ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ಟಿಪ್ಪರ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ #RoadAccident ಐವರು ಮಾದಪ್ಪ ಭಕ್ತರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಳ್ಳೆಗಾಲ ತಾಲೂಕಿನ ಚಿಕ್ಕಿಂದುವಾಡಿ ಬಳಿಯಲ್ಲಿ ನಡೆದಿದೆ.
ಇಂದು ಮುಂಜಾನೆ ಘಟನೆ ನಡೆದಿದ್ದು, ಅಪಘಾತದ ರಭಸಕ್ಕೆ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
Also Read>> ಪ್ರಯೋಗಗಳ ಮೂಲಕ ಕಲಿಯುವ ಕುತೂಹಲಕಾರಿ ವಿಷಯ ವಿಜ್ಞಾನ: ಫಾ. ಮೋನಿಸ್
ಮಾಹಿತಿಯ ಪ್ರಕಾರ ಕಾರಿನಲ್ಲಿದ್ದ ಮೂವರು ಪುರುಷರು ಇಬ್ಬರು ಮಹಿಳೆಯರು ಮೃತಪಟ್ಟಿದ್ದು, ಅವರು ಮಂಡ್ಯ #Mandya ಮೂಲದವರು ಎಂದು ಹೇಳಲಾಗುತ್ತಿದೆ.
ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಶಿವರಾತ್ರಿ ಜಾತ್ರಾ ಮಹೋತ್ಸವದ ಮಹಾ ರಥೋತ್ಸವದಲ್ಲಿ ಪಾಲ್ಗೊಳ್ಳಲು ಇವರು ಕಾರಿನಲ್ಲಿ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.
Also Read>> ಶಿವಮೊಗ್ಗ | ಗುರುಗಳ ಪುಣ್ಯತಿಥಿಯಂದೇ ಇಹಲೋಕ ತ್ಯಜಿಸಿದ ವೇ.ಬ್ರ. ವಿನಾಯಕ ಬಾಯರಿ
ಅಪಘಾತ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಮುಸ್ಲಿಮೇತರರು ಮತ್ತು (ಕನಿಷ್ಠ ಇಬ್ಬರು) ಮಹಿಳಾ ಸದಸ್ಯರನ್ನು ವಕ್ಫ್ ಮಂಡಳಿಗೆ ನಾಮನಿರ್ದೇಶನ ಮಾಡುವುದು ಸೇರಿದಂತೆ ಈ ಪ್ರಸ್ತಾಪಗಳು ವಿರೋಧ ಪಕ್ಷಗಳಿಂದ ತೀವ್ರ ಪ್ರತಿಭಟನೆಗೆ ಕಾರಣವಾಗಿತ್ತು. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಲೋಕಸಭೆಯಲ್ಲಿ ಪರಿಚಯಿಸಿದ ನಂತರ ಆಗಸ್ಟ್ 2024 ರಲ್ಲಿ ಮಸೂದೆಯನ್ನು ಜೆಪಿಸಿಗೆ ಉಲ್ಲೇಖಿಸಲಾಗಿತ್ತು.
ಸಂಸದೀಯ ಸಮಿತಿಯು ವರದಿಯನ್ನು ಬಹುಮತದ ಮತಗಳಿಂದ ಅಂಗೀಕರಿಸಿತು. ಆದರೆ ಸಮಿತಿಯಲ್ಲಿರುವ ಪ್ರತಿಪP್ಷÀಗಳ ಎಲ್ಲಾ 10 ಸಂಸದರು ವರದಿಯನ್ನು ಆಕ್ಷೇಪಿಸಿದ್ದರು. ಅವರು ಭಿನ್ನಾಭಿಪ್ರಾಯ ಟಿಪ್ಪಣಿಗಳನ್ನು ಸಹ ಮಂಡಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಗದಾಂಬಿಕಾ ಪಾಲ್ ನೇತೃತ್ವದ ಜೆಪಿಸಿ ಶಿಫಾರಸು ಮಾಡಿದ ಹೆಚ್ಚಿನ ಬದಲಾವಣೆಗಳನ್ನು ಸೇರಿಸಿಕೊಂಡಿದೆ ಮತ್ತು ಕಳೆದ ವಾರ ಭಾರತೀಯ ಬಂದರು ಮಸೂದೆಯೊಂದಿಗೆ ಸಂಪುಟವು ಅದನ್ನು ಅಂಗೀಕರಿಸಿದೆ ಎಂದು ಮೂಲಗಳು ತಿಳಿಸಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post