ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಪರಿಣಾಮ ಕುದುರೆಮುಖ ಭಾಗದಲ್ಲಿ ಭದ್ರಾನದಿ ಭೋರ್ಗರೆಯುತ್ತಾ ಹರಿಯುತ್ತಿದ್ದು, ಕೆಲವು ಭಾಗದಲ್ಲಿ ಪ್ರವಾಹದ ರೀತಿಯಲ್ಲಿ ಕಂಡು ಬರುತ್ತಿದೆ.
ಕುದುರೆಮುಖ ಭಾಗದಲ್ಲಿ ಭದ್ರಾನದಿ ತುಂಬಿ ಹರಿಯುತ್ತಿದ್ದು, ಅಣೆಕಟ್ಟೆಗೆ ಒಳ ಹರಿವು ಹೆಚ್ಚಾಗಿದೆ.
ಇಂದು ಮುಂಜಾನೆಯ ಮಾಹಿತಿಯಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಅಣೆಕಟ್ಟೆಗೆ ಮೂರುವರೆ ಅಡಿಗಳಷ್ಟು ನೀರು ಹರಿದು ಬಂದಿದೆ. ಶನಿವಾರ ಮುಂಜಾನೆಯ ಅಂಕಿಅಂಶದಂತೆ 168.7ರಷ್ಟಿದ್ದ ನೀರಿನ ಪ್ರಮಾಣ ಇಂದು ಮುಂಜಾನೆಗೆ 172.2 ಅಡಿಗೆ ಏರಿಕೆಯಾಗಿದೆ.
47236 ಕ್ಯೂಸೆಕ್ಸ್ ನೀರಿನ ಒಳಹರಿವಿದ್ದು, 2849 ಕ್ಯೂಸೆಕ್ಸ್ ನೀರಿನ ಒಟ್ಟು ಹೊರ ಹರಿವಿದೆ. ಈವರೆಗೂ ಕ್ರಸ್ಟ್ ಗೇಟ್ ಮೂಲಕ ನೀರು ಬಿಟ್ಟಿಲ್ಲ.
ಇನ್ನು, ಕಳೆದ ವರ್ಷದ ಇದೇ ದಿನಾಂಕದಂದು 164.6 ಅಡಿ ನೀರಿತ್ತು. ಅಂದರೆ, ಕಳೆದ ವರ್ಷದ ಹೋಲಿಕೆ ಮಾಡಿದರೆ ಇಂದು ನೀರಿನ ಪ್ರಮಾಣವೂ ಅಧಿಕವಿದೆ.
Get In Touch With Us info@kalpa.news Whatsapp: 9481252093
Discussion about this post