ಕಲ್ಪ ಮೀಡಿಯಾ ಹೌಸ್ | ಹೈದರಾಬಾದ್ |
ಕೈಹಿಡಿದ ಧರ್ಮಪತ್ನಿಯನ್ನೇ ಕೊಂದು, ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಕುಕ್ಕರ್’ನಲ್ಲಿ ಬೇಯಿಸಿರುವ ಘೋರ ಘಟನೆ ಹೈದರಾಬಾದ್’ನ #Hyderabad ಮೀರ್ ಪೇಟೆಯಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ವೆಂಕಟ ಮಾಧವಿ(35) ಎಂದು ಗುರುತಿಸಲಾಗಿದ್ದು, ಆರೋಪಿ ಪತಿಯನ್ನು ನಿವೃತ್ತ ಯೋಧ ಗುರುಮೂರ್ತಿ ಎಂದು ವರದಿಯಾಗಿದೆ.
Also Read>> ರಸಪ್ರಶ್ನೆ ಸ್ಪರ್ಧಾ ಮನೋಭಾವ ಬೆಳೆಸುತ್ತದೆ: ಚಂದ್ರಪ್ಪ ಎಸ್. ಗುಂಡಪಲ್ಲಿ
ಗುರುಮೂರ್ತಿ ಹಾಗೂ ಮಾಧವಿ ಹದಿಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕೆಲವು ವರ್ಷದ ಹಿಂದೆ ಕುಟುಂಬ ಜಿಲ್ಲಾಲಗುಡ ನ್ಯೂ ವೆಂಕಟೇಶ್ವರ ಕಾಲನಿಯಲ್ಲಿ ಬಾಡಿಗೆ ಮಾಡಿಕೊಂಡು ವಾಸವಾಗಿದ್ದರು. ಗುರುಮೂರ್ತಿ, ಮಾಜಿ ಸೈನಿಕ, ಪ್ರಸ್ತುತ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಕೃತ್ಯದ ಹಿನ್ನೆಲೆಯೇನು?
ಕೆಲವು ವರ್ಷಗಳಿಂದ ಗಂಡ ಹೆಂಡತಿ ನಡುವೆ ಗಲಾಟೆ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಈ ನಡುವೆ ಮಾಧವಿ ಪೋಷಕರು ಗುರುಮೂರ್ತಿ ಕರೆ ಮಾಡಿ ವಿಚಾರಿಸಿದಾಗ ಆಕೆ ಮನೆಬಿಟ್ಟು ಹೋಗಿದ್ದಾಳೆ ಎಂದು ತಿಳಿಸಿದ್ದಾನೆ.
ಕೆಲವು ದಿನಗಳಲ್ಲಿ ವಾಪಾಸ್ ಬರದಿದ್ದಾಗ , ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹತ್ತಿರದ ಪೊಲೀಸ್ ಠಾಣೆಗೆ ಮಾಧವಿ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.
ಜೊತೆಗೆ ವೆಂಕಟೇಶ್ವರ ಕಾಲನಿಗೆ ಬಂದು ಮಾಧವಿ ವಾಸವಿದ್ದ ಮನೆಗೆ ಬಂದು ಪತಿ ಹಾಗೂ ಮಕ್ಕಳ ಬಳಿ ಮಾಹಿತಿ ಕಲೆ ಹಾಕಿದ್ದಾರೆ. ಎಲ್ಲ ಕಡೆ ಬಾವಿ, ನದಿ, ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಎಲ್ಲಾದರೂ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆಯೂ ತನಿಖೆ ನಡೆಸಿದ್ದಾರೆ. ಆದರೆ ಎಲ್ಲೂ ಒಂದು ಸುಳಿವೂ ಸಿಗಲಿಲ್ಲ ಇದರ ನಡುವೆ ಪತಿ ಗುರುಮೂರ್ತಿ ಮೇಲೆ ಪೊಲೀಸರು ಒಂದು ಕಣ್ಣಿಟ್ಟಿದ್ದರು.
ಆತನ ನಡವಳಿಕೆ ಮೇಲೆ ಅನುಮಾನಗೊಂಡ ಪೊಲೀಸರು ಆತನನ್ನು ಮತ್ತೆ ವಿಚಾರಣೆ ನಡೆಸಲು ಠಾಣೆಗೆ ಕರೆಸಿದ್ದಾರೆ. ಈ ವೇಳೆ ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ ಗುರುಮೂರ್ತಿಗೆ ಪೊಲೀಸರ ದಾಟಿಯಲ್ಲೇ ವಿಚಾರಣೆ ನಡೆಸಿದ್ದಾರೆ. ಈ ವೇಳೆ ತನ್ನ ಕೃತ್ಯವನ್ನು ವಿವರಿಸಿದ್ದಾನೆ ಇದನ್ನು ಕೇಳಿದ ಪೊಲೀಸರೇ ಒಂದು ಕ್ಷಣ ದಂಗಾಗಿದ್ದಾರೆ.
ಏನು ಮಾಡಿದ್ದ ಪತ್ನಿಗೆ?
ತನ್ನ ಪತ್ನಿಯನ್ನು ಕೊಂದ ಈ ದುಷ್ಟ ಪತಿ ಬಚ್ಚಲು ಮನೆಯಲ್ಲಿ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಕುಕ್ಕರ್’ನಲ್ಲಿ ಬೇಯಿಸಿದ್ದಾನೆ. ಬಳಿಕ ಅದನ್ನು ಒಣಗಿಸಿ, ಪುಡಿಪುಡಿ ಮಾಡಿ ಮೂರು ದಿನಗಳ ಕಾಲ ಮಾಂಸ ಮತ್ತು ಮೂಳೆಗಳನ್ನು ಪ್ಯಾಕ್ ಮಾಡಿ ಮೀರಪೇಟ್ ಸರೋವರಕ್ಕೆ ಎಸೆದಿದ್ದಾನೆ.
ಯೂಟ್ಯೂಬ್ ನೋಡಿ ಕೃತ್ಯ
ಇನ್ನು, ಆರೋಪಿ ಕೃತ್ಯ ಎಸಗುವ ಮುನ್ನ ಯೂಟ್ಯೂಬ್ ಮೂಲಕ ಯಾವೆಲ್ಲಾ ರೀತಿಯಲ್ಲಿ ಹತ್ಯೆ ಮಾಡಬಹುದು, ಸಾಕ್ಷಿ ಸಿಗದಂತೆ ಕುರುಹುಗಳನ್ನು ನಾಶ ಮಾಡುವುದು ಹೇಗೆ ಎಲ್ಲವನ್ನೂ ಕಲಿತುಕೊಂಡಿರುವುದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post