No Result
View All Result
KRCS Shikaripura Achieves 100% Result in CBSE Class X Board Exams
English Articles

KRCS Shikaripura Achieves 100% Result in CBSE Class X Board Exams

by ಕಲ್ಪ ನ್ಯೂಸ್
April 16, 2026
0

Kalpa Media House  |  Shikaripura | Kumadvathi Residential Central School (KRCS), Shikaripura, has achieved a 100% pass result in the...

Read moreDetails
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

April 13, 2026
  • Advertise With Us
  • Grievances
  • About Us
  • Contact Us
Thursday, April 30, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ವಿ ಮಿಸ್ ಯೂ ಸುಷ್ಮಾ ತಾಯಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
June 8, 2019
in Special Articles
0
ವಿ ಮಿಸ್ ಯೂ ಸುಷ್ಮಾ ತಾಯಿ
Share on FacebookShare on TwitterShare on WhatsApp

ಸುಷ್ಮಾ ಸ್ವರಾಜ್.. ವಿವರಣೆ ನೀಡುವ ಅವಶ್ಯಕತೆ ಇಲ್ಲ. ಭಾರತೀಯ ಜನತಾ ಪಕ್ಷದ ಮೇರು ನಾಯಕಿ, ಕೇಂದ್ರ ಸರ್ಕಾರದ ಅದ್ವಿತೀಯ ವಿದೇಶಾಂಗ ಮಂತ್ರಿ, ಭಾರತ ಕಂಡಂತಹ ಶ್ರೇಷ್ಠ ರಾಜಕಾರಣಿ. ಅವರ ಬಗ್ಗೆ ಹೇಳಲು ಹೋದರೆ ಅದು ಮುಗಿಯುವುದೇ ಇಲ್ಲ.

ಸುಷ್ಮಾ ಸ್ವರಾಜ್, ಅವರ ಹೆಸರಿನಲ್ಲಿ ಸ್ವರಾಜ್ ಇದೆ. ಹಾಗಾಗಿ ಅವರನ್ನು ಸುಷ್ಮಾ ತಾಯಿ ಎಂದು ಕರೆಯಬಹುದು ಅನ್ನಿಸುತ್ತದೆ. ಮೊನ್ನೆ ಅವರು ಮಾಡಿದ ಭಾವನಾತ್ಮಕ ಟ್ವೀಟ್ ಬಹಳವಾಗಿ ಕಾಡುತ್ತಿದೆ.

ಪ್ರಧಾನ ಮಂತ್ರಿಯವರೇ, ಐದು ವರ್ಷಗಳ ಕಾಲ ನನಗೆ ವಿದೇಶಾಂಗ ಮಂತ್ರಿಯಾಗಿ ಭಾರತೀಯರ ಮತ್ತು ಅನಿವಾಸಿ ಭಾರತೀಯರ ಸೇವೆಯ ಭಾಗ್ಯವನ್ನು ಕರುಣಿಸಿದ್ದೀರಿ. ವೈಯಕ್ತಿಕವಾಗಿಯೂ ನಾನು ಇದರಿಂದ ಸಾಕಷ್ಟು ಗೌರವ ಪಡೆದಿದ್ದೇನೆ. ಇದಕ್ಕಾಗಿ ನಾನು ನಿಮಗೆ ಋಣಿಯಾಗಿರುತ್ತೇನೆ.

ದೇವರಲ್ಲಿ ಪ್ರಾರ್ಥಿಸುವುದೇನೆಂದರೆ, ನಮ್ಮ ಸರ್ಕಾರ ನೂರ್ಕಾಲ ಬೆಳಗಲಿ. ಇದೇನಾದರೂ ಅವರನ್ನು ಸಂಪುಟದಿಂದ ಅಲಕ್ಷಿಸಿದಾಗ ಆಡಿದ ಮಾತುಗಳಂತೆ ಇದೆಯೇ? ಖಂಡಿತ ಇಲ್ಲ.

ಸುಷ್ಮಾ ಸ್ವರಾಜ್ ಅವರು ತಮ್ಮ ಸೇವೆಯ ನೆನಪು ಮತ್ತು ತನಗೆ ಸಂದ ಗೌರವದೊಂದಿಗೆ ಹೊರಟು ನಿಂತಿದ್ದಾರೆ. ಅವರು ಈಗಿನ ಕೇಂದ್ರ ಸರ್ಕಾರದ ಸಂಪುಟದಲ್ಲಿ ಇರುವುದಿಲ್ಲ. ಅದರಿಂದ ಅವರೇನೂ ಕಳೆದುಕೊಳ್ಳುವುದಿಲ್ಲ, ಬದಲಿಗೆ ಭಾರತೀಯರು ಅವರ ಅಪೂರ್ವ ಸೇವೆಯಿಂದ ವಂಚಿತರಾಗುತ್ತಿದ್ದಾರೆ. ಆರೋಗ್ಯದ ಸಮಸ್ಯೆಯ ನಡುವೆಯೂ ವಿಶ್ವವೇ ಮೆಚ್ಚುವಂತೆ ಪದವಿ ನಿರ್ವಹಿಸಿದ ಅವರು ಬಯಸಿಯೇ ಈ ಸರ್ಕಾರದಿಂದ ದೂರ ಉಳಿದಿದ್ದಾರೆ. ಸಾಧಕರ ಜೀವನವೇ ಒಂದು ಸಂದೇಶ ಎಂಬ ಮಾತಿದೆ. ಸುಷ್ಮಾ ಸ್ವರಾಜ್‌ರವರ ಜೀವನವನ್ನು ಒಮ್ಮೆ ಮೆಲುಕು ಹಾಕೋಣ.

ಸುಷ್ಮಾ ಅವರು 1952ರ ಫೆಬ್ರವರಿ 14ರಂದು ಹರಿಯಾಣದ ಅಂಬಾಲದಲ್ಲಿ ಜನಿಸಿದರು. ಮೂಲತಃ ಅವಿಭಜಿತ ಭಾರತದ ಲಾಹೋರ್ ಮೂಲದವರಾದ ತಂದೆ ಹರ್’ದೇವ್ ಶರ್ಮ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು. ಹಾಗಾಗಿ ರಾಷ್ಟ್ರೀಯ ಚಿಂತನೆಗಳು ರಕ್ತಗತವಾಗಿ ಬಂದಿದ್ದವು.

ಬಾಲ್ಯವನ್ನು ಅಂಬಾಲದಲ್ಲಿ ಕಳೆದ ಸುಷ್ಮಾ ಸ್ವರಾಜ್‌ರವರು ಸಂಸ್ಕೃತ ಮತ್ತು ರಾಜ್ಯಶಾಸ್ತ್ರಗಳ ಪದವಿಯನ್ನು ಅಲ್ಲಿಯೇ ಪಡೆದರು. ನಂತರ ನ್ಯಾಯಶಾಸ್ತ್ರದ ಪದವಿಯನ್ನು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಪಡೆದರು. 1973 ರಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ಆರಂಭಿಸಿದರು. ಉತ್ತಮ ವಾಗ್ಮಿಯಾಗಿದ್ದ ಸುಷ್ಮಾ ಸ್ವರಾಜ್ ಅವರು ಹರಿಯಾಣದ ಭಾಷಾ ಇಲಾಖೆಯಿಂದ ಸತತ ಮೂರು ವರ್ಷ ರಾಜ್ಯ ಮಟ್ಟದ ಉತ್ತಮ ಹಿಂದಿ ವಾಗ್ಮಿ ಪ್ರಶಸ್ತಿ ಪಡೆದಿದ್ದರು.

ಮೊದಲೇ ಹೇಳಿದಂತೆ ಸಂಘದ ಹಿನ್ನೆಲೆಯವರಾದ್ದರಿಂದ ರಾಷ್ಟ್ರೀಯ ಚಿಂತನೆ ಮತ್ತು ಮೌಲ್ಯಗಳತ್ತ ಆಕರ್ಷಿತರಾಗಿದ್ದರು. ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿಗೆ ಸೇರುವುದರೊಂದಿಗೆ ರಾಜಕೀಯ ಜೀವನ ಶುರುವಾಯಿತು. ಆದರೆ ಸುಷ್ಮಾ ಸ್ವರಾಜ್ ಅವರಿಗೆ ಭಾರತ ಕಂಡಂತಹ ಶ್ರೇಷ್ಠ, ಪ್ರಾಮಾಣಿಕ ಸಮಾಜವಾದಿ ಜಾರ್ಜ್ ಫರ್ನಾಂಡಿಸ್’ರ ನಿಕಟವರ್ತಿ ಸ್ವರಾಜ್ ಕೌಶಾಲ್ ಪತಿಯಾಗಿ ಸಿಕ್ಕಿದ್ದು ಹಾಲು ಜೇನು ಸೇರಿದಂತೆ ಆಗಿತ್ತು. ಈ ಸಂದರ್ಭದಲ್ಲಿ ಫರ್ನಾಂಡಿಸ್’ರ ಬಳಗಕ್ಕೆ ಸೇರಿದ ಸುಷ್ಮಾ ಸ್ವರಾಜ್ ತುರ್ತು ಪರಿಸ್ಥಿತಿಯ ನಂತರ ಬಿಜೆಪಿಯಲ್ಲಿ ಗುರುತಿಸಿಕೊಂಡು ರಾಷ್ಟ್ರ ಮಟ್ಟದ ನಾಯಕಿಯಾದರು. ಅವರ ರಾಜಕೀಯ ಜೀವನ ಒಂದು ಸಾಗರದಷ್ಟಿದೆ. ಅಂಬಾಲದಿಂದ ಹರಿಯಾಣ ಸರ್ಕಾರಕ್ಕೆ 1977 ರಲ್ಲಿ ಪಾದಾರ್ಪಣೆ ಮಾಡಿದವರು ಮತ್ತೆ ಹಿಂತಿರುಗಿ ನೋಡುವ ಪ್ರಸಂಗ ಬರಲಿಲ್ಲ.

1977 ರಲ್ಲಿ ತಮ್ಮ ಇಪ್ಪತ್ತೈದನೆಯ ವಯಸ್ಸಿನಲ್ಲಿ ಹರಿಯಾಣದ ಜನತಾ ಪಕ್ಷದ ಸರ್ಕಾರದಲ್ಲಿ ಸಚಿವೆಯಾದರು. ಹರಿಯಾಣದ ಅತಿ ಕಿರಿಯ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾದರು. 1979 ರಲ್ಲಿ ಹರಿಯಾಣದಲ್ಲಿ ಜನತಾ ಪಕ್ಷದ ರಾಜ್ಯಾಧ್ಯಕ್ಷೆಯಾದರು. 1987 ರಲ್ಲಿ ಮತ್ತೆ ಶಿಕ್ಷಣ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದರು. 1996 ರಲ್ಲಿ ದಕ್ಷಿಣ ದೆಹಲಿ ಕ್ಷೇತ್ರದಿಂದ ಗೆದ್ದು ವಾಜಪೇಯಿಯವರ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ನಿಭಾಯಿಸಿದರು. 1998 ರಲ್ಲಿ ದೆಹಲಿಯ ಮೊದಲ ಮಹಿಳಾ ಮತ್ತು ಒಟ್ಟಾರೆ ಐದನೆಯ ಮುಖ್ಯಮಂತ್ರಿಯಾಗಿದ್ದರು. ಅಲ್ಲಿ ಪಕ್ಷ ಚುನಾವಣೆ ಸೋತ ನಂತರ ಕೇಂದ್ರ ಸರ್ಕಾರಕ್ಕೆ ಮರಳಿದರು.

12 ನೆಯ ಲೋಕಸಭೆಗೆ ದಕ್ಷಿಣ ದೆಹಲಿ ಕ್ಷೇತ್ರದಿಂದ ಆಯ್ಕೆಯಾಗಿ, ಮಾಹಿತಿ ಮತ್ತು ಪ್ರಸಾರ ಖಾತೆ ಜೊತೆಗೆ ದೂರಸಂಪರ್ಕ ಖಾತೆಯನ್ನು ಪಡೆದರು. ಈ ಸಂದರ್ಭದಲ್ಲಿ ಅವರು ಮಾಡಿದ ಒಂದು ಕಾರ್ಯವನ್ನು ಸಿನಿಮಾ ರಂಗ ಇಂದಿಗೂ ನೆನೆಯುತ್ತದೆ. ಅದೇನೆಂದರೆ ಚಲನಚಿತ್ರ ಕ್ಷೇತ್ರವನ್ನು ಒಂದು ಉದ್ಯಮ ಎಂದು ಪ್ರಕಟಿಸಿದರು. ಇದರಿಂದ ಹಲವಾರು ಸಿನಿಮಾ ತಯಾರಕರಿಗೆ ಬ್ಯಾಂಕ್ ಸಾಲ ದೊರೆಯುವಂತಾಯಿತು. 1999 ರಲ್ಲಿ ಒಂದು ಮಹತ್ವದ ಘಟನೆ ನಡೆಯಿತು. 13 ನೆಯ ಲೋಕಸಭೆಗೆ ಸುಷ್ಮಾ ಅವರು ಕರ್ನಾಟಕದ ಬಳ್ಳಾರಿಯಿಂದ ಸೋನಿಯಾ ಗಾಂಧಿ ಅವರ ವಿರುದ್ಧ ಸ್ಪರ್ಧಿಸಿದರು. ಅದು 1951-52 ರಿಂದಲೂ ಕಾಂಗ್ರೆಸ್‌ನ ಭದ್ರಕೋಟೆ. ಕನ್ನಡದಲ್ಲಿ ಭಾಷಣ ಮಾಡಿ, ಮನ ಗೆದ್ದ ಸುಷ್ಮಾ ಸ್ವರಾಜ್ ಅವರು ಕೇವಲ ಹನ್ನೆರಡು ದಿನದ ಪ್ರಚಾರದಲ್ಲಿ 358000 ಮತಗಳ ಪಡೆದು, 7% ಮತಗಳ ಅಂತರದಲ್ಲಿ ಸೋತರು. ಇದು ಅವರಿಗಿದ್ದ ಅದಮ್ಯ ಜನರ ವಿಶ್ವಾಸದ ಗುರುತಾಗಿತ್ತು. 2009 ರಲ್ಲಿ ವಿಧಿಶಾ ಕ್ಷೇತ್ರದಿಂದ ಗೆದ್ದು, ಎಲ್ ಕೆ ಅಡ್ವಾಣಿಯವರ ಅನುಪಸ್ಥಿತಿಯಲ್ಲಿ ಯಶಸ್ವಿಯಾಗಿ ವಿರೋಧ ಪಕ್ಷವನ್ನು ಮುನ್ನಡೆಸಿದರು. 2014 ರಲ್ಲಿ ಮತ್ತೆ ವಿಧಿಶಾ ಕ್ಷೇತ್ರದಿಂದ ಗೆದ್ದು, ನರೇಂದ್ರ ಮೋದಿಯವರ ಸಂಪುಟದಲ್ಲಿ ವಿದೇಶಾಂಗ ಖಾತೆ ನಿರ್ವಹಿಸಿದರು. ಇಂದಿರಾ ಗಾಂಧಿ ನಂತರ ಭಾರತದ ಎರಡನೆಯ ಮಹಿಳಾ ವಿದೇಶಾಂಗ ಸಚಿವೆಯಾದರು. ನಂತರ ಅವರು ಮಾಡಿದ ನಿರ್ವಹಣೆ ಹಾಗೂ ಬದಲಾವಣೆಗಳು ಅಮೋಘ ಎನಿಸುತ್ತವೆ.

  • ಅಂತಾರಾಷ್ಟ್ರೀಯ ಸಮಸ್ಯೆಗಳೊಂದಿಗೆ ಭಾರತೀಯರ ಸಮಸ್ಯೆಗಳಿಗೆ ಟ್ವಿಟರ್ ಮೂಲಕ ಮುಟ್ಟಿ, ಪರಿಹರಿಸಿದ್ದು
  • ಹನ್ನೊಂದು ಬಾರಿ ಸುಷ್ಮಾ ಸ್ವರಾಜ್ ಮತ್ತು ಅವರ ಸಚಿವಾಲಯ ಕಟ್ಟುಪಾಡುಗಳನ್ನು ಮುರಿದು ನೆರವಿನ ಹಸ್ತ ಚಾಚಿದ್ದಾರೆ
  • ಜರ್ಮನಿಯಲ್ಲಿ ಪಾಸ್’ಪೋರ್ಟ್ ಮತ್ತು ಹಣ ಕಳೆದುಕೊಂಡ ಮಹಿಳೆಗೆ ಸಹಾಯ ಮಾಡಿದ್ದು
  • ಅನಾರೋಗ್ಯ ಪೀಡಿತ ಹಲವು ದೇಶಗಳ ನಾಗರಿಕರಿಗೆ, ಪಾಕಿಸ್ಥಾನಿ ಪ್ರಜೆಗಳಿಗೂ ವೀಸಾ ನೀಡಿದ್ದು
  • ಪಾಕಿಸ್ಥಾನದ ಕುರಿತು ನೋಡುವುದಾದರೆ, ಕೆಲವು ನಿರ್ದಿಷ್ಟ ದಾಖಲೆಗಳಿಗೆ ಬದಲಾಗಿ ಪೋಲೀಸ್ ವಿಚಾರಣೆ ಇಲ್ಲದೆಯೂ ಪಾಸ್’ಪೋರ್ಟ್ ನೀಡಿದ್ದರು. ಪಾಕಿಸ್ಥಾನದ ಕಾರ್ಯದರ್ಶಿಗಳ ಜೊತೆ ಮಾತುಕತೆ ಸ್ಥಗಿತಗೊಳಿಸಿದರು
  • ವಿದೇಶೀ ಹೂಡಿಕೆಯ ವಿಚಾರದಲ್ಲಿ, 55 ಬಿಲಿಯನ್ ಡಾಲರ್ ಮೊತ್ತವನ್ನು ಭಾರತಕ್ಕೆ ತಂದರು. ಇದರಿಂದ 43% ಹೂಡಿಕೆ ಹೆಚ್ಚಳವಾಯಿತು
  • ಸಾರ್ಕ್ ದೇಶಗಳ ನಡುವಿನ ದಕ್ಷಿಣ ಚೀನಾ ಸಮುದ್ರ ವಿವಾದ, ತೀಸ್ತಾ ಒಪ್ಪಂದ ವಿಚಾರದಲ್ಲಿ ಉತ್ತಮ ನಿರ್ವಹಣೆ ತೋರಿದರು
  • ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಸ್ಥಾನ ಭದ್ರ ಪಡಿಸಲು ಪ್ರಯತ್ನ ಮಾಡಿದರು. ಚೀನಾವನ್ನು ಸುಮ್ಮನಾಗಿಸಿದರು
  • ದಕ್ಷಿಣ ಏಷ್ಯಾದ ದೇಶಗಳ ನಡುವೆ ಬಾಂಧವ್ಯ ಬೆಸೆಯಲು ಪೂರ್ವದತ್ತ ನೀತಿಗೆ ಹಲವಾರು ದೇಶಗಳಿಗೆ ಭೇಟಿ ನೀಡಿದರು

ಇನ್ನೂ ಮೊದಲಾದ ಹಲವು ಸಾಧನೆಗಳ ತೋರಿದ ಸುಷ್ಮಾ ಸ್ವರಾಜ್ ಅವರು ಹಲವಾರು ದಾಖಲೆಗಳ ಹೊಂದಿದ್ದಾರೆ. ಅವುಗಳನ್ನು ನೋಡೋಣ.

  • 1977 ರಲ್ಲಿ ತಮ್ಮ ಇಪ್ಪತ್ತೈದನೆಯ ವಯಸ್ಸಿನಲ್ಲಿ ಹರಿಯಾಣದ ಜನತಾ ಪಕ್ಷದ ಸರ್ಕಾರದಲ್ಲಿ ಅತೀ ಕಿರಿಯ ಸಚಿವೆ
  •  ಎರಡೇ ವರ್ಷದಲ್ಲಿ ಹರಿಯಾಣದಲ್ಲಿ ಜನತಾ ಪಕ್ಷದ ರಾಜ್ಯಾಧ್ಯಕ್ಷೆ
  • ಬಿಜೆಪಿಯ ಮೊದಲ ಮಹಿಳಾ ವಕ್ತಾರರು, ಮುಖ್ಯಮಂತ್ರಿ, ಕೇಂದ್ರ ಸಚಿವೆ, ಕಾರ್ಯದರ್ಶಿ, ವಿಪಕ್ಷ ಅಧ್ಯಕ್ಷೆ, ಮಹಿಳಾ ವಿದೇಶಾಂಗ ಸಚಿವೆ
  • 2019 ರಲ್ಲಿ ನೇಪಾಳದ ಭೂಕಂಪದ ವೇಳೆ ತೋರಿದ ಸಹಾಯಕ್ಕಾಗಿ, ಸ್ಪೇನ್ ದೇಶದ Grand Cross of Order Of Civil Merit ಗೌರವ
  • ಅಮೆರಿಕಾದ ಪ್ರಸಿದ್ಧ ಪತ್ರಿಕೆ US Wall Street Journal ಇಂದ ಭಾರತದ ಅತ್ಯಂತ ಪ್ರೀತಿ ಪಾತ್ರ ಹೆಗ್ಗಳಿಕೆಗೆ ಪಾತ್ರ
  • ಭಾರತದ ಉತ್ತಮ ಸಂಸದೀಯ ಪಟು ಗೌರವ ಪಡೆದ ಏಕೈಕ ಮಹಿಳಾ ಸಂಸದೆ

ಸುಷ್ಮಾ ಸ್ವರಾಜ್ ಅವರು ಅಧಿಕಾರ ವಹಿಸಿಕೊಂಡಾಗ, ಒಂದು ಹೆಣ್ಣು ಏನು ತಾನೆ ಮಾಡಿಯಾರು? ಮೋದಿಯವರಿಗೆ ಕೈಗೊಂಬೆ ಬೇಕಿತ್ತು ಅಂದವರು ಎಷ್ಟೋ ಜನ. ಭಾರತೀಯ ವಿದೇಶಾಂಗ ಇಲಾಖೆಯನ್ನು ಮತ್ತೊಂದು ಸ್ತರಕ್ಕೆ ಕೊಂಡೊಯ್ದವರು ಸುಷ್ಮಾ ಸ್ವರಾಜ್. ಟ್ವಿಟರ್ ಅನ್ನು ಇವರಷ್ಟು ಪರಿಣಾಮಕಾರಿಯಾಗಿ ಬಳಸಿದವರು ಇಲ್ಲವೇನೋ. ಸಾಮಾಜಿಕ ಜಾಲತಾಣದಿಂದ ಹಿಡಿದು ವಿದೇಶಿ ಬಾಂಧವ್ಯದ ತನಕ ಎಲ್ಲವನ್ನೂ ದೇಶದ ಹಿತಕ್ಕಾಗಿ ಬಳಸಿ, ಭಾರತವನ್ನು ವಿಶ್ವಗುರು ಮಾಡಲು ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ನಿಖರತೆ, ಪ್ರಾಮಾಣಿಕತೆ ಮತ್ತು ಆ ಧೈರ್ಯ ಅದ್ಬುತ. ಇಂತಹ ರಾಜಕಾರಣಿಯ ಪಡೆದ ಭಾರತೀಯರು ಧನ್ಯ.

ಮನೆತನದ ಹೆಸರಿನಲ್ಲಿ, ಯಾರಿಗೂ ಸಲಾಮು ಹೊಡೆದು ಅವರು ದೆಹಲಿಯ ಸಂಸತ್ತಿಗೆ ಬಂದು ನಿಂತಿದ್ದಲ್ಲ. ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನಿಂದ ಹಿಡಿದು, ವಿದೇಶಾಂಗ ಇಲಾಖೆಯ ತನಕ ತಮ್ಮ ಛಾಪನ್ನು ಮೂಡಿಸಿದ್ದಾರೆ. ಪ್ರಸ್ತುತ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ, ಆದೇ ಕಾರಣದಿಂದ ಚುನಾವಣೆಯಿಂದ ದೂರ ಉಳಿದಿದ್ದಾರೆ. ನಿವೃತ್ತಿಯ ವಯಸ್ಸು ಮೀರಿ ಎಷ್ಟೋ ಕಾಲವಾದರೂ ಪ್ರಧಾನಿ ಹುದ್ದೆಗೆ ತಡಕಾಡುವ, ಕುಟುಂಬ ಪ್ರೇಮ ಮೆರೆಯುವ ರಾಜಕಾರಣಿಗಳ ನಡುವೆ ಅವರು ತೀರ ಭಿನ್ನರಾಗಿ ನಿಲ್ಲುತ್ತಾರೆ. ಇದು ಒಬ್ಬ ಶ್ರೇಷ್ಠ ರಾಜಕಾರಣಿಯ ಹಿರಿಮೆಯಾಗಿದೆ. ನಿವೃತ್ತಿಯ ಬದುಕಿಗೆ ಸಿದ್ಧರಾದಂತೆ ಕಾಣುತ್ತಿರುವ ಅವರನ್ನು ದೇವರು ಹರಿಸಲಿ. ಸುಷ್ಮಾ ಸ್ವರಾಜ್, ಮನೋಹರ್ ಪರಿಕ್ಕರ್ ಅಥವಾ ಪ್ರತಾಪ್ ಚಂದ್ರ ಸಾರಂಗಿಯವರೇ ಇರಬಹುದು, ಇಂತಹ ರಾಜಕಾರಣಿಗಳು ಸಂಘದ ಹಿನ್ನೆಲೆಯಿಂದ ಮಾತ್ರ ಸಾಧ್ಯ.

ಲೇಖನ: ಸಚಿನ್ ಪಾರ್ಶ್ವನಾಥ್,
           ಬ್ಯಾಕೋಡು, ಸಾಗರ(ತಾ.), ಶಿವಮೊಗ್ಗ

Tags: BJPChinaExternal affairs ministryIndian PoliticsKannada ArticleLok SabhaRajya SabhaSachin Parshwanathsushma swarajTwitterಟ್ವಿಟರ್ಬಿಜೆಪಿಸುಷ್ಮಾ ಸ್ವರಾಜ್
Share196Tweet123Send
Previous Post

ಬೆಂಗಳೂರು: ನಾದಬ್ರಹ್ಮ ನೆಬ್ಬೂರು ನಾರಾಯಣ ಭಾಗವತರಿಗೆ ಶ್ರದ್ಧಾಂಜಲಿ

Next Post

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ವಿಧಿವಶ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ವಿಧಿವಶ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ವಿಧಿವಶ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಧುರವಾದ ಗೀತೆಗಳ ಕೇಳುವಿಕೆಯಿಂದ ಸಂತೋಷ ಹೆಚ್ಚಾಗುವುದು: ಉಮ್ಮತ್ತೂರು ಇಂದುಶೇಖರ್

ಮಧುರವಾದ ಗೀತೆಗಳ ಕೇಳುವಿಕೆಯಿಂದ ಸಂತೋಷ ಹೆಚ್ಚಾಗುವುದು: ಉಮ್ಮತ್ತೂರು ಇಂದುಶೇಖರ್

April 30, 2026
ಭೀಕರ ಅಪಘಾತ | ರಂಭಾಪುರಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಸಾವು

ಭೀಕರ ಅಪಘಾತ | ರಂಭಾಪುರಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಸಾವು

April 29, 2026
ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮೋತ್ಸವ | ಏ.14ರಿಂದ ಆರು ದಿನ ವಿಶೇಷ ಸುದರ್ಶನ ಕ್ರಿಯಾ ಶಿಬಿರ

ಶ್ರೀ ರವಿಶಂಕರ ಗುರೂಜಿ ಅವರ 70ನೇ ಜನ್ಮೋತ್ಸವ | ಮೇ 5ರಿಂದ `ಆನಂದೋತ್ಸವ’ ಕಾರ್ಯಕ್ರಮ

April 29, 2026
ಪ್ರಕೃತಿ ವಿಕೋಪದಿಂದ ಹಾನಿ, ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ನೀಡಿ

ಪ್ರಕೃತಿ ವಿಕೋಪದಿಂದ ಹಾನಿ, ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ನೀಡಿ

April 29, 2026
ಕ್ರೈಸ್ಟ್‌ಕಿಂಗ್ | ದ್ವಿತೀಯ ಪಿಯುಸಿ ಮರುಮೌಲ್ಯಮಾಪನ | ಪ್ರಜ್ವಲ್ ಶೆಟ್ಟಿ ರಾಜ್ಯಕ್ಕೆ ನಾಲ್ಕನೇ ರ್‍ಯಾಂಕ್ 

ಕ್ರೈಸ್ಟ್‌ಕಿಂಗ್ | ದ್ವಿತೀಯ ಪಿಯುಸಿ ಮರುಮೌಲ್ಯಮಾಪನ | ಪ್ರಜ್ವಲ್ ಶೆಟ್ಟಿ ರಾಜ್ಯಕ್ಕೆ ನಾಲ್ಕನೇ ರ್‍ಯಾಂಕ್ 

April 29, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL