ಕಲ್ಪ ಮೀಡಿಯಾ ಹೌಸ್ | ಗುಜರಾತ್ |
ಭಾರತ ಮಾತ್ರವಲ್ಲ ವಿಶ್ವದ ಘಟಾನುಘಟಿಗಳು ಸಾಕ್ಷಿಯಾದ ರಿಲಯನ್ಸ್ ಇಂಡಸ್ಟ್ರೀಸ್ Reliance Industries ಎಂಡಿ ಮುಖೇಶ್ ಅಂಬಾನಿಯ ವಿವಾಹ ಮಹೋತ್ಸವ ಅದ್ದೂರಿಯಾಗಿ ನಡೆದಿದ್ದು, ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.
ಈ ಕುರಿತಂತೆ ತಮ್ಮ ಪುತ್ರನ ವಿವಾಹದ ಹಿನ್ನೆಲೆಯಲ್ಲಿ ಗುಜರಾತ್’ನಲ್ಲಿರುವ ದ್ವಾರಕಾಧೀಶ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ ನಂತರ ಅವರು ಮಾತನಾಡಿದರು.
ರಿಲಯನ್ಸ್ ಇಂಡಸ್ಟ್ರೀಸ್ ಚೇರ್ಮನ್, ಎಂಡಿ ಮುಖೇಶ್ ಅಂಬಾನಿ, Mukesh Ambani ನನ್ನ ಪುತ್ರನ ವಿವಾಹ ಮಹೋತ್ಸವ ಅತ್ಯಂತ ಸಂಭ್ರಮ ಹಾಗೂ ಯಶಸ್ವಿಯಾಗಿ ನಡೆದಿದೆ. ಇದು ದ್ವಾರಕಾಧೀಶನ ಅನುಗ್ರಹ ಹಾಗೂ ಜಾಮ್ ನಗರದ ಜನರ ಸಹಕಾರದಿಂದ ಸಾಧ್ಯವಾಯಿತು. ಇದಕ್ಕಾಗಿ ಮೊದಲು ದ್ವಾರಕಾಧೀಶನಿಗೆ ಹಾಗೂ ನಮ್ಮ ನಗರದ ಜನರಿಗೆ ಧನ್ಯವಾದ ಹೇಳುತ್ತೇನೆ ಎಂದರು.
Also read: ಇಷ್ಟು ಹತ್ತಿರದಿಂದ ಶ್ರೀರಾಮನ ದರ್ಶನ ಪಡೆದ ನಾನು ಅದೃಷ್ಟವಂತ: ನಟ ರಕ್ಷಿತ್ ಶೆಟ್ಟಿ ಭಾವುಕ ಮಾತು
ನನ್ನ ಪುತ್ರನ ವಿವಾಹ ಮಹೋತ್ಸವಕ್ಕೆ ಸಹಕಾರ ನೀಡಿದ ನಮ್ಮ ನಗರದ ಜನರಿಗೆ ನಾನು ಹಾಗೂ ನೀತಾ ಅಂಬಾನಿ Neetha Ambani ಧನ್ಯವಾದ ಹೇಳುತ್ತೇವೆ. ಜಾಮ್ ನಗರ ಈಗ ಅಂತಾರಾಷ್ಟ್ರೀಯ ವೇದಿಕೆಯಲ್ಲಿದೆ. ಮುಂದಿನ ದಿನಗಳಲ್ಲಿ ಇದು ಬೇರೆಯದೇ ದಿಕ್ಕಿನಲ್ಲಿ ಕೊಂಡೊಯ್ಯಲಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















