ಶಿವಮೊಗ್ಗ: ನಿನ್ನೆ ರಾತ್ರಿ ಈ ಶತಮಾನದ ಅತ್ಯಂತ ಸುಧೀರ್ಘ ಚಂದ್ರ ಗ್ರಹಣ ಸಂಭಿಸಿದ್ದು, ಇಡಿಯ ವಿಶ್ವ ಇದನ್ನು ನೋಡಿ, ಪ್ರಕೃತಿಯ ಕೌತುಕವನ್ನು ಕಂಡಿದೆ.
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲೂ ಸಹ ಗ್ರಹಣ ಬಹುತೇಕ ಸ್ಪಷ್ಟವಾಗಿ ಗೋಚರವಾಗಿದ್ದು, ಇದನ್ನು ಹಲವರು ಬರಿಗಣ್ಣಿನಲ್ಲಿ, ಕ್ಯಾಮೆರಾ ಕಣ್ಣಲ್ಲಿ ನೋಡಿದ್ದಾರೆ.
ಪ್ರಕೃತಿಯ ಇಂತಹ ಕೌತುಕವನ್ನು ಶಿವಮೊಗ್ಗದ ಯುವ ಛಾಯಾಗ್ರಾಹಕ ಶಾಮ ಶಂಕರ್ ಭಟ್ ತಮ್ಮ ಕ್ಯಾಮೆರಾದಲ್ಲಿ ಅತ್ಯಂತ ಸ್ಪಷ್ಟವಾಗಿ ಸೆರೆ ಹಿಡಿದಿರುವ ಈ ಚಿತ್ರವನ್ನು ನೋಡಿ:

















