ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಪರಶುರಾಮಪುರ: ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು, ಕೊರೋನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಸಂಶಮನಿವಟಿ ಮಾತ್ರೆಗಳು ಹಾಗೂ ಆಕರ್ರ್ಯೂಅಜೀಬ್ ಲಿಕ್ವಿಡ್ನ್ನು ಕೋವಿಡ್ ವಾರಿಯರ್ರ್ಸ್ ನಿಯಮಿತವಾಗಿ ತೆಗೆದುಕೊಳ್ಳುವಂತೆ ಜಿಲ್ಲಾ ಆಯುಷ್ ಇಲಾಖೆ ಸಲಹೆ ನೀಡಿದೆ ಎಂದು ಪಿ ಮಹದೇವಪುರ ಗ್ರಾಮದ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅನಿಲ್ ಕುಮಾರ್ ತಿಳಿಸಿದರು.
ಸಮೀಪದ ಪಿ ಮಹದೇವಪುರ ಗ್ರಾಮದ ಗ್ರಾಪಂ ಕಾರ್ಯಾಲಯದ ಗ್ರಾಪಂ ಸಿಬ್ಬಂದಿ ಹಾಗೂ ಎನ್ಪಿಗೇಟ್’ನ ಚೆಕ್ ಪೋಸ್ಟ್ನ ಪೊಲೀಸ್, ಶಿಕ್ಷಕರು, ಆಶಾ, ಆರೋಗ್ಯ ಕಾರ್ಯಕರ್ತರಿಗೆ ಉಚಿತವಾಗಿ ವಿತರಿಸಲು ಚಿತ್ರದುರ್ಗ ಜಿಲ್ಲಾ ಆಯುಷ್ ಇಲಾಖೆ ಪೂರೈಸಿದ್ದ ಆಯುರ್ವೇದದ ಸಂಶಮನಿ ವಟಿಯ ನಲವತ್ತು ಮಾತ್ರೆಗಳ ಡಬ್ಬಿ, ಹಾಗೂ ಮೂಸಿ ನೋಡಲು ಆಕರ್ರ್ಯೂಅಜೀಬ್ ಲಿಕ್ವಿಡ್ ವಿತರಿಸಿ ಮಾತನಾಡಿದರು.
ಕೋವಿಡ್19 ವೈರಸ್ ನಿಯಂತ್ರಣ ಮಾಡಲು ಹಗಲು ರಾತ್ರಿ ಶ್ರಮಿಸಿದ ವೈದ್ಯರು, ದಾದಿಯರು, ಆಶಾ, ಆರೋಗ್ಯ, ಅಂಗನವಾಡಿ ಕಾರ್ಯಕರ್ತರು, ಗ್ರಾಪಂ ಪೌರಕಾರ್ಮಿಕರು ಹಾಗೂ ಶಾಲಾ ಶಿಕ್ಷಕರಿಗೆ ಕೊರೋನಾ ವೈರಸ್ ಹರಡದಂತೆ ತಡೆಯಲು ಮತ್ತು ಇವರೆಲ್ಲರಲ್ಲೂ ರೋಗನಿರೋಧಕ ಶಕ್ತಿ ವೃದ್ದಿಸಲು ಅನುವಾಗಲು ಉಚಿತವಾಗಿ ವಿತರಿಸಲು ಕ್ರಮ ಕೈಗೊಂಡಿರುವುದು ಶ್ಲಾಘನೀಯ ಸಂಗತಿ ಎಂದರು.
ಗ್ರಾಪಂ ಪೌರಕಾರ್ಮಿಕರಿಗೆ ಆಯುರ್ವೇದ ಮಾತ್ರೆ, ಲಿಕ್ವಿಡ್ ವಿತರಿಸಿ ಮಾತನಾಡಿದ ಗ್ರಾಪಂ ಅಧ್ಯಕ್ಷೆ ಸರೋಜಾ ಮಾತನಾಡಿ, ಜಿಲ್ಲಾ ಆಯುಷ್ ಇಲಾಖೆ ಆಯುರ್ವೇದ ಆಸ್ಪತ್ರೆಗಳ ಮೂಲಕ ಕೋವಿಡ್ ವಾರಿಯರ್ಸ್ಗಳಿಗೆ ರೋಗ ನಿರೋಧಕ ಶಕ್ತಿಯ ವೃಧ್ದಿಗೆ ಅಮೃತಬಳ್ಳಿಯಿಂದ ಸಿದ್ದಗೊಳಿಸಿದ ಮಾತ್ರೆಗಳನ್ನು ನೀಡಿ ಅವರ ಆರೋಗ್ಯ ವೃದ್ದಿಗೆ ಸಹಕರಿಸಿದೆ ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚಳ್ಳಕೆರೆ ಶಾಖೆಯ ರಾಜ್ಯ ಪರಿಷತ್ ಸದಸ್ಯ ಕೆ. ಬಸವರಾಜು ಮಾತನಾಡಿ, ರಾಜ್ಯ ಸರ್ಕಾರ ರಾಜ್ಯದಾದ್ಯಂತ ಆಯುಷ್ ಇಲಾಖೆಯ ಮೂಲಕ ಸ್ವದೇಶಿ ಸಂಸ್ಥೆಗಳೇ ಸಿದ್ದಗೊಳಸಿದ ಆಯುರ್ವೇದ ಔಷಧಿಯ ಮಾತ್ರೆಗಳನ್ನು ಕೋವಿಡ್ ನಿಯಂತ್ರಣಕ್ಕೆ ನೀಡಿರುವುದು ತುಂಬಾ ಉಪಯೋಗಕಾರಿ ಎಂದರು.
ಇದೇ ವೇಳೆ ಪಿ ಮಹದೇವಪುರ ಗ್ರಾಮದ ಆಯುರ್ವೇದ ಆಸ್ಪತ್ರೆಯ ವತಿಯಿಂದ ಎಸ್ ದುರ್ಗ ಪಿಎಚ್ಸಿಯ ಆರೋಗ್ಯ ಇಲಾಖೆಯ ಸಿಬ್ಬಂದಿ, ಗ್ರಾಪಂನ ಪೌರಕಾರ್ಮಿಕರು ಹಾಗೂ ನಾಗಪ್ಪನಹಳ್ಳಿಗೇಟ್ನ ಚೆಕ್ ಪೋಸ್ಟ್ ಸಿಬ್ಬಂದಿಗೆ ಉಚಿತವಾಗಿ ಆಯುರ್ವೇದದ ಔಷಧಿ ಮಾತ್ರೆಗಳು ಮತ್ತು ಲಿಕ್ವಿಡ್ಗಳನ್ನು ವಿತರಿಸಲಾಯಿತು.
ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಸರೋಜಾ, ಸದಸ್ಯ ರವಿಕುಮಾರ್, ಪಿಡಿಒ ಟಿ. ಮಲ್ಲೇಶಪ್ಪ, ಆಯುರ್ವೇದ ವೈದ್ಯಾಧಿಕಾರಿ ಡಾ ಅನಿಲ್ಕುಮಾರ, ಶಿಕ್ಷಕರಾದ ಪಿ.ಡಿ. ಹನುಮಂತಯ್ಯ, ವೀರಭದ್ರಪ್ಪ, ಆಶಾ ಕಾರ್ಯಕರ್ತೆಯರಾದ ಶೈಲಜಾ, ನಗೀನಾಬಾನು, ಜಯಮ್ಮ, ಆರೋಗ್ಯ ಮಹಿಳಾ ಸಹಾಯಕಿ ಜ್ಯೋತಿ, ಗ್ರಾಮಸ್ಥರಾದ ವೆಂಕಟರಮಣಪ್ಪ, ಜಗಣ್ಣ, ನಾಗೇಂದ್ರಪ್ಪ, ತಿಪ್ಪೇಸ್ವಾಮಿ, ತಿಪ್ಪೇಸ್ವಾಮಿ, ಮಹೇಶ, ಹೇಮಲತಾ, ಗ್ರಾಪಂ ಸದಸ್ಯರು, ಆಶಾ, ಆರೋಗ್ಯ, ಕಾರ್ಯಕರ್ತರು, ಗ್ರಾಪಂ ಪೌರಕಾರ್ಮಿಕರು, ಪೊಲೀಸರು, ಗ್ರಾಮಸ್ಥರು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get In Touch With Us info@kalpa.news Whatsapp: 9481252093
Discussion about this post