Monday, June 30, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಬೆಂಗಳೂರು ನಗರ

ಹವ್ಯಕ ಸಮುದಾಯದ ಮೇಲಿನ ಅಭಿಮಾನದಿಂದ ಇಲ್ಲಿಗೆ ಬಂದಿದ್ದೇನೆ: ಪೇಜಾವರ ಶ್ರೀ 

ಅರಮನೆ ಮೈದಾನದಲ್ಲಿ ಆಯೋಜನೆಗೊಂಡಿರುವ ಎರಡನೆಯ ವಿಶ್ವ ಹವ್ಯಕ ಸಮ್ಮೇಳನ

December 30, 2018
in ಬೆಂಗಳೂರು ನಗರ
0 0
0
Share on facebookShare on TwitterWhatsapp
Read - 4 minutes

ಬೆಂಗಳೂರು: ಸಂಘಟನೆ ಉದ್ಧಾರದ ಹಾದಿಯಾದರೆ, ವಿಘಟನೆ ವಿನಾಶದ ಹಾದಿ. ಸಂಘಟನೆ ಹವ್ಯಕ ಮಹಾಸಭೆಯ ಉಸಿರಾಗಿರುವುದರಿಂದ ನಾವು ಹವ್ಯಕ ಮಹಾಸಭೆಯನ್ನು ಸಮರ್ಥಿಸಬೇಕು. ನಾವು ಸಂಘಟನೆಯ ಜೊತೆಗೋ? ವಿಘಟನೆಯ ಜೊತೆಗೋ?? ಎಂದು ಪ್ರಶ್ನಿಸಿಕೊಳ್ಳಬೇಕು ಎಂದು ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.

ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಸಮಾಜವನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು, ಒಬ್ಬೊಬ್ಬ ಹವ್ಯಕನೂ ಒಂದೊಂದು ದೀಪ ಇದ್ದಂತೆ, ಹವ್ಯಕತ್ವ ಎಂದರೆ ಬೆಳಕು. ಬಾಹುಬಲ, ಹಣಗಳು ಹವ್ಯಕತ್ವವಲ್ಲ, ಅರಿವಿನ ದೀಪದಂತಿರುವ ಹವ್ಯಕರು ಇಂದು ಅರಮನೆ ಮೈದಾನವನ್ನು ಬೆಳಗುತ್ತಿದ್ದಾರೆ. ಒಟ್ಟು ಹವ್ಯಕರು ಸಂಘಟಿತರಾಗಿ ಸಮಾವೇಶ ನಡೆದಿರುವುದು ಸಮಾಜಕ್ಕಷ್ಟೇ ಅಲ್ಲ, ದೇಶಕ್ಕೆ ಶೋಭೆ ಎಂದು ಅಭಿಪ್ರಾಯಪಟ್ಟರು.

ಬೆಳಕು ಬೆಳಕು ಸೇರುವುದು ಸುಲಭ ಹಾಗೂ ಸರಳ, ಆದರೆ ಕತ್ತಲೆ ಬೆಳಕಿನ ಜೊತೆ ಸೇರುವುದಿಲ್ಲ. ಅದಕ್ಕೆ ಅದೇ ಹೊಣೆ ಹೊರತು ಬೇರೆಯವರಲ್ಲ ಎಂದ ಶ್ರೀಗಳು, ದುರ್ಯೋಧನ ಹಾಗೂ ಧರ್ಮರಾಯನ  ದೃಷ್ಟಾಂತವನ್ನು ಉದಾಹರಿಸಿ, ನಾನು ಮೊದಲು ನಾನು ಮೇಲೆ ಎನ್ನುವುದು ದುರ್ಯೋಧನತ್ವ, ದುರ್ಯೋಧನ ರತ್ನಗಳಿಂದ ಖಜಾನೆ ತುಂಬಿದ ಆದರೆ ಅವುಗಳ ನಡುವೆ ಅಂತರವಿತ್ತು. ಆದರೆ ಧರ್ಮರಾಯ ದೀಪಗಳಿಂದ ಖಜಾನೆಯನ್ನು ತುಂಬಿದ. ಆ ಬೆಳಕಿನಲ್ಲಿ ಆವರಣದಲ್ಲಿ ಅಂತರವಿರಲಿಲ್ಲ. ಆಮೂಲಕ ಕೃಷ್ಣ ಆ ಪಂಥವನ್ನು ಗೆದ್ದ ಎಂದರು.

‘ಉದ್ಧರೇದಾತ್ಮನಾತ್ಮಾನಮ್’ ಎಂದು ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ. ನಿನಗೆ ನೀನೆ ಬಂಧು, ನಿನಗೆ ನೀನೆ ಶತೃ, ನಮ್ಮ ಉದ್ಧಾರವನ್ನು ನಾವೇ ಮಾಡಿಕೊಳ್ಳಬೇಕು. ಭಗವದ್ಗೀತೆಯ ಈ ಮಾತುಗಳು ಎಲ್ಲಾ ಸಂದರ್ಭ ಸನ್ನಿವೇಶಗಳಿಗೂ ಅನ್ವಯವಾಗುತ್ತದೆ.  ಸಂಘಟಿತರಾಗುವ ಮೂಲಕ ನಾವು ನಮ್ಮ ಸಮಾಜವನ್ನು ಉದ್ಧಾರ ಮಾಡಬಹುದು. ಹವ್ಯಕ ಮಹಾಸಭೆ ಎಲ್ಲರನ್ನೂ ಒಂದುಗೂಡಿಸುವ ದಿಶೆಯಲ್ಲಿ ಇರುವುದರಿಂದ ನಾವು ಅವರ ಜೊತೆ ಇರಬೇಕು,

ಪ್ರೀತಿ ಇರುವಲ್ಲಿ ಷರತ್ತಿಲ್ಲ : ರಾಮಚಂದ್ರಾಪುರಮಠ ಅಖಿಲ ಹವ್ಯಕ ಮಹಾಸಭೆಯ ಜೊತೆಗೆ ಸದಾ ಇದೆ. ಸಂಘಟನೆಗೆ ಬೆಂಬಲವಾಗಿ ಇರುತ್ತೇವೆ, ಆದರೆ ಪ್ರತಿಯಾಗಿ ಯಾವ ಫಲಪೇಕ್ಷೆಯೂ ಇಲ್ಲ ಹಾಗೂ ಷರತ್ತು ಇಲ್ಲ. ಪ್ರೀತಿ ಇರುವಲ್ಲಿ ಷರತ್ತು ಉದ್ಭವಿಸುವುದಿಲ್ಲ. ಮಹಾಸಭೆಯ ಸಂಘಟನೆಯಲ್ಲಿ ನಮಗೆ ಪ್ರೀತಿ ಇದೆ. ನಾವು ಸಂಘಟನೆಗೆ ಎಂದೂ ತೊಡಕಾಗುವುದಿಲ್ಲ, ಶಕ್ತಿಯಾಗಿ ಇರುತ್ತೇವೆ. ನಮಗೆ ಸ್ಥಾನಮಾನದ ಅಪೇಕ್ಷೆ ಇಲ್ಲ, ಗುರುವೇ ಸಣ್ಣವರಾದರೆ ಸಮಾಜ ದೊಡ್ಡದಾಗುವುದು ಹೇಗೆ? ಗುರುಗಳು ಎಂದೂ ಉದಾರವಾಗಿರಬೇಕು ಎಂದರು.

ಸಮಾಜಕ್ಕೆ ಸಂಘಟನೆಯ ಹಸಿವಿದೆ : ಸಮ್ಮೇಳನಕ್ಕೆ ಸಾಮಾನ್ಯರು ಹಾಗೂ ಗಣ್ಯರು ಬರದಂತೆ ತಡೆಯಲು ಅನೇಕ ಪ್ರಯತ್ನಗಳು ನಡೆದಿವೆ.  ಆದರೆ ಎಲ್ಲಾ ಭಾಗಗಳಿಂದ ಜನಸಾಗರ ಸಮ್ಮೇಳನದಲ್ಲಿ ನೆರೆದಿದೆ. ಗಣ್ಯರು ಕೂಡ ಎಲ್ಲಾ ಆಗಮಿಸಿದ್ದಾರೆ. ಇದು ಸಮಾಜಕ್ಕೆ ಸಂಘಟನೆಯ ಬಗ್ಗೆ ಇರುವ ಹಸಿವನ್ನು ತೋರಿಸುತ್ತದೆ. ಇದು ಸಮಾಜ ಎಲ್ಲಿದೆ, ಯಾವುದರ ಜೊತೆ ಸಮಾಜ ಇದೆ ಎಂಬುದನ್ನು ಸಿದ್ಧಪಡಿಸುತ್ತದೆ. ಇದು ಆತ್ಮಾವಲೋಖನವನ್ನು ಮಾಡಿಕೊಳ್ಳುವ ಸಂದರ್ಭವಾಗಿದೆ. ಈಗಲೂ ಸಂಘಟನೆಯಾಗದಿದ್ದರೆ ಇನ್ನು ಯಾವಾಗ? ಪ್ರಪಂಚ ನಮ್ಮ ಸಮಾಜದತ್ತ ನೋಡುತ್ತಿದೆ. ಜೀವ ದೇವಾತ್ಮಗಳ ಸಾಧನೆ ಮಾಡುವ ಮೊದಲು, ಜೀವ ಜೀವಾತ್ಮಗಳು ಒಂದಾಗಬೇಕು. ಜೀವ – ಜೀವಾತ್ಮಗಳಲ್ಲಿ ಒಂದಾಗದವನು ಅದ್ವೈತದ ಸಾಧನೆ ಮಾಡಲಾರ ಎಂದರು.

ಸರ್ಕಾರ ಮಾಡಲಾಗದ ಕಾರ್ಯವನ್ನು ಮಠ ಮಹಾಸಭೆಗೆ ಮಾಡುತ್ತದೆ : ಧರ್ಮ ಸರ್ಕಾರವಾದ ಮಠ ಮಹಾಸಭೆಗೆ ಸರ್ಕಾರ ಮಾಡಲಾಗದ ಒಳಿತನ್ನೂ ಮಾಡಲು ಸಶಕ್ತವಾಗಿದೆ. ಶ್ರೀರಾಮಚಂದ್ರಾಪುರಮಠದ ಕೈಕಟ್ಟುವ ಪ್ರಯತ್ನಗಳು ನಡೆಯುತ್ತಿವೆ, ಅವುಗಳ ಮಧ್ಯೆಯೂ ಮಹಾಸಭೆಯ ಉತ್ತಮ ಕಾರ್ಯಗಳ ಜೊತೆ ಮಠ ಇರುತ್ತದೆ.

ಪರಮಪೂಜ್ಯ ಪೇಜಾವರ ಮಠಾಧೀಶ ಶ್ರೀಶ್ರೀ ವಿಶ್ವೇಶ್ವರ ತೀರ್ಥ ಶ್ರೀಪಾದರು ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿ, ಹವ್ಯಕ ಸಮುದಾಯದ ಮೇಲಿನ ಅಭಿಮಾನದಿಂದ ಇಲ್ಲಿಗೆ ಬಂದಿದ್ದೇನೆ. ಎಲ್ಲೆಲ್ಲಿ ಬಿಕ್ಕಟ್ಟಿದೆಯೋ ಅಲ್ಲೆಲ್ಲ ಒಗ್ಗಟ್ಟಾಗಬೇಕು. ಇದು ನಮ್ಮ ಆಶಯ.ಹವ್ಯಕ – ಶಿವಳ್ಳಿ – ಕೋಟ ಎಂದು ಭಿನ್ನಾಭಿಪ್ರಾಯ ಸಲ್ಲ, ಎಲ್ಲರೂ ಒಗ್ಗಟ್ಟಾಗಬೇಕು. ಈ ದಿಶೆಯಲ್ಲಿ ಹವ್ಯಕ ಸಮಾಜದ ಸಂಘಟನೆಯನ್ನು ಸ್ವಾಗತಿಸುತ್ತೇನೆ. ಜಾತಿ  ಉಪಜಾತಿಯ ಜೊತೆಗೆ ಸಮಗ್ರ ಹಿಂದೂ ಸಮಾಜದ ಬಗ್ಗೆ ಚಿಂತಿಸುವ ಪ್ರವೃತ್ತಿಯನ್ನು ನಾವು ಬೆಳೆಸಿಕೊಳ್ಳಬೇಕು.
ಹವ್ಯಕ ಸಮಾಜಕ್ಕೆ ಸೂರ್ಯ – ಚಂದ್ರರಂತೆ ಎರಡು ಗುರುಪೀಠಗಳಿವೆ. ರಾಮಚಂದ್ರಾಪುರಮಠದ ಶ್ರೀಗಳ ಜೊತೆಗೆ ಅವರ ಸಂನ್ಯಾಸ ಸ್ವೀಕಾರದ ಕ್ಷಣದಿಂದಲೂ ಅವರ ಜೊತೆ ನಾವಿದ್ದೇವೆ. ಅವರ ಜೊತೆ ಉತ್ತಮ ಬಾಂಧವ್ಯವನ್ನು ನಾವು ಹೊಂದಿದ್ದೇವೆ ಎಂದರು.
ಬಾಲ್ಯದಿಂದಲೂ ಹವ್ಯಕ ಸಮಾಜದ ಜೊತೆ ಅವಿನಾಭಾವ ಸಂಬಂಧ ಇದೆ. ನಮ್ಮ ಉಡುಪಿಯ ಸಂಸ್ಕೃತ ವಿದ್ಯಾಲಯದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಹವ್ಯಕರೇ ಆಗಿರುತ್ತಾರೆ. ಹವ್ಯಕ ಸಮುದಾಯ ಬ್ರಾಹ್ಮಣ ಸಮುದಾಯದಲ್ಲೂ ಪ್ರತಿಭಾವಂತ ಸಮಾಜ. ಉನ್ನತ ಸಾಧನೆ ಮಾಡಿದ ಕೀರ್ತಿ ಈ ಸಮಾಜದ್ದು ಎಂದ ಅವರು, ಯಕ್ಷಗಾನ, ಮಾಧ್ಯಮಗಳಲ್ಲಿ ಹವ್ಯಕ ಕೊಡುಗೆ ಅನುಪಮವಾದದ್ದು ಎಂದು ಅಭಿಪ್ರಾಯಪಟ್ಟರು.
ನ್ಯಾಯಮೂರ್ತಿ ಶ್ರೀ ಶ್ರೀಧರ್ ರಾವ್ ಮುಖ್ಯ ಅತಿಥಿಗಳಾಗಿ ಮಾತನಾಡಿ, ಧನಕನಕಗಳನ್ನು ತಿನ್ನಲು ಸಾಧ್ಯವಿಲ್ಲ. ಕೃಷಿಯಲ್ಲಿ ತೊಡಗಿಕೊಂಡ ಸಮಾಜ ಹವ್ಯಕ ಸಮಾಜ. ಪರೋಪಕಾರಾರ್ಥಂ ಇದಂ ಶರೀರಂ ಎಂಬಂತೆ ಸದಾ ಪರೋಪಕಾರದಲ್ಲಿ ಹಾಗೂ ಇತರ ವರ್ಗಗಳ ಬೆಳವಣಿಗೆ ಪೂರಕವಾಗಿರುವ ಹಿರಿಮೆ ಹವ್ಯಕರದ್ದು ಎಂದು ಅಭಿಪ್ರಾಯಪಟ್ಟರು.

ಉದ್ಯಮಿ ವಿಜಯ ಸಂಕೇಶ್ವರ್ ಮಾತನಾಡಿ, ಇಂದು ಪ್ರತಿಭಾ ಪಲಾಯನ ಹೆಚ್ಚಾಗುತ್ತಿದೆ, ವಿದೇಶದಲ್ಲಿ  ನೆಲೆಸಿರುವ ಹವ್ಯಕರು ಈ ಕುರಿತು ಚಿಂತನೆ ನಡೆಸಬೇಕಿದ್ದು, ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸಿಬೆಳೆಸುವಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ ಎಂದರು.  ರಾಘವೇಶ್ವರ ಶ್ರೀಗಳ ಕಾರ್ಯಯೋಜನೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿ, ಗೋವು ಭಾರತದ ಸಂಪತ್ತು, ಅಂತಹಾ ಹಲವಾರು ಅಪರೂಪದ ಗೋತಳಿಗಳನ್ನು ಉಳಿಸುವ ಕಾಯಕದಲ್ಲಿ ಪೂಜ್ಯ ರಾಘವೇಶ್ವರ ಭಾರತೀ ಶ್ರೀಗಳು ನಿರತರಾಗಿದ್ದಾರೆ. ಹಾಗೆಯೇ ನಾವೂ ನಮ್ಮ ಭಾರತೀಯರ ಸಂಪತ್ತಾದ ನಮ್ಮ ಸಂಸ್ಕೃತಿಯನ್ನು ಸಂರಕ್ಷಿಸಿಕೊಳ್ಳಬೇಕಿದೆ ಎಂದರು.

ಮಾಜಿ ಸಚಿವ ಸುರೇಶ್ ಕುಮಾರ್ ಮಾತನಾಡಿ, ಅರಮನೆ ಮೈದಾನಕ್ಕೆ ಬಂದಾಗ ಅರಮನೆ ಮೈದಾನಕ್ಕೆ ಬಂದೆ ಅನಿಸಲಿಲ್ಲ. ಸಾಗರಕ್ಕೆ, ಸೊರಬಕ್ಕೋ, ಸಿದ್ದಾಪುರಕ್ಕೋ ಬಂದೇ ಅನಿಸಿತ್ತು. ಅಲ್ಲಿಯ ಹವ್ಯಕ ಕಂಪು ಇಲ್ಲಿಂದು ವ್ಯಾಪಿಸಿದೆ. ಬ್ರಾಹ್ಮಣ ಸಮಾಜವನ್ನು ಹೀಯಾಳಿಸುವುದು ಒಂದು ಉದ್ಯಮವೇ ಆಗಿದೆ. ಆದರೆ ಅವುಗಳಿಗೆ ಕಿವಿಕೊಡದೇ, ಅವುಗಳನ್ನು ಎದುರಿಸಿ ಸಾಧನೆ ಮಾಡುತ್ತಿರುವ ಹಿರಿಮೆ ಹವ್ಯಕರದ್ದು ಎಂದರು.

ಕುಮಟಾದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ರಾಜಕಾರಣಿಗಳು ಇಂತದ್ದೊಂದು ಸಭೆ ಮಾಡಬೇಕು, ಇಷ್ಟು ದೊಡ್ಡ ಮಟ್ಟದಲ್ಲಿ ಜನ ಸೇರಬೇಕು ಎಂದರೆ ಹಣವನ್ನು ಕೊಟ್ಟು ವಾಹನಗಳಲ್ಲಿ ಜನರನ್ನು ಕರೆತರಬೇಕಾಗುತ್ತದೆ. ಆದರೆ ಇಲ್ಲಿ ಸಮಾಜದ ಮೇಲಿರುವ ಅಭಿಮಾನದಿಂದ ಸ್ವಯಂ ಸ್ಪೂರ್ತಿಯಿಂದ ಜನ ಸೇರಿರುವುದು ಶ್ಲಾಘನೀಯ ಎಂದು ಹವ್ಯಕ ಸಮಾಜದ ಜೊತೆ ಹಾಗೂ ರಾಮಚಂದ್ರಾಪುರಮಠದ ಶ್ರೀಗಳ ಜೊತೆಗಿನ ತಮ್ಮ ಒಡನಾಟವನ್ನು ಹಂಚಿಕೊಂಡರು.

ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಈಶ್ವರಪ್ಪ ಮಾತನಾಡಿ, ದೇವಲೋಕಕ್ಕೆ ಹೋಗಿ ದೇವರನ್ನು ನೋಡಲು ಸಾಧ್ಯವಿಲ್ಲದಿರಬಹುದು, ಆದರೆ ಈ ವೇದಿಕೆಯಲ್ಲಿ ಪೇಜಾವರ ಶ್ರೀ ಹಾಗೂ ರಾಘವೇಶ್ವರ ಶ್ರೀಗಳಲ್ಲಿ ನಾವಿಂದು ದೇವರನ್ನು ನೋಡುತ್ತಿದ್ದೇನೆ. ಗೋವು ಎಂದರೆ ರಾಘವೇಶ್ವರ ಶ್ರೀಗಳ ನೆನಪಾಗುತ್ತದೆ. ಭಾರತೀಯ ಸಂಸ್ಕೃತಿ ವಿಶ್ವಕ್ಕೆ ಮಾದರಿ, ಅದನ್ನು ಉಳಿಸಿಬೆಳೆಸೋಣ ಎಂದು ಕರೆ ನೀಡಿದರು.

ಕರ್ನಾಟಕ ಬ್ಯಾಂಕ್ ನ ಸಿಇಓ ಮಹಾಬಲೇಶ್ವರ ಎಂ ಎಸ್, ಬಿಟಿವಿ ಮುಖ್ಯಸ್ಥ ಶ್ರೀ ಕುಮಾರ್ , ಡಾ. ವೀಣಾ ಬನ್ನಂಜೆ, ಕೊಂಕೋಡಿ ಪದ್ಮನಾಭ ಭಟ್, ಸತೀಶ್ಚಂದ್ ಎಸ್ ಆರ್, ವಿದ್ವಾನ್ ಉಮಾಕಾಂತ ಭಟ್, ವಿ. ಬಿ ಅರ್ತಿಕಜೆ ಸೇರಿಂದತೆ ಅನೇಕ ಗಣ್ಯಾತಿ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಗೌರವಾಧ್ಯಕ್ಷರಾದ ಭೀಮೇಶ್ವರ ಜೋಷ್ಸರು ಅತಿಥಿಗಳಿಗೆ ಗೌರವ ಸಮರ್ಪಿಸಿದರು, ಅಧ್ಯಕ್ಷರಾದ ಡಾ ಗಿರಿಧರ್ ಕಜೆ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಮಹಾಸಭೆಯ ನೂತನ ಧ್ವಜ ಲೋಕಾರ್ಪಿತವಾಯಿತು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಾಮೂಹಿಕ ಭಗವದ್ಗೀತಾ ಪಠಣ ನಡೆಯಿತು, ಮಾತೆಯರು ಹಾಗೂ ಮಹನಿಯರು ಪಾಲ್ಗೊಂಡು ೮ ನೇ ಅಧ್ಯಾಯವನ್ನು ಪಠಿಸಿದರು. ಹವ್ಯಕ ಕಿರುತೆರೆ – ಹಿರಿತೆರೆ ಕಲಾವಿದರ ಕೂಡುವಿಕೆಯೊಂದಿಗೆ ನಡೆದ “ಅಭಿನಯ ರಂಗ” ಜನಮನಸೆಳೆಯಿತು. ಸಂಜೆ ಖ್ಯಾತ ಕಲಾವಿದರ ಕೂಡುವಿಕೆಯೊಂದಿಗೆ ತೆಂಕು ಹಾಗೂ ಬಡಗು ಶೈಲಿಗಳ “ಯಕ್ಷ ನೃತ್ಯ ವೈಭವ” ಯಕ್ಷಗಾನ ಪ್ರಿಯರನ್ನು ರಂಜಿಸಿತು.ಯಲ್ಲಾಪುರ, ಶಿರಸಿ, ಸಾಗರ, ಸಿದ್ಧಪುರ, ಮಂಗಳೂರು, ಕುಮಟ ಮೂಂತಾದ ಭಾಗಗಳ ಹವ್ಯಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರೆ, ಬೆಂಗಳೂರಿಗರು ಹವ್ಯಕ ಪಾಕೋತ್ಸವ ಹಾಗೂ ಆಲೆಮನೆಗಳನ್ನು ಆಸ್ವಾದಿಸಿದರು.

ಹವ್ಯಕ ಕೃಷಿರತ್ನ : ಹೆಗಡೆ ಸುಬ್ಬರಾವ್, ಗಜಾನನ ಹೆಗಡೆ, ಎಂ ಜಿ ಶ್ರೀಪಾದ್ ರಾವ್,ರಾಮಚಂದ್ರ ಗಣೇಶ್ ಹೆಗಡೆ, ಶ್ರೀಮತಿ ಮಧುಮತಿ ಸೇರಿದಂತೆ 75 ಕೃಷಿಕರಿಗೆ “ಹವ್ಯಕ ಕೃಷಿರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.

Tags: 2nd world havyaka ConferenceHavyaka MahasabhaPejawara SriRaghaveshwara SwamijiVijaya sankeshwaraಎರಡನೆಯ ವಿಶ್ವ ಹವ್ಯಕ ಸಮ್ಮೇಳನಪೇಜಾವರ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿವಿಜಯ ಸಂಕೇಶ್ವರ್ಶ್ರೀ ವಿಶ್ವೇಶ್ವರ ತೀರ್ಥ ಶ್ರೀಪಾದರು
Previous Post

ಫೆಬ್ರವರಿ 7ಕ್ಕೆ ಪುನೀತ್ ಅಭಿನಯದ ನಟಸಾರ್ವಭೌಮ ರಿಲೀಸ್

Next Post

ಕಾಂಗರೂಗಳ ವಿರುದ್ಧ ಟೀಂ ಇಂಡಿಯಾ 137 ರನ್ ಗಳ ಭರ್ಜರಿ ಜಯ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಕಾಂಗರೂಗಳ ವಿರುದ್ಧ ಟೀಂ ಇಂಡಿಯಾ 137 ರನ್ ಗಳ ಭರ್ಜರಿ ಜಯ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕಿಚ್ಚ ಸುದೀಪ್ | ಫ್ಯಾನ್ಸ್ ಫುಲ್ ಖುಷ್

June 30, 2025

ಕೆಲವು ಹಿರಿಯರ ಜೊತೆ ಚರ್ಚಿಸಿ, ನಂತರ ಬಿಜೆಪಿ ಸೇರ್ಪಡೆಗೆ ನಿರ್ಧಾರ | ಕೆ.ಎಸ್. ಈಶ್ವರಪ್ಪ

June 30, 2025

ಗಮನಿಸಿ | ಈ ಮೂರು ದಿನ ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್ ರೈಲಿನ ಕುರಿತು ಮಹತ್ವದ ಅಪ್ಡೇಟ್

June 30, 2025

A Divine Journey to South India on Bharat Gaurav Train Here is the full details of tour

June 30, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕಿಚ್ಚ ಸುದೀಪ್ | ಫ್ಯಾನ್ಸ್ ಫುಲ್ ಖುಷ್

June 30, 2025

ಕೆಲವು ಹಿರಿಯರ ಜೊತೆ ಚರ್ಚಿಸಿ, ನಂತರ ಬಿಜೆಪಿ ಸೇರ್ಪಡೆಗೆ ನಿರ್ಧಾರ | ಕೆ.ಎಸ್. ಈಶ್ವರಪ್ಪ

June 30, 2025

ಗಮನಿಸಿ | ಈ ಮೂರು ದಿನ ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್ ರೈಲಿನ ಕುರಿತು ಮಹತ್ವದ ಅಪ್ಡೇಟ್

June 30, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!