ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಅಸಾಧ್ಯಂ ಸಾಧಕ ಸ್ವಾಮಿ
ಅಸಾಧ್ಯ ತವ ಕಿಂ ವಧ
ರಾಮ ದೂತ ಕೃಪಾ ಸಿಂಧೋ
ಮತ್ಕಾರ್ಯಂ ಸಾಧ್ಯಯೇತ್ ಪ್ರಭು
ಮರ್ಕಟೇಕ್ಷು ಮಹೋತ್ಸಾಹ
ಸರ್ವ ಗ್ರಹ ನಿವಾರಣಃ
ಶತ್ರು ಸಂಹಾರ
ಮಾಂ ರಕ್ಷ ಶ್ರೇಯ
ಆಯುಷ್ಯ ದೇಹಿಮೆ
ಸಿಲಿಕಾನ್ ಸಿಟಿಯ ಸರ್ಜಾಪುರದ ಕೊಡತಿ ಗೇಟ್’ನಲ್ಲಿ ಪ್ರತಿಷ್ಠಾಪನೆಗೊಂಡು, ಒಂದು ಕೈಯಲ್ಲಿ ಗದೆ, ಮತ್ತೊಂದು ಕೈಯಲ್ಲಿ ಅಭಯ ನೀಡುತ್ತಾ, ಮುಖದಲ್ಲಿ ಮಂದಹಾಸ ಬಿರುತ್ತಾ, ನಂಬಿ ಬರುವ ಭಕ್ತರ ಸಕಲ ಇಷ್ಟಾರ್ಥ ನೆರವೇರಿಸುತ್ತಾ ನೆಲೆ ನಿಂತಿದ್ದಾನೆ ಶ್ರೀ ಅಭಯ ಆಂಜನೇಯ ಸ್ವಾಮಿ.
ಸುಮಾರು 13 ಅಡಿ ಎತ್ತರದ ಶ್ರೀ ಅಭಯ ಆಂಜನೇಯ ಸ್ವಾಮಿಯ ಸಿಮೆಂಟ್ ಮೂರ್ತಿಯನ್ನು 2009ರಲ್ಲಿ ಸರ್ಜಾಪುರ ಬಳಿಯ ಕೊಡತಿ ಗೇಟ್’ನಲ್ಲಿ ತಮಿಳುನಾಡು ಶಿಲ್ಪಿಗಳು ನಿರ್ಮಿಸಿದ್ದಾರೆ.
ಮಹಿಳಾ ಅರ್ಚಕರು!
ಸಾಮಾನ್ಯವಾಗಿ ಎಲ್ಲ ದೇವಾಲಯಗಳಲ್ಲಿ ಪುರುಷ ಅರ್ಚಕರು ಪೂಜೆ ನೆರವೇರಿಸುತ್ತಾರೆ. ಆದರೆ, ಇಲ್ಲಿ ಹಿರಿಯ ಮಹಿಳೆಯೊಬ್ಬರು ಆಂಜನೇಯನಿಗೆ ಪೂಜೆ ನೆರವೇರಿಸುವುದು ವಿಶೇಷ. ಆ ಮಹಿಳೆಯೇ ಅಂದಾಜು 55-60 ವರ್ಷ ವಯಸ್ಸಿನ ಶ್ರೀಮತಿ ರತ್ನಮ್ಮ.
ಕಲ್ಪ ನ್ಯೂಸ್ ಜೊತೆಯಲ್ಲಿ ಮಾತನಾಡಿದ ರತ್ನಮ್ಮ ಅವರು, ಶ್ರೀ ಅಭಯ ಆಂಜನೇಯ ಸ್ವಾಮಿ ನೆಲೆಸಿದ ದಿನದಿಂದ ಇಲ್ಲಿ ಯಾವುದೇ ಅಪಘಾತ ಸಂಭವಿಸಿದರೂ ಅಪಘಾತಕ್ಕೀಡಾದವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಆದರೆ, ಅವರ ಪ್ರಾಣಕ್ಕೆ ಏನೂ ತೊಂದರೆಗಳಾಗಿಲ್ಲ ಎಂಬುದು ಇಲ್ಲಿ ನೆಲೆಸಿರುವ ಭಗವಂತನ ಮಹಿಮೆಗೆ ಒಂದು ಉದಾಹರಣೆ ಅಷ್ಟೇ ಎನ್ನುತ್ತಾರೆ.
ಈ ಪ್ರದೇಶದಲ್ಲಿ ಯಾವುದೇ ಜಗಳ, ಗಲಾಟೆ ಆದರೂ ರಾಜಿ ಮೂಲಕ ಬಗೆಹರಿಸುವ ಕಾಯಕವನ್ನು ಶ್ರೀ ಅಭಯ ಆಂಜನೇಯ ಸ್ವಾಮಿಯ ಸನ್ನಿಧಿಯಲ್ಲಿ ನಡೆಯುತ್ತವೆ. ಸದ್ಯ ದೇಶಕ್ಕೆ ಬಂದೆರಗಿರುವ ಕೊರೋನಾ ಎಂಬ ಪೆಡಂಭೂತದಿಂದ ಕಾಪಾಡುವಂತೆ ಪ್ರಾರ್ಥನೆ ಸಲ್ಲಿಸಲಾಗಿದ್ದು, ಸಮಸ್ಯೆ ಬಗೆಹರಿದ ನಂತರ ಶ್ರೀ ಸ್ವಾಮಿಯ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯುತ್ತದೆ ಎನ್ನುತ್ತಾರೆ.
ಇನ್ನು, ಸನ್ನಿಧಾನದ ಮುಂಭಾಗದಲ್ಲಿ ಗ್ರಾಮ ದೇವತೆ ಶ್ರೀ ಮಹೇಶ್ವರಮ್ಮ ದೇವತೆಯನ್ನು ಪ್ರತಿಷ್ಠಾಪಿಸಲಾಗಿದೆ. ಅಲ್ಲದೇ, ವಿಘ್ನ ನಿವಾರಕ ವಿನಾಯಕನನ್ನು ಹಾಗೂ ಸನ್ನಿಧಾನದ ಮುಂಭಾಗದಲ್ಲಿರುವ ಹುತ್ತಕ್ಕೆ ತನಿ ಎರೆದು ಪೂಜೆ ಸಲ್ಲಿಸಿ ನಂತರ ಅಲ್ಲಿಯೇ ಮುಂಭಾಗದಲ್ಲಿ ಇರುವ ಮೂಲ ಹನುಮಂತನ ವಿಗ್ರಹಕ್ಕೆ ಪೂಜೆ ಸಲ್ಲಿಸಲಾಗುತ್ತದೆ ಎನ್ನುತ್ತಾರೆ ಶ್ರೀ ಕ್ಷೇತ್ರದ ಮುಂಭಾಗದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ವ್ಯಾಪಾರ ಮಾಡುವ ಸರಳ.
ಗ್ರಾಮದ ನಿವಾಸಿಗಳಾದ ಹಾಗೂ ಶ್ರೀ ಸ್ವಾಮಿಯ ಸನ್ನಿಧಾನದ ಬಳಿ 15 ವರ್ಷಗಳಿಂದ ಹಣ್ಣು ಮತ್ತು ತರಕಾರಿ ವ್ಯಾಪಾರ ವಹಿವಾಟು ಮಾಡುವ ವೆಂಕಟೇಶ್ ಶ್ರೀ ಸ್ವಾಮಿಯಲ್ಲಿ ಭಕ್ತಿಯಿಂದ ಕೈ ಮುಗಿದು ಪ್ರಾರ್ಥನೆ ಸಲ್ಲಿಸಿದ್ದರೆ ಮನಸ್ಸಿನಲ್ಲಿರುವ ಆಸೆ-ಆಕಾಂಕ್ಷೆಗಳು ಈಡೇರುವುದರಲ್ಲಿ ಸಂದೇಹವಿಲ್ಲ ಎನ್ನುತ್ತಾರೆ.
ಕೊಡತಿ ಗೇಟ್’ನಲ್ಲಿ ಸ್ವಾಮಿಯನ್ನು ಪ್ರತಿಷ್ಠೆ ಮಾಡಲು ಕಾರಣ?
ಪ್ರತಿನಿತ್ಯ ಪೂಜೆ ಮಾಡುವ ರತ್ನಮ್ಮ ಹೇಳುತ್ತಾರೆ: ಸುಮಾರು 11 ವರುಷಗಳ ಕೆಳಗಿನ ಮಾತು. 2009ರ ಜನವರಿ – ಫೆಬ್ರವರಿ ತಿಂಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವ ವೈರ್ಗೆ ತಗುಲಿದ ಪರಿಣಾಮ ಕೋತಿ ಮರಿ ಇಹಲೋಕ ತ್ಯಜಿಸಿತ್ತು. ನಂತರ ಕೊಡತಿ ಗೇಟ್ ಬಳಿ ಅದಕ್ಕೆ ಸಮಾಧಿ ನಿರ್ಮಿಸಲಾಯಿತು. ಸಮಾಧಿ ನಿರ್ಮಿಸಿದ ಕೆಲವೇ ದಿನಗಳಲ್ಲಿ ನನ್ನ ಸ್ವಪ್ನದಲ್ಲಿ ಶ್ರೀ ಮುಖ್ಯ ಪ್ರಾಣ ದೇವರು ಬಂದು ಅವರ ಮೂರ್ತಿ ಯನ್ನು ಪ್ರತಿಷ್ಠೆ ಮಾಡಲು ಆಜ್ಞೆ ಮಾಡಿದರು. ಅದರಂತೆಯೇ ಗ್ರಾಮಸ್ಥರ ಬಳಿ ಮಾತನಾಡಿ ಶ್ರೀ ಅಭಯ ಆಂಜನೇಯ ಸ್ವಾಮಿಯನ್ನು ಪ್ರತಿಷ್ಠೆ ಮಾಡಲಾಯಿತು. ಅಂದಿನಿಂದ ಇಂದಿನವರೆಗೂ ಪ್ರತಿನಿತ್ಯ ಪೂಜೆ – ಪುನಸ್ಕಾರಗಳು ನಡೆದುಕೊಂಡು ಬರುತ್ತಿದ್ದು. ಪ್ರತಿ ಶನಿವಾರ ಹಾಗೂ ಅಮಾವಾಸ್ಯೆ, ಹುಣ್ಣಿಮೆ ದಿನಗಳಲ್ಲಿ ಭಕ್ತರು ಬಂದು ಅವರೇ ನೇರವಾಗಿ ಪೂಜೆ ಸಲ್ಲಿಸಿ ಮನದ ಬಯಕೆಯನ್ನು ಬೇಡಿಕೊಂಡು ಹೋಗುತ್ತಾರೆ.
ಇನ್ನು, ಇಲ್ಲಿ ಪ್ರತಿನಿತ್ಯ ಕಡಲೆಯ ಉಸುಳಿ-ಪಾನಕ, ಶನಿವಾರದಂದು ಕೋಸಂಬರಿ-ನಿಂಬೆಹಣ್ಣಿನ ಪಾನಕವನ್ನು ಭಕ್ತರಿಗೆ ವಿತರಿಸಲಾಗುತ್ತದೆ.
Get in Touch With Us info@kalpa.news Whatsapp: 9481252093
Discussion about this post