ಕಲ್ಪ ಮೀಡಿಯಾ ಹೌಸ್ | ಕೋಲ್ಕತ್ತಾ |
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಜಯ ದಾಖಲಿಸಿದ್ದು, ಹಲವು ರೀತಿಯ ವಿಭಿನ್ನತೆಗೂ ಸಹ ಈ ಚುನಾವಣೆ ಸಾಕ್ಷಿಯಾಗಿದೆ.
15 ವರ್ಷಗಳ ಕಾಲ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಆಡಳಿತವನ್ನು ಅಂತ್ಯಗೊಳಿಸಿ, ಜಯಭೇರಿ ಬಾರಿಸಿರುವ ಬಿಜೆಪಿ ಮೇ 9ರಂದು ನೂತನ ಸರ್ಕಾರ ರಚಿಸಲಿದೆ.
Also Read>> ಗಾಂಜಾ ಮಾರಾಟ | ಇಬ್ಬರ ಬಂಧನ
ಬಿಜೆಪಿಯ ಈ ವಿಜಯದಲ್ಲಿ ಕೆಲವು ಜನಸಾಮಾನ್ಯ ಅಭ್ಯರ್ಥಿಗಳು ಗಮನ ಸೆಳೆದಿದ್ದು, ವಿಧಾನಸಭೆ ಪ್ರವೇಶಿಸಲು ಸಿದ್ದವಾಗಿದ್ದಾರೆ.
ಆರ್’ಜಿ ಕರ್ ರೇಪ್ ಸಂತ್ರಸ್ತೆ ತಾಯಿ ಈಗ ಎಂಎಲ್ಎ
ಇಲ್ಲಿನ ಆರ್’ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಯ ಮೇಲೆ ಭೀಕರ ಅತ್ಯಾಚಾರ ನಡೆಸಿ, ಹತ್ಯೆ ಮಾಡಲಾಗಿತ್ತು. ಈ ಸಾವಿಗೆ ನ್ಯಾಯಕ್ಕಾಗಿ ಬಹಳಷ್ಟು ಹೋರಾಟಗಳು ನಡೆದವು. ಅದರೆ, ಅಕೆ ಆತ್ಮಹತ್ಯೆ ಮಾಡಿಕೊಂಡಳು ಎಂದು ವರದಿ ಸಲ್ಲಿಸಿ, ಪ್ರಕರಣವನ್ನು ಮುಚ್ಚಿ ಹಾಕಲಾಯಿತು ಎಂದು ಆರೋಪ ಕೇಳಿಬಂದಿತು. ಸಂತ್ರಸ್ತೆಯ ತಾಯಿ ನ್ಯಾಯಕ್ಕಾಗಿ ಹಂಬಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಸಂತ್ರಸ್ತೆಯ ತಾಯಿ ರತ್ನಾ ದೇಬನಾಥ್ ಅವರಿಗೆ ಬಿಜೆಪಿ ಟಿಕೇಟ್ ನೀಡಿ ಕಣಕ್ಕಿಳಿಸಿದ್ದು, ಪಾನಿಹಾಟಿ ಕ್ಷೇತ್ರದಿಂದ ಭರ್ಜರಿ ಜಯ ದಾಖಲಿಸಿದ್ದಾರೆ.
ರತ್ನಾ ದೇಬನಾಥ್ ಅವರು ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ತೀರ್ಥಂಕರ ಘೋಷ್ ಅವರನ್ನು 28,836 ಮತಗಳ ಅಂತರದಿಂದ ಸೋಲಿಸಿದ್ದು, ಒಟ್ಟು 87,977 ಮತಗಳು ಇವರಿಗೆ ಬಿದ್ದಿವೆ. ಪ್ರತಿಸ್ಪರ್ಧಿ ಘೋಷ್ 59,141 ವೋಟ್ಗಳನ್ನು ಪಡೆದಿದ್ದಾರೆ.
Also Read>> ಗೋ ಸಮ್ಮಾನ ಅಹ್ವಾನ ಅಭಿಯಾನ; ಗೋಹತ್ಯೆ ನಿಷೇಧಕ್ಕೆ ಆಗ್ರಹಿಸಿ ಕಾಲ್ನಡಿಗೆ ಜಾಥಾ
ಸಂದೇಶಖಾಲಿ ಹಿಂಸಾಚಾರ ಪ್ರಕರಣದ ವೇಳೆ ತಮ್ಮ ಮಗಳನ್ನು ಕೈಯಲ್ಲಿ ಹಿಡಿದು ಪ್ರತಿಭಟನೆ ನಡೆಸಿದ್ದ ರೇಖಾ ಪಾತ್ರಾ ಕೂಡ ಟಿಎಂಸಿ ಅಭ್ಯರ್ಥಿಯನ್ನು ಮಣಿಸಿ ಗೆಲುವಿನ ನಗಾರಿ ಬಾರಿಸಿದ್ದಾರೆ. ಪಾತ್ರಾ 1,00,207 ಮತಗಳನ್ನು ಪಡೆದರೆ, ಸರ್ಕಾರ 94,786 ಮತಗಳನ್ನು ಪಡೆದಿದ್ದಾರೆ. ಇವರ ಗೆಲುವಿನ ಅಂತರ 5,421 ಮತಗಳು.
ಮನೆಕೆಲಸದಾಕೆ ಕಲಿತಾ ಮಾಝಿ
ಮನೆ ಕೆಲಸ ಮಾಡುತ್ತ ತಿಂಗಳಿಗೆ ಕೇವಲ 2,500 ರೂ. ಆದಾಯ ಹೊಂದಿದ್ದ ಕಲಿತಾ ಮಾಝಿ ಆಸ್ಗ್ರಾಮ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಇವರು ರಾಜಕೀಯಕ್ಕೆ ಬರಲು ಮುನ್ನ ನಾಲ್ಕು ಮನೆಗಳಲ್ಲಿ ಗೃಹಕಾರ್ಯ ನಿರ್ವಹಿಸುತ್ತಿದ್ದರು. ಜನಾಧಾರಿತ ಅಭ್ಯರ್ಥಿಯಾಗಿ ಗಮನ ಸೆಳೆದಿದ್ದ ಅವರು 1,07,692 ಮತಗಳನ್ನು ಪಡೆದು ಎದುರಾಳಿ ಶ್ಯಾಮ ಪ್ರಸನ್ನ ಲೋಹಾರ್ ಅವರನ್ನು 12,535 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಸಾಧಾರಣ ಹಿನ್ನೆಲೆಯಿಂದ ಬಂದ ಮಾಝಿ ಆರ್ಥಿಕ ಸಂಕಷ್ಟದಿಂದಾಗಿ ಬಾಲ್ಯದಲ್ಲೇ ಶಿಕ್ಷಣವನ್ನು ತ್ಯಜಿಸಬೇಕಾಯಿತು. ತನ್ನ ಕುಟುಂಬವನ್ನು ಪೋಷಿಸಲು, ಅವರು ಅನೇಕ ಮನೆಗಳಲ್ಲಿ ಕೆಲಸ ಮಾಡಿದರು. ಅವರ ಪತಿ ಪ್ಲಂಬರ್ ಆಗಿ ಜೀವನ ಸಾಗಿಸುತ್ತಾರೆ. ಇವರಿಗೆ ಒಬ್ಬ ಮಗನಿದ್ದು, 8ನೇ ತರಗತಿ ಓದುತ್ತಿದ್ದಾನೆ.
ಕಳೆದ ಒಂದು ದಶಕದಿಂದ ರಾಜಕೀಯದಲ್ಲಿ ಸಕ್ರಿಯರಾಗಿರುವ ಮಾಝಿ, ಬೂತ್ ಮಟ್ಟದ ಕಾರ್ಯಕರ್ತೆಯಾಗಿ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದರು. 2021 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅವರನ್ನು ಕಣಕ್ಕಿಳಿಸಿತ್ತು. ಅಲ್ಲಿ ಅವರು ಸುಮಾರು ಶೇ.41 ರಷ್ಟು ಮತಗಳನ್ನು ಪಡೆದರು. ಈ ಹಿಂದೆ 2021 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.
ಬಿಜೆಪಿ ನಾಯಕತ್ವವು ಅವರ ಮೇಲೆ ಮತ್ತೆ ನಂಬಿಕೆ ಇರಿಸಿ, 2026 ರಲ್ಲಿ ಎರಡನೇ ಬಾರಿ ಟಿಕೆಟ್ ನೀಡಿತ್ತು. ಬಿಜೆಪಿ ವರಿಷ್ಠರ ಲೆಕ್ಕಾಚಾರದಂತೆಯೇ ಕಲಿತಾ ಗೆಲುವು ಸಾಧಿಸಿದ್ದು, ಪಶ್ಚಿಮ ಬಂಗಾಳದಲ್ಲಿ ಹೊಸ ಶಕೆ ಆರಂಭವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















