ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಜಾತ್ರೆಗೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಹುಬ್ಬಳ್ಳಿ ರೈಲ್ವೆ ವಿಭಾಗವು ಲಚ್ಯಾಣ (LHN) ರೈಲು ನಿಲ್ದಾಣದಲ್ಲಿ ತಾತ್ಕಾಲಿಕ ರೈಲು ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ರೈಲು ಸಂಖ್ಯೆ 17307 ಮೈಸೂರು (MYS)–ಬಾಗಲಕೋಟೆ (BGK) ಬಸವ ಎಕ್ಸ್ಪ್ರೆಸ್ Mysore – Bagalkot Basava Express Train ಲಚ್ಯಾಣ ನಿಲ್ದಾಣದಲ್ಲಿ ಬೆಳಿಗ್ಗೆ 07:23ಕ್ಕೆ ಆಗಮಿಸಿ 07:24ಕ್ಕೆ ಹೊರಡಲಿದೆ. ಈ ರೈಲು ಏಪ್ರಿಲ್ 5 ರಿಂದ ಏಪ್ರಿಲ್ 11ರವರೆಗೆ ಲಚ್ಯಾಣ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ
ಅದೇ ರೀತಿ, ರೈಲು ಸಂಖ್ಯೆ 16535 ಮೈಸೂರು (MYS)–ಪಂಢರಪುರ (PVR) ಗೋಲ್ ಗುಂಬಜ್ ಎಕ್ಸ್ಪ್ರೆಸ್ಲಚ್ಯಾಣ ನಿಲ್ದಾಣದಲ್ಲಿ ಬೆಳಿಗ್ಗೆ 08:29ಕ್ಕೆ ಆಗಮಿಸಿ 08:30ಕ್ಕೆ ಹೊರಡಲಿದೆ. ಈ ರೈಲು ಏಪ್ರಿಲ್ 5 ರಿಂದ ಏಪ್ರಿಲ್ 11ರವರೆಗೆ ಲಚ್ಯಾಣ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ನಿಲುಗಡೆಗೆ ಆಗಲಿದೆ.
ರೈಲು ಸಂಖ್ಯೆ 16536 ಪಂಢರಪುರ (PVR)–ಮೈಸೂರು (MYS) ಗೋಲ್ ಗುಂಬಜ್ ಎಕ್ಸ್ಪ್ರೆಸ್ಲಚ್ಯಾಣ ನಿಲ್ದಾಣದಲ್ಲಿ ಸಂಜೆ 04:19ಕ್ಕೆ ಆಗಮಿಸಿ ಸಂಜೆ 04:20ಕ್ಕೆ ಹೊರಡಲಿದೆ. ಈ ರೈಲು ಏಪ್ರಿಲ್ 6ರಿಂದ ಏಪ್ರಿಲ್ 12ರವರೆಗೆ ಲಚ್ಯಾಣ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಹಾಗೆಯೇ, ರೈಲು ಸಂಖ್ಯೆ 17308 ಬಾಗಲಕೋಟೆ (BGK)–ಮೈಸೂರು (MYS) ಬಸವ ಎಕ್ಸ್ಪ್ರೆಸ್ಲಚ್ಯಾಣ ನಿಲ್ದಾಣದಲ್ಲಿ ಸಂಜೆ 05:29ಕ್ಕೆ ಆಗಮಿಸಿ 05:30ಕ್ಕೆ ಹೊರಡಲಿದೆ. ಈ ರೈಲಿಗೆ ಏಪ್ರಿಲ್ 6ರಿಂದ ಏಪ್ರಿಲ್ 12ರವರೆಗೆ ಲಚ್ಯಾಣ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಜಾತ್ರೆ ಭಕ್ತರ ಅನುಕೂಲಕ್ಕಾಗಿ ಈ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರಯಾಣಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















