ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೈಂದೂರು: ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಬಡವರಿಗೆ ಸಿಎಂ ಪರಿಹಾರ ನಿಧಿಯಿಂದ ತಾವು ಮಂಜೂರು ಮಾಡಿಸಿದ ಪರಿಹಾರ ಚೆಕ್ ಅನ್ನು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ವಿತರಿಸಿದರು.
ಶಂಕರನಾರಾಯಣ ಗ್ರಾಮದ ಚಿಕ್ಕಮ್ಮ ಶೆಟ್ಟಿ ಅವರಿಗೆ 85,000 ರೂ., ಗಂಗೊಳ್ಳಿ ಗ್ರಾಮದ ಲಲಿತಾ ಖಾರ್ವಿ ಅವರಿಗೆ 25,000 ರೂ., ಗಂಗೊಳ್ಳಿ ಗ್ರಾಮದ ಪ್ರೇಮಾ ಖಾರ್ವಿಅ ವರಿಗೆ 25,000 ರೂ., ಕನ್ಯಾನ ಗ್ರಾಮದ ಲಲಿತಾ ಅವರಿಗೆ 11,066 ರೂ., ಇಡೂರು ಗ್ರಾಮದ ಶ್ರೀ ಸುಬ್ರಹ್ಮಣ್ಯ ಆಚಾರಿ ಅವರಿಗೆ 8,355 ರೂ. ಮೊತ್ತವನ್ನು ಶಾಸಕರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿಗಳು ಮಂಜೂರು ಮಾಡಿದ್ದು, ಈ ಚೆಕ್’ಗಳನ್ನು ಶಾಸಕರು ಫಲಾನುಭವಿಗಳ ಕುಟುಂಬಕ್ಕೆ ಹಸ್ತಾಂತರಿಸಿದರು.
Get in Touch With Us info@kalpa.news Whatsapp: 9481252093





Discussion about this post