Saturday, September 6, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಸಿನೆಮಾ

Filmmakers United Club (FUC) ನಲುಗುತ್ತಿರುವ ಚಿತ್ರರಂಗಕ್ಕೆ ನವ ಆಶಾಕಿರಣ: ಮಂಸೋರೆ

June 23, 2020
in ಸಿನೆಮಾ
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

Filmmakers United Club (FUC) ಮೂಲಕ ಕನ್ನಡದ ಕೆಲವು ನಿರ್ದೇಶಕರು ಒಟ್ಟಾಗಿರುವುದು ಚಿತ್ರರಂಗದ ಬೆಳವಣಿಗೆಯ ಹಾದಿಯಲ್ಲಿ ಒಂದು ದಾಪುಗಾಲು ಎಂದೇ ಹೇಳಬಹುದು. ಇಂಥ ಒಂದು ಒಗ್ಗೂಡುವಿಕೆಗೆ ’ಲೂಸಿಯಾ’ ನಿರ್ದೇಶಕ ಪವನ್ ಕುಮಾರ್ ನಾಂದಿ ಹಾಡಿದ್ದಾರೆ.

ಲಂಡನ್ನಿನ BAFTA ಮಾದರಿಯಿಂದ ಪ್ರೇರಿತವಾಗಿರುವ FUCಯ ಪರಿಕಲ್ಪನೆ ಭಾರತದಲ್ಲೇ ಪ್ರಥಮವಾಗಿದ್ದು, ನಿರ್ದೇಶಕರ ಹಾಗೂ ಪ್ರೇಕ್ಷಕರ ನಡುವಿನ ಅಂತರ ತಗ್ಗಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ. ಅಲ್ಲದೇ ಮುಂಬರುವ ಮಹತ್ವಾಕಾಂಕ್ಷಿ ಯುವ ನಿರ್ದೇಶಕರ ಪಾಲಿಗೆ ಜ್ಞಾನಕೋಶವಾಗಲಿದೆ. ನಿರ್ದೇಶಿಸಿದ ಎರಡು ಚಿತ್ರಗಳಿಗೂ ರಜತ ಕಮಲ ಪಡೆದಿರುವ ನಿರ್ದೇಶಕ ಮಂಸೋರೆ ಅವರು FUC ಕುರಿತಾಗಿ exclusive ಮಾಹಿತಿ ನೀಡಿದ್ದಾರೆ.

ಮಂಸೋರೆ

FUC ಮಾದರಿಯ ಪರಿಕಲ್ಪನೆ ಯಾರದ್ದು ಮತ್ತು ಇದರ ಮೂಲ ಉದ್ದೇಶ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಮಂಸೋರೆ ಅವರು ’FUC ಪರಿಕಲ್ಪನೆ ’ಲೂಸಿಯಾ’ ನಿರ್ದೇಶಕ ಪವನ್ ಕುಮಾರ್ ಅವರದ್ದು, ಕೊರೋನಾ ಬಿಸಿ ಚಿತ್ರರಂಗಕ್ಕೂ ತಟ್ಟಿರುವುದು ವಾಸ್ತವ, ಚಿತ್ರೀಕರಣ ನಡೆಸುವುದೇ ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿರುವ ಈ ಸಮಯದಲ್ಲಿ ಕೊರೋನಾ ನಂತರದ ದಿನಗಳಲ್ಲಿ ಎದುರಾಗಬಹುದಂತಹ ಥೇಟರ್ ಸಮಸ್ಯೆ, OTT ವೇದಿಕೆಯ ಕೆಲ ನಿಬಂಧನೆಗಳಲ್ಲಿನ ತೊಡಕುಗಳು, ಚಿತ್ರ ನಿರ್ಮಾಣಕ್ಕೆ ಎದುರಾಗುವ ಸವಾಲುಗಳ ಕುರಿತು ಒಂದು ಆರೋಗ್ಯಕರ ಚರ್ಚೆ ನಡೆಸಲು ಹಾಗೂ ಸಮಾನ ಮನಸ್ಕ ನಿರ್ದೇಶಕರುಗಳ ವಿಚಾರ ವಿನಿಮಯದ ಜೊತೆ ಜೊತೆಗೆ ಬಹುಮುಖ್ಯವಾಗಿ ನಿರ್ದೇಶಕರ ಮತ್ತು ಪ್ರೇಕ್ಷಕರ ನಡುವಿನ ಅಂತರ ತಗ್ಗಿಸುವ ಹಾಗೂ ಪ್ರಾಮಾಣಿಕ ಪ್ರೇಕ್ಷಕ ವರ್ಗವನ್ನು ಗುರುತಿಸುವ ನಿಟ್ಟಿನಲ್ಲಿ ಈ ಕ್ಲಬ್ ಉತ್ತಮ ವೇದಿಕೆಯಂತೆ ಕಾರ್ಯನಿರ್ವಹಿಸಲಿದೆ’ ಎಂದರು.

ಅಂದಹಾಗೆ FUCಯಲ್ಲಿ ಈಗಾಗಲೇ 25 ನಿರ್ದೇಶಕರುಗಳು ಒಟ್ಟುಗೂಡಿದ್ದು ಯೋಗರಾಜ್ ಭಟ್, ಜಯತೀರ್ಥ, ಪಿ. ಶೇಷಾದ್ರಿ, ಕವಿತಾ ಲಂಕೇಶ್, ಬಿ.ಎಂ. ಗಿರಿರಾಜ್, ಆದರ್ಶ್ ಈಶ್ವರಪ್ಪ ಸೇರಿದಂತೆ 21 ಮಂದಿ ಕನ್ನಡದ ಯುವ ಮತ್ತು ಅನುಭವಿ ನಿರ್ದೇಶಕರ ದಂಡೇ ಇದೆ. ಇನ್ನುಳಿದವರಲ್ಲಿ ಮಲಯಾಳಂ ನಿರ್ದೇಶಕ ಲಿಜೋ ಜೋಸ್ ಪೆಲ್ಲಿಸೆರಿ, ತೆಲುಗಿನ ತರುಣ್ ಭಾಸ್ಕರ್, ನಂದಿನಿ ರೆಡ್ಡಿ ಹಾಗೂ ತಮಿಳಿನ ವಸಂತ ಬಾಲನ್ ಇದ್ದಾರೆ. FUCನಲ್ಲಿ ಸದಸ್ಯರಾಗ ಬಯಸುವ ನಿರ್ದೇಶಕರು www.thefuc.in ಮೂಲಕ ಅರ್ಜಿ ಸಲ್ಲಿಸಬಹುದು. ಈಗಾಗಲೇ ಸದಸ್ಯರಾಗಿರುವ ನಿರ್ದೇಶಕರುಗಳ ವೋಟ್’ಗಳ ಆಧಾರದ ಮೇಲೆ ಅರ್ಜಿ ಸಲ್ಲಿಸಿದ್ದ ನಿರ್ದೇಶಕನ ಸದಸ್ಯತ್ವ ನಿರ್ಧಾರವಾಗಲಿದ್ದು ಸದಸ್ಯರ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲಾಗುತ್ತದೆ. ಪ್ರೇಕ್ಷಕರು ತಮಗಿಷ್ಟವಾದ ನಿರ್ದೇಶಕರ ಬಯೋಡೇಟಾ ಹಾಗೂ ಅವರು ನಿರ್ದೇಶಿಸಿದ ಸಿನಿಮಾ ಲಭ್ಯವಿರುವ ಲಿಂಕ್ ಜೊತೆಗೆ ಸಂಪೂರ್ಣ್ ಮಾಹಿತಿಯನ್ನು ಈ ವೆಬ್ಸೈಟ್ ನಲ್ಲಿ ಪಡೆಯಬಹುದಾಗಿದೆ.

ಮತ್ತೊಂದು ವಿಶೇಷ ಸಂಗತಿ ಏನೆಂದರೆ ವೆಬ್ಸೈಟ್’ನ Newsfeedನಲ್ಲಿ ಯಾವುದೇ ಸದಸ್ಯ ಹಂಚಿಕೊಂಡ ವಿಚಾರಗಳಿಗೆ ಲೈಕ್, ಡಿಸ್’ಲೈಕ್ ಆಪ್ಷನ್ ಇರುವುದಿಲ್ಲ, ಹೀಗಾಗಿ ತಾವು ಹಂಚಿಕೊಂಡ ವಿಚಾರವನ್ನು ಎಷ್ಟು ಜನರು ಮಾನ್ಯ ಅಥವಾ ಅಮಾನ್ಯ ಮಾಡಿದರು ಎಂಬ ಒತ್ತಡ ನಿರ್ದೇಶಕರಿಗೆ ಇರುವುದಿಲ್ಲ. ಸೆಷನ್ ನಡೆಯುವ ಸಂದರ್ಭದಲ್ಲಿ ಪ್ರೇಕ್ಷಕರಿಗೆ ಕಾಮೆಂಟ್ ಮಾಡಲು ಮಾತ್ರ ಅವಕಾಶವಿರುತ್ತದೆ, ಚರ್ಚೆಯ ವಿಷಯಕ್ಕೆ ಅನುಗುಣವಾಗಿ ಪ್ರೇಕ್ಷಕರು ಕೊಡುವ ಸಲಹೆಯನ್ನು ಸಹ ಪರಿಗಣಿಸಲಾಗುತ್ತದೆ.

ನಿಮ್ಮ ಮುಂದಿನ ಸಿನಿಮಾದ ಬಗ್ಗೆ ಹೇಳಿ ಮತ್ತು ಬಿಡುಗಡೆಗೆ ಯಾವ ರೀತಿ ಸಿದ್ಧತೆ ಮಾಡಿಕೊಂಡಿದ್ದೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಂಸೋರೆ ಅವರು ’ನನ್ನ ಮುಂದಿನ ಸಿನಿಮಾ ‘Act- 1978’ಗೆ ಇನ್ನೂ ಒಂದು ತಿಂಗಳ ಕೆಲಸ ಬಾಕಿ ಇದೆ ನಂತರ ಬಿಡುಗಡೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಷ್ಟೇ. ಕೊರೋನಾ ಸಮಸ್ಯೆ ಎಲ್ಲಾ ಮುಗಿದು ಅನುಕೂಲಕರ ಪರಿಸ್ಥಿತಿ ನಿರ್ಮಾಣ ಆದರೆ ಥೇಟರ್’ನಲ್ಲೇ ಬಿಡುಗಡೆಗೊಳಿಸುವ ಚಿಂತನೆ ನಡೆಸಿದ್ದೇನೆ, ಯಥಾಸ್ಥಿತಿ ಮುಂದುವರೆದರೆ OTT  ಮೊರೆ ಹೋಗುವ ಕುರಿತು ತಂಡದಲ್ಲಿ ಮಾತುಕತೆ ನಡೆಯುತ್ತಿದೆ’ ಎಂದರು.

ಪವನ್ ಕುಮಾರ್

ಸದ್ಯ ಕೊರೋನಾ ಬರಸಿಡಿಲಿಗೆ ತತ್ತರಿಸಿರುವ ಚಿತ್ರರಂಗಕ್ಕೆ ಚೇತರಿಕೆ ತರುವ ಹಾಗೂ ಭವಿಷ್ಯದಲ್ಲಿ ಇಂತಹುದೇ ವೈಪರೀತ್ಯವನ್ನು ಎದುರಿಸುವ ಶಕ್ತಿ ತುಂಬುವ ನಿಟ್ಟಿನಲ್ಲಿ FUC ಹೊಸ ಚೈತನ್ಯದ ಚಿಲುಮೆಯಂತೆ ಕಾರ್ಯನಿರ್ವಹಿಸುವುದರಲ್ಲಿ ಸಫಲವಾಗುತ್ತದೆಯೇ ಎಂಬುದನ್ನು ಇನ್ನೂ ಕಾದು ನೋಡಬೇಕಾಗಿದೆ.


Get In Touch With Us info@kalpa.news Whatsapp: 9481252093

Tags: BAFTAFilmmakers United ClubFUCKannada MoviesKannada News WebsiteLatest News WebsiteMansooresandalwoodಕನ್ನಡ ಚಿತ್ರರಂಗಚಿತ್ರೀಕರಣ
Previous Post

ನಾನಾ ಪ್ರತಿಭೆಗಳ ಅನಾವರಣ ಒಂದೇ ವೇದಿಕೆ ಸೃಷ್ಠಿಸಿರುವ ಮಂಗಳೂರಿನ ಮಕ್ಕಿಮನೆ ಕಲಾವೃಂದ

Next Post

ಜಿಲ್ಲೆಯಲ್ಲಿ ಎಷ್ಟು ವಿದ್ಯಾರ್ಥಿಗಳು ಎಸ್’ಎಸ್’ಎಲ್’ಸಿ ಪರೀಕ್ಷೆ ಬರೆಯಲಿದ್ದಾರೆ? ಏನೆಲ್ಲಾ ಮುಂಜಾಗ್ರತೆ ಕೈಗೊಳ್ಳಲಾಗಿದೆ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
Internet Image

ಜಿಲ್ಲೆಯಲ್ಲಿ ಎಷ್ಟು ವಿದ್ಯಾರ್ಥಿಗಳು ಎಸ್’ಎಸ್’ಎಲ್’ಸಿ ಪರೀಕ್ಷೆ ಬರೆಯಲಿದ್ದಾರೆ? ಏನೆಲ್ಲಾ ಮುಂಜಾಗ್ರತೆ ಕೈಗೊಳ್ಳಲಾಗಿದೆ?

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಮಾಧ್ಯಮ ಕ್ಷೇತ್ರದಲ್ಲಿ ತನ್ನದೇ ವಿಶೇಷ ಗುರುತು ಮೂಡಿಸಿಕೊಂಡಿರುವ ನವಿತಾ ಜೈನ್

September 6, 2025

ಸೋತಾಗ ಕುಗ್ಗದೆ ಸವಾಲಾಗಿ ಸ್ವೀಕರಿಸಿ ಮುನ್ನಡೆಯಿರಿ: ಲಕ್ಷ್ಮೀನಾರಾಯಣ ಕಾಮತ್

September 6, 2025

ಸುಬ್ರೋಟೋ ಕಪ್ U-15: CISCE, ಪಶ್ಚಿಮ ಬಂಗಾಳಕ್ಕೆ ಭರ್ಜರಿ ಜಯ

September 6, 2025

Inspire Institute of Sport launches ‘IIS Sikhaega’

September 6, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಮಾಧ್ಯಮ ಕ್ಷೇತ್ರದಲ್ಲಿ ತನ್ನದೇ ವಿಶೇಷ ಗುರುತು ಮೂಡಿಸಿಕೊಂಡಿರುವ ನವಿತಾ ಜೈನ್

September 6, 2025

ಸೋತಾಗ ಕುಗ್ಗದೆ ಸವಾಲಾಗಿ ಸ್ವೀಕರಿಸಿ ಮುನ್ನಡೆಯಿರಿ: ಲಕ್ಷ್ಮೀನಾರಾಯಣ ಕಾಮತ್

September 6, 2025

ಸುಬ್ರೋಟೋ ಕಪ್ U-15: CISCE, ಪಶ್ಚಿಮ ಬಂಗಾಳಕ್ಕೆ ಭರ್ಜರಿ ಜಯ

September 6, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!