ಬೆಂಗಳೂರು: ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆಯುತ್ತಿರುವ “ಕೃಷ್ಣಕಥಾ” ಸಪ್ತಾಹದಲ್ಲಿ ಎರಡನೇ ದಿನದ ಕೃಷ್ಣಕಥಾ ಪ್ರವಚನವನ್ನು ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನಡೆಸಿಕೊಟ್ಟರು. ಖ್ಯಾತ ಚಿತ್ರ ಕಲಾವಿದ ನೀರ್ನಳ್ಳಿ ಗಣಪತಿ ಹೆಗಡೆಯವರ ಸ್ಥಳದಲ್ಲೇ ಬಿಡಿಸಿದ ಚಿತ್ರ ಹಾಗೂ ಆನಂತರ ನಡೆದ ರೂಪಕ ಜನಮನಸೆಳೆಯಿತು.
ಸೆ. 08 ವರೆಗೆ ಪ್ರತಿದಿನ ಸಂಜೆ ಶ್ರೀರಾಮಾಶ್ರಮದಲ್ಲಿ ಕೃಷ್ಣಕಥಾ:
ಪ್ರಸಿದ್ಧ ಶ್ರೀರಾಮಕಥಾ ಮಾದರಿಯಲ್ಲಿ ಪ್ರವಚನ – ಗಾಯನ – ವಾದನ – ಚಿತ್ರ – ರೂಪಕಗಳ ಸಂಯೋಜನೆಯಲ್ಲಿ, ಶ್ರೀಕೃಷ್ಣನ ತತ್ವಗಳನ್ನು ಜನಮಾನಸಕ್ಕೆ ಬಿತ್ತರಿಸುವ ವಿಶಿಷ್ಟ ಕಾರ್ಯಕ್ರಮ “ಕೃಷ್ಣಕಥಾ”ವನ್ನು ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನಡೆಸಿಕೊಡಲಿದ್ದು, ನಾಡಿನ ಖ್ಯಾತ ಕಲಾವಿದರುಗಳು ಭಾಗವಹಿಸಲಿದ್ದಾರೆ.
ಕಲಾಸಕ್ತರು ಹಾಗೂ ಆಸ್ತಿಕ ಭಕ್ತಜನರು ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ; ಮನೋರಂಜನೆಯೊಂದಿಗೆ ಕೃಷ್ಣನ ತತ್ತ್ವಗಳನ್ನು ಅರಿತುಕೊಳ್ಳಬಹುದಾಗಿದೆ.
ಸೆ. 08 ವರೆಗೆ ಪ್ರತಿದಿನ : ಸಂಜೆ 06.00 – 09.00
ಸ್ಥಳ: ಶ್ರೀರಾಮಚಂದ್ರಾಪುರಮಠ, ಗಿರಿನಗರ
Discussion about this post