ಸುಪ್ರೀಂ ಕೋರ್ಟ್ ಮತ್ತೊಂದು ತೀರ್ಪು ಸ್ವಾಗತಾರ್ಹವೆ. ಆದರೆ ಯಾಕೆ ಸ್ತ್ರೀಯರಿಗೆ ಪ್ರವೇಶ ಇಲ್ಲ ಎಂದು ಕಟ್ಟುಪಾಡು ಮಾಡಿದ್ದರು ಹಿಂದಿನವರು?
ಸ್ತ್ರೀಯು ಗೋ ಶಕ್ತಿ(ಅಂದರೆ ಸಾತ್ವಿಕ ಗುಣಾಧಿಖ್ಯ). ಅಯ್ಯಪ್ಪ ಸಂಕರ್ಷಣಾ ಶಕ್ತಿ, most powerful. ಅಂದರೆ ಯುದ್ಧ ಸ್ಥಿತಿ ಗುಣ. ಇದು ಸ್ತ್ರೀಯರ ಮೇಲೆ negative energy ಕೊಟ್ಟಾಗ, ಸ್ತ್ರೀಯ ಧಾರಣಾ ಶಕ್ತಿಯೂ ಕಡಿಮೆ ಇದ್ದಾಗ ಗರ್ಭ ಕೋಶದ ಮೇಲೆ ದುಷ್ಪರಿಣಾಮ ಬೀರಬಹುದು. ಇದರಿಂದ ಸಂತತಿಗೆ ಹಾನಿಯೂ ಆಗಬಹುದು. ಇದಕ್ಕಾಗಿ ಆ ಕಾಲದಲ್ಲಿ ಪೂರ್ಣ ನಿಷೇಧ ಮಾಡಿದ್ದರು.
ಆ ಕಾಲದಲ್ಲಿಯೂ ಧಾರಣಾ ಶಕ್ತಿ ಇದ್ದ ಸ್ತ್ರೀಯರು ಇಲ್ಲವೆಂದಿಲ್ಲ. ಆದರೆ ಬಹುಪಾಲು ಸ್ತ್ರೀಯರು ಸಾತ್ವಿಕವಾಗಿಯೇ ಇದ್ದರು. ಇದನ್ನು ವಿಂಗಡಣೆ(ಇಂಟರ್ ವ್ಯೂ ತರಹ) ಮಾಡಲು ಸಾಧ್ಯವೇ? ಅದಕ್ಕಾಗಿ ಒಟ್ಟಾಗಿ ನಿಷೇಧ ಮಾಡಿದರು. ಯಾರೋ ರಜಸ್ವಲೆಯಾಗುವವರಿಗೆ ಬೇಕಾಗಿ ಎಂದು ಕಾರಣ ಹೇಳಿರಬಹುದು. ಅವರಿಗೆ ಪೂರ್ಣವಾದ ತಿಳುವಳಿಕೆಯ ಕೊರತೆಗಳಿರಬಹುದು.
ನಾನು ತಿಳಿದಂತೆ ಅಂದರೆ ಮುಟ್ಟು ನಿಂತವರು ಹೋಗುತ್ತಿದ್ದರು. ಸುಮಾರು ಐವತ್ತು ವರ್ಷಗಳ ಹಿಂದೆ ಆಗ ನಾನು ಹತ್ತು ವರ್ಷದವನಿದ್ದಾಗ ಒಬ್ರು ಎಂಬತ್ತೈದು ವರ್ಷದ ಮುದುಕಿ ಪ್ರತೀ ವರ್ಷವೂ ಶಬರಿಮಲೆ ಯಾತ್ರೆಗೆ ಹೋಗುವವರು ನಮ್ಮ ಮನೆಗೆ ಬಂದು ಊಟ ಮಾಡಿ ಒಂದುದಿವಸ ನಮ್ಮಲ್ಲೇ ಉಳಿದು ಮುಂದೆ ಕಾಲ್ನಡಿಗೆಯಲ್ಲಿ ಪ್ರಯಾಣ ಮಾಡುತ್ತಿದ್ದರು.
ಆಕೆ ಹೇಳುವ ಮಾತು ನನಗೆ ಈಗಲೂ ನೆನಪಿದೆ. ಯಾವ ಸ್ತ್ರೀಯು ಗರ್ಭಧಾರಣೆಯನ್ನು ನಿಲ್ಲಿಸಿರುತ್ತಾರೋ, ಮುಟ್ಟಾಗುವುದು ನಿಂತಿರುತ್ತದೋ, ಅಂತಹ ಸ್ತ್ರೀಯರು ಹೋಗಬಹುದು ಎಂದು ಹೇಳುತ್ತಿದ್ದರು. ಬಹುಷಃ ಅಯ್ಯಪ್ಪ ಸಾನ್ನಿಧ್ಯದ ಸಂಕರ್ಷಣಾ ಶಕ್ತಿಯು ಗರ್ಭದ ಮೇಲೆ ದುಷ್ಪರಿಣಾಮ ಬೀರಬಹುದು ಅಥವಾ ಸನ್ನಿಧಿಯಲ್ಲೇ ಮುಟ್ಟಾಗಬಹುದು ಎಂಬ ಚಿಂತನೆಯಲ್ಲಿ ಹೇಳಿದ್ದರಬಹುದು.
ಅಂದರೆ ನಮ್ಮ ಧಾರಣಾ ಶಕ್ತಿ ಕಡಿಮೆ ಇದ್ದಾಗ ಅದು ನಮಗೆ ತೊಂದರೆ ನೀಡಬಹುದು ಎಂಬುದೇ ತತ್ವ. ನೀವು ನೇಣು ಹಾಕಿಕೊಂಡವರನ್ನು ಪರೀಕ್ಷಿಸಿದಾಗ ಅವರ ವೀರ್ಯ ಸ್ಕಲನ ಆಗಿರುತ್ತದೆ. ಸ್ಕಲನ ಆಗುವುದು ಕೇವಲ ಕಾಮೋದ್ರೇಕದಿಂದ ಮಾತ್ರವಲ್ಲ ಎಂಬುದನ್ನು ತೋರಿಸುತ್ತದೆ. ಹಾಗೆಯೇ ಮುಟ್ಟಾದವರು ಸ್ನಾನ ಮುಗಿಸಿ ಹತ್ತು ದಿನಗಳ ಒಳಗೆಯೇ ಇಂತಹ ಸಂಕರ್ಷಣಾ ಶಕ್ತಿ ಸ್ಥಾನಗಳಿಗೆ ಹೋಗಿ ಬಂದು ಮತ್ತೆ ರಜಸ್ವಲೆಯರಾದ ಉದಾಹರಣೆ ಸಾಕಷ್ಟಿದೆ.
ವೈದ್ಯರುಗಳಲ್ಲಿ ಕೇಳಿದರೆ ಇಂತಹ ಘಟನೆಗಳ ಬಗ್ಗೆ ವಿವರ ಲಭಿಸಹುದು. ಮಹಿಳೆಯರು ಹಿಂದೆ ಹೋಗುತ್ತಿದ್ದರು ಎಂದರೆ ಯಾವ ಮಹಿಳೆ? ಎಂದು ತಿಳಿಯಬೇಕಿದೆ. ಅದರ ಅರ್ಥ, ಗರ್ಭಧಾರಣೆ ನಿಂತಿರುವವರು, ಗರ್ಭಧಾರಣೆ ಬಯಸದವರು ಇತ್ಯಾದಿ ಸ್ತ್ರೀಯರು ಎಂದರ್ಥ. ಸಾಮಾನ್ಯ ನ್ಯಾಯಾಲಯಗಳು ವ್ಯವಹಾರಿಕವಾಗಿ, ಪರಸ್ಪರ ವಿನಿಮಯವಾಗುವ ದಾಖಲೆಗಳಿಗನುಗುಣವಾಗಿಯೇ ತೀರ್ಮಾನ ನೀಡಬೇಕಾಗುತ್ತದೆ. ಅಧ್ಯಾತ್ಮಿಕ ಭಾವನೆಗನುಗುಣವಾಗಿ ನೀಡಲು ಸಾಧ್ಯವಿರುವುದಿಲ್ಲ.
ಇಂತಹ ಅಧ್ಯಾತ್ಮಿಕ ನೆಲೆಗಟ್ಟಿನ ಆಧಾರವನ್ನು ಮಂಡಳಿ ನೀಡುತ್ತಿದ್ದರೆ ಪರಿಗಣಿಸುತ್ತಿತ್ತೋ ಏನೊ. ನಾವು ನ್ಯಾಯಾಲಯಕ್ಕೆ ಒದಗಿಸುವ ದಾಖಲೆಗಳಲ್ಲಿ ಹಿಂದೆ ಬಿದ್ದಿದ್ದರೂ, ಈಗ ನೀಡಿದ ತೀರ್ಮಾನವನ್ನು ಸ್ವಾಗತಿಸಲೇಬೇಕು. ಇದು ನಾವು ನ್ಯಾಯಾಲಯಕ್ಕೆ ಕೊಡುವ ಗೌರವವೂ ಆಗುತ್ತದೆ. ಒಟ್ಟಿನಲ್ಲಿ ಕಾಲ ಬದಲಾದಂತೆ ಪರಿವರ್ತನೆಗಳು ಆಗಬೇಕು ಎಂದಿದ್ದರೂ, ಮಾನವೀಯ, ದೈಹಿಕ, ದೈವಿಕ ಕ್ರಿಯಾದಿಗಳಿಗೆ ಚ್ಯುತಿ ಉಂಟಾಗಬಾರದು ಎಂಬುದು ನನ್ನ ಅಭಿಪ್ರಾಯ.
-ಪ್ರಕಾಶ್ ಅಮ್ಮಣ್ಣಾಯ,
ಜ್ಯೋರ್ತಿವಿಜ್ಞಾನಂ
Discussion about this post