡಿಗೆ ಡಿಕ್ಕಿ ಹೊಡೆದ ಪರಿಣಾಮ ಭದ್ರಾವತಿಯ ಯುವತಿ ಸ್ಪೂರ್ತಿ ಪುರಾಣಿಕ್ ಎಂಬಾಕೆ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸವಳಂಗ ರಸ್ತೆಯಲ್ಲಿನ ಕಲ್ಲಾಪುರದ ಬಳಿಯಲ್ಲಿ ಘಟನೆ ನಡೆದಿದ್ದು, ಸ್ಫೂರ್ತಿ ಸಾವನ್ನಪ್ಪಿದ್ದು, ಹಿಂಬದಿ ಸವಾರನಿಗೆ ತೀವ್ರ ಗಾಯಗಳಾಗಿವೆ.

Also read: ಬದುಕನ್ನು ಅರ್ಥೈಸಿಕೊಳ್ಳಲು ಭಾಷೆ ಅತ್ಯಗತ್ಯ: ಕೆ.ವಿ. ಅಕ್ಷರ ಅಭಿಮತ
ಎಲ್ಲ ಸ್ನೇಹಿತರೂ ದ್ವಿಚಕ್ರ ವಾಹನಗಳಲ್ಲಿ ತೆರಳಿದ್ದರು. ವಾಪಾಸ್ ಬರುವ ವೇಳೆ ಕಲ್ಲಾಪುರದ ಬಳಿಯಲ್ಲಿ ವಾಹನದ ನಿಯಂತ್ರಣ ತಪ್ಪಿ ಕಬ್ಬಿಣದ ಅಂಗಡಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post