No Result
View All Result
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ
English Articles

Special Train Between Bengaluru Cantt and Chennai

by ಕಲ್ಪ ನ್ಯೂಸ್
April 3, 2026
0

Kalpa Media House  |  Bengaluru  | To clear the extra rush of passengers during the Summer Holiday season, South Western...

Read moreDetails
SWR Mysuru Division Excels with Record Passenger Revenue and Strong Commercial Growth

SWR Mysuru Division Excels with Record Passenger Revenue and Strong Commercial Growth

April 2, 2026
SWR to run special trains for Good Friday, Easter rush

Summer Special Train Between Tiruchchirappalli & SMVT Bengaluru

April 2, 2026
PESITM hosts Mock CET 2026 to Strengthen KCET Preparation

PESITM hosts Mock CET 2026 to Strengthen KCET Preparation

March 31, 2026
India’s Trauma Care Push Gets a Boost as HOSMAT Launches Golden Hour Network At First-Of-Its-Kind Trauma Conclave

India’s Trauma Care Push Gets a Boost as HOSMAT Launches Golden Hour Network At First-Of-Its-Kind Trauma Conclave

March 30, 2026
  • Advertise With Us
  • Grievances
  • About Us
  • Contact Us
Saturday, April 4, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ರಾಜ್ಯದ ದೊರೆ ಅಂಧರ ಬಾಳಿಗೆ ಬೆಳಕಾಗಲಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
October 9, 2020
in Special Articles, Small Bytes
0
ರಾಜ್ಯದ ದೊರೆ ಅಂಧರ ಬಾಳಿಗೆ ಬೆಳಕಾಗಲಿ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಸುಮಾರು 2 ತಿಂಗಳ ಕೆಳಗಿನ ಮಾತು ಸಿಲಿಕಾನ್ ಸಿಟಿಯ ಬನಶಂಕರಿ 3ನೆಯ ಹಂತದ ಜನತಾ ಬಜಾರ್’ನಲ್ಲಿ ಕೈಯಲ್ಲಿ ಬೆಂಡಿನ ತುಂಡು ಅದರ ಮೇಲೆ ಒಂದಿಷ್ಟು ಪ್ಲಾಸ್ಟಿಕ್ ಹಕ್ಕಿ ಹಿಡಿದು, ರಸ್ತೆಯ ಉದ್ದಕ್ಕೂ ರಟ್ಟಿನ ಡಬ್ಬಕ್ಕೆ ಹಗ್ಗ ಕಟ್ಟಿ ಹಾಕಿ ಹಕ್ಕಿ ಬೇಕೇ ಹಕ್ಕಿ ಎನ್ನುತ್ತಾ ಸಾಗುತ್ತಾ ಇದ್ದರು ಓರ್ವ ವ್ಯಕ್ತಿ. ಕುತೂಹಲ ಮೂಡಿ ಆ ವ್ಯಕ್ತಿಯ ಬಳಿ ಹೋಗಿ ಮಾತನಾಡಿದಾಗ ನನಗೆ ತಿಳಿದ ಅಂಶ ಅವರು ಎರಡೂ ಕಣ್ಣಿಲ್ಲದ ಅಂಧರು ಎಂಬುದು.

ಅವರ ಜೊತೆ ನನ್ನ ಮಾತು ಆರಂಭವಾಗಿತ್ತು. ಅವರ ಹೆಸರು ಹನುಮಂತ ರೆಡ್ಡಿ, ಸರ್ಜಾಪುರದ ಕನ್ನಳ್ಳಿ ಎಂಬ ಊರಿನವರು. ಇಬ್ಬರು ಮಕ್ಕಳು, ಬದುಕಿನ ಬಂಡಿ ಸಾಗಿಸಲು ಪ್ಲಾಸ್ಟಿಕ್ ಹಕ್ಕಿ ವ್ಯಾಪಾರ ವಹಿವಾಟು ನಮಗೆ ಆಧಾರ ಎಂದು ಒಂದೇ ಉಸಿರಿಗೆ ನನ್ನ ಮಾತಿಗೆ ಧ್ವನಿಯಾಗಿದ್ದರು.

ಹನುಮಂತ ರೆಡ್ಡಿ ಅವರು ಹುಟ್ಟಿನಿಂದ ಅಂಧರು. ಆದರೆ ಅವರು ಸಿಲಿಕಾನ್ ಸಿಟಿ ತುಂಬಾ ಬಸ್ಸಿನಲ್ಲಿ ಸುತ್ತಿ ದಿನಕ್ಕೆ ಒಂದರಂತೆ ನಗರದ ಹಲವು ವರ್ಷಗಳಿಂದ ಪ್ಲಾಸ್ಟಿಕ್ ಹಕ್ಕಿ ವ್ಯಾಪಾರ ವಹಿವಾಟು ಮಾಡುತ್ತಾ ಕೈಯಲ್ಲಿ ರಟ್ಟಿನ ಡಬ್ಬಿಗೆ ಹಗ್ಗ ಕಟ್ಟಿ ರಸ್ತೆಯಲ್ಲಿ ಎಚ್ಚರಿಕೆಯಿಂದ ಸಾಗುತ್ತಾ ಹೊಟ್ಟೆ ಹೊರೆಯಲು ಸಾಗುವ ಇವರ ಸ್ವಾಭಿಮಾನದ ಬದುಕು ನಾಡಿನ ಜನತೆಗೆ ಮಾದರಿ!

ಕಣ್ಣಿನ ದೃಷ್ಟಿ ಎಷ್ಟು ಮುಖ್ಯ ಎಂದು ಕಣ್ಣುಗಳನ್ನು ಕಳೆದುಕೊಂಡವರಿಗೆ ಮಾತ್ರ ಗೊತ್ತು. ಒಮ್ಮೆ ನಮಗೆ ಕಣ್ಣುಗಳೇ ಇಲ್ಲದಿದ್ದರೆ ಏನಾಗುತ್ತಿತ್ತು ಮತ್ತು ನಮ್ಮ ಜೀವನ ಹೇಗಿರುತ್ತಿತ್ತು ಎಂಬುದನ್ನು ಕಲ್ಪಿಸಿಕೊಂಡು ನೋಡಿ. ನಿಜಕ್ಕೂ ಎದೆ ಝಲ್ಲೆನ್ನುತ್ತದೆ. ಕಣ್ಣಿಲ್ಲದೆ ಜೀವನ ಮಾಡುತ್ತಿರುವವರಿಗೆ ಹ್ಯಾಟ್ಸಾಫ್ ಹೇಳಲೇಬೇಕು.

ನೇತ್ರದ ಅಮೂಲ್ಯತೆ ಕುರಿತಾಗಿ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ನೇತ್ರ ತಜ್ಞ ಡಾ.ಎನ್. ವೀರಭದ್ರ ರಾವ್, ಪ್ರಜ್ಞಾತ್ಮಕ ಜ್ಞಾನೇಂದ್ರಿಯವಾಗಿರುವ ಕಣ್ಣು, ದೃಷ್ಟಿಗೆ ಅವಕಾಶ ನೀಡುತ್ತದೆ. ಅಕ್ಷಿಪಟದಲ್ಲಿರುವ ರಾಡ್(ಕಣ್ಣಿನ ಪಾಪೆಯ ದಂಡ) ಮತ್ತು ಕೋನ್ (ಅಕ್ಷಿಪಟದಲ್ಲಿರುವ ಶಂಕುವಿನಾಕಾರದ ರಚನೆ) ಕೋಶಗಳು, ವಿವಿಧ ಬಣ್ಣಗಳು ಮತ್ತು ಅವುಗಳ ಗಾಢತೆಯನ್ನು ಗ್ರಹಿಸುವುದು ಸೇರಿದಂತೆ ಜಾಗೃತ ಬೆಳಕಿನ ಗ್ರಹಿಕೆ ಮತ್ತು ದೃಷ್ಟಿಗೆ ಅವಕಾಶ ಕಲ್ಪಿಸುತ್ತದೆ ಎಂದರು.

ಡಾ.ಎನ್. ವೀರಭದ್ರ ರಾವ್

ವಿಶ್ವದಲ್ಲಿ 2.2 ಶತ ಕೋಟಿ ಜನರಿಗೆ ವಿವಿಧ ಕಾರಣಗಳಿಂದ ಕಣ್ಣುಗಳು ಹಾಳಾಗಿವೆ. ಇದರಲ್ಲಿ 36 ದಶಲಕ್ಷ ಜನರು ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದಾರೆ. 217 ದಶ ಲಕ್ಷ ಜನರು ಮಧ್ಯಮ ದೃಷ್ಟಿ ನ್ಯೂನತೆಯಿಂದ ಬಳಲುತ್ತಿದ್ದಾರೆ. ಬಡ ಮತ್ತು ಮಧ್ಯಮ ವರ್ಗದಲ್ಲಿ 60 ವರುಷಕ್ಕಿಂತ ಮೇಲ್ಪಟ್ಟ ಶೇ.89 ಮಂದಿ ಕಣ್ಣಿನ ತೊಂದರೆಗೆ ಒಳಗಾಗುತ್ತಿದ್ದಾರೆ ಎಂದರು.

ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸಿದರೆ ಮುಂದೆ ಆಗುವ ಅನಾಹುತಾ ತಪ್ಪಿಸಬಹುದು. ಪ್ರಮುಖವಾಗಿ, ನಿಮ್ಮ ಮಗುವಿನ ಪಾಲನೆ ಪೋಷಣೆಯ ಜೊತೆಗೆ ಕಣ್ಣಿನ ಬಗ್ಗೆ ಕಾಳಜಿ ಮತ್ತು ಜಾಗೃತಿ ನಿಮ್ಮಲ್ಲಿ ಹೆಚ್ಚಿರಬೇಕು. ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ಇರಲಿ, ಕಾಲಕಾಲಕ್ಕೆ ಮಗುವಿನ ಕಣ್ಣಿನ ಪರೀಕ್ಷೆ ದೃಷ್ಟಿ ದೋಷ ನಿವಾರಣೆ ಇತ್ಯಾದಿಗಳನ್ನು ಮಾಡಿಸಿ ಮಗುವಿಗೆ ಕಣ್ಣಿಗೆ ಸಂಬಂಧ ಪಟ್ಟ ಯಾವುದೇ ಸಮಸ್ಯೆ ಕಾಡದಂತೆ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.

ವಂಶ ಪರಾಂಪರ್ಯವಾಗಿ ಗ್ಲುಕೋಮಾ, ಅಕ್ಷಿಪಟಲದ ತೊಂದರೆ, ಇರಳುಗಣ್ಣು ಇವುಗಳು ಹತ್ತಿರ ಸಂಬಂಧಗಳಲ್ಲಿ ಮದುವೆ ಆದರೆ (ಉದಾಹರಣೆಗೆ-ಮಾವನ ಮಗ, ಅತ್ತೆ ಮಗಳು) ಬರುವ ಸಾಧ್ಯತೆ ಹೆಚ್ಚು ಇರುತ್ತದೆ ಹಾಗೂ ಇವುಗಳು ಕಣ್ಣಿನ ದೃಷ್ಟಿಯಲ್ಲಿ ಪರಿಣಾಮ ಬೀರುತ್ತದೆ ಎನ್ನುತ್ತಾರೆ.
40 ವರುಷ ದಾಟಿದ ನಂತರ ಕಣ್ಣಿನ ಪರೀಕ್ಷೆ ಅಗತ್ಯವಾಗಿ ಮಾಡಿಸಿಕೊಳ್ಳಿ, 40 ವರುಷ ದಾಟಿದ ನಂತರ ಸಣ್ಣ ಸಣ್ಣ ಅಕ್ಷರಗಳು ಓದಲು ಕಾಣಿಸದೆ ಇರುವ ಹಾಗೂ ಅನೇಕ ರೀತಿಯ ಕಣ್ಣಿನ ಸಮಸ್ಯೆಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕ ಮಾಡಿ ತಪಾಸಣೆ ಮಾಡಿಸಿಕೊಂಡರೆ ಕಣ್ಣಿನ ದೃಷ್ಟಿ ಹೋಗದಂತೆ ತಡೆಯಬಹುದು. ಧೂಮಪಾನ ಹಾಗೂ ಮದ್ಯಪಾನದಿಂದ ಕಣ್ಣಿನ ಸಮಸ್ಯೆ ಉಂಟಾಗುತ್ತದೆ, ಪೋಷಕಾಂಶಗಳು ಇರುವ ಆಹಾರ ಸೇವಿಸಬೇಕು, ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರು ಸಕಾಲದಲ್ಲಿ ಚಿಕಿತ್ಸೆ ಪಡೆಯಬೇಕು ಎಂದರು.

ಡಾ. ರಾಜ್’ಕುಮಾರ್ ಅವರ ಮರಣದ ನಂತರ ಅವರ ಇಚ್ಛೆಯಂತೆ ಅವರ ಮಕ್ಕಳು ರಾಜಣ್ಣನವರ ನೇತ್ರವನ್ನು ದಾನ ಮಾಡಿದ್ದ ಹಾಗೇ ರಾಜ್ಯದ ನಾಗರೀಕರು ನೇತ್ರದಾನಕ್ಕೆ ಮುಂದೆ ಬಂದರೆ ಅನೇಕ ಅಂಧರ ಬಾಳಿಗೆ ಬೆಳಕು ಸಿಗುವ ಸಾಧ್ಯತೆ ಹೆಚ್ಚು. ತಪಾಸಣೆ ಮಾಡಿಸಿಕೊಂಡು ಕಣ್ಣುಗಳನ್ನು ರಕ್ಷಣೆ ಮಾಡಿ ಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎನ್ನುತ್ತಾರೆ.

ನಾಡಿನ ದೊರೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರದಿಂದ ಇಂತಹ ಅನೇಕ ಅಂಧರ ಬದುಕಿಗೆ ಬೆಳಕು ಚೆಲ್ಲುವ ಯೋಜನೆಗಳನ್ನು ಜಾರಿಗೆ ತರಲಿ ಎಂಬುದು ಈ ಲೇಖನದ ಆಶಯ!

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Ananth KallapuraCM B S YediyurappaKannada News WebsiteLatest News Kannadaಅಂಧಕಣ್ಣಿನ ದೃಷ್ಟಿನೇತ್ರಬಿ.ಎಸ್. ಯಡಿಯೂರಪ್ಪ
Share205Tweet123Send
Previous Post

ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾಗಿ ಎಸ್. ದತ್ತಾತ್ರಿ ನೇಮಕ

Next Post

ಭಾರೀ ಮಳೆಗೆ ಭದ್ರಾವತಿಯಲ್ಲಿ ಮನೆಗೆ ನುಗ್ಗಿದ ನೀರು: ಶಾಶ್ವತ ಪರಿಹಾರ ಮಾಡುವಂತೆ ಆಯುಕ್ತರಿಗೆ ಮನವಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಭಾರೀ ಮಳೆಗೆ ಭದ್ರಾವತಿಯಲ್ಲಿ ಮನೆಗೆ ನುಗ್ಗಿದ ನೀರು: ಶಾಶ್ವತ ಪರಿಹಾರ ಮಾಡುವಂತೆ ಆಯುಕ್ತರಿಗೆ ಮನವಿ

ಭಾರೀ ಮಳೆಗೆ ಭದ್ರಾವತಿಯಲ್ಲಿ ಮನೆಗೆ ನುಗ್ಗಿದ ನೀರು: ಶಾಶ್ವತ ಪರಿಹಾರ ಮಾಡುವಂತೆ ಆಯುಕ್ತರಿಗೆ ಮನವಿ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಮಂಗಳೂರಿನಲ್ಲಿ ಫ್ಲಾಟ್ ದರದಲ್ಲಿ ಲಭ್ಯವಿದೆ ಸುಂದರವಾದ Fully Furnished ವಿಲ್ಲ/ಬಂಗ್ಲೆ

ಮಂಗಳೂರಿನಲ್ಲಿ ಫ್ಲಾಟ್ ದರದಲ್ಲಿ ಲಭ್ಯವಿದೆ ಸುಂದರವಾದ Fully Furnished ವಿಲ್ಲ/ಬಂಗ್ಲೆ

April 4, 2026
ತಾಲೂಕು ಆಸ್ಪತ್ರೆಗೆ ತಜ್ಞ ವೈದ್ಯರನ್ನು ಮರು ನೇಮಕ ಮಾಡಲು ಜೆಡಿಎಸ್ ಆಗ್ರಹ

ತಾಲೂಕು ಆಸ್ಪತ್ರೆಗೆ ತಜ್ಞ ವೈದ್ಯರನ್ನು ಮರು ನೇಮಕ ಮಾಡಲು ಜೆಡಿಎಸ್ ಆಗ್ರಹ

April 4, 2026
ಡಾ. ಆತ್ಮಪ್ರಸನ್ನ ಅವರ ಪ್ಯಾಲಿಟಿವ್ ಕೇರ್ ಇನ್ ಇಂಡಿಯಾ ಕೃತಿ ಬಿಡುಗಡೆ

ಡಾ. ಆತ್ಮಪ್ರಸನ್ನ ಅವರ ಪ್ಯಾಲಿಟಿವ್ ಕೇರ್ ಇನ್ ಇಂಡಿಯಾ ಕೃತಿ ಬಿಡುಗಡೆ

April 4, 2026
BOSCON 2026 – ಭವಿಷ್ಯಮುಖಿ ಅಸ್ಥಿ ಶಸ್ತ್ರ ಚಿಕಿತ್ಸೆಯನ್ನು ಬೆಳಗಿಸಿದ ಪ್ರಮುಖ ತಜ್ಞರ ಸಮ್ಮೇಳನ

BOSCON 2026 – ಭವಿಷ್ಯಮುಖಿ ಅಸ್ಥಿ ಶಸ್ತ್ರ ಚಿಕಿತ್ಸೆಯನ್ನು ಬೆಳಗಿಸಿದ ಪ್ರಮುಖ ತಜ್ಞರ ಸಮ್ಮೇಳನ

April 4, 2026
ಕುಡಿಯುವ ನೀರಿನ ಪಂಪ್ ಹೌಸ್‌ಗೆ ಶಾಸಕ ಚನ್ನಬಸಪ್ಪ ಭೇಟಿ: ನೀರು ಸರಬರಾಜು ತಾಂತ್ರಿಕ ಅಡಚಣೆ ಸರಿಪಡಿಸಲು ಸೂಚನೆ

ಕುಡಿಯುವ ನೀರಿನ ಪಂಪ್ ಹೌಸ್‌ಗೆ ಶಾಸಕ ಚನ್ನಬಸಪ್ಪ ಭೇಟಿ: ನೀರು ಸರಬರಾಜು ತಾಂತ್ರಿಕ ಅಡಚಣೆ ಸರಿಪಡಿಸಲು ಸೂಚನೆ

April 4, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL