ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ನಗರಸಭೆ ಚುನಾವಣೆಗೆ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಕಾರ್ಯ ಭರದಿಂದ ಸಾಗಿದ್ದು, ಇಂದು ಬೆಳಗ್ಗಿನಿಂದ ಮಧ್ಯಾಹ್ನ 3ಗಂಟೆಯವರೆಗೆ ನಾಮಪತ್ರ ಸಲ್ಲಿಸಿರುವವರ ವಿವರ ಹೀಗಿದೆ.
ವಾರ್ಡ್ ನಂ. 12 ಅಣ್ಣಾನಗರ: ಬಿಜೆಪಿ ಪಕ್ಷದಿಂದ ಎಮ್. ಪ್ರಭಾಕರ್, ಪಕ್ಷೇತರ ಅಭ್ಯರ್ಥಿಗಳಾಗಿ ಎ. ಪಶುಪತಿ, ಬಿ.ಕೆ. ಮಂಜುನಾಥ್.
ವಾರ್ಡ್ ನಂ.14, ಹೊಸಭೋವಿ ಕಾಲೋನಿ: ಬಿಜೆಪಿಯಿಂದ ಜಿ. ಆನಂದ್ ಕುಮಾರ್, ಜನತಾದಳದಿಂದ ಹೆಚ್. ಮಂಜುನಾಥ್, ಪಕ್ಷೇತರ ಅಭ್ಯರ್ಥಿಯಾಗಿ ಶೋಭ ರವಿಕುಮಾರ್,
ವಾರ್ಡ್ ನಂ.15, ಹೊಸಮನೆ: ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ. ಹನುಮಂತಪ್ಪ, ಬಿಜೆಪಿ ಅಭ್ಯರ್ಥಿ ಎಸ್. ನಾರಾಯಣಪ್ಪ, ಪಕ್ಷೇತರರಾಗಿ ಎನ್. ದಿನೇಶ್ ಕುಮಾರ್.
ವಾಡ್ ನಂ. 17, ನೆಹರೂ ನಗರ: ಜನತಾದಳದಿಂದ ಎಮ್. ಯೋಗೇಶ್ ಕುಮಾರ್, ಪಕ್ಷೇತರ ಅಭ್ಯರ್ಥಿಯಾಗಿ ವಜೀರ್.
ವಾರ್ಡ್ ನಂ. 5, ಕೋಟೆ ಏರಿಯಾ: ಕಾಂಗ್ರೆಸ್ನಿಂದ ಬಿ.ಎಸ್. ಯಶೋದ (ಎರಡು ನಾಮಪತ್ರ) ಹಾಗೂ ವೈ. ರೇಣುಕಾ, ಜೆಡಿಎಸ್ನಿಂದ ತಬಸುಂ ಸುಲ್ತಾನ್, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದಿಂದ ಸುಲ್ತಾನ್ ಬಾನು.
ವಾರ್ಡ್ ನಂ. 8, ಸೀಗೆಬಾಗಿ ಕಾಲೋನಿ: ಸ್ವತಂತ್ರ ಅಭ್ಯರ್ಥಿಯಾಗಿ ಮಲ್ಲೇಶಪ್ಪ ಎರಡು ನಾಮಪತ್ರ, ಕಾಂಗ್ರೆಸ್ನಿಂದ ಮಹಮ್ಮದ್ ಇನಾಯಿತ್ ಮತ್ತು ಬಶೀರ್ ಅಹಮದ್, ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಹಾಗೂ ಪಕ್ಷೇತರರಾಗಿ ಸೈಯದ್ ಅಜ್ಮಲ್ ಎರಡು ನಾಮಪತ್ರ, ಆಮ್ ಆದ್ಮಿ ಪಕ್ಷದಿಂದ ಅಬ್ದುಲ್ ಖದೀರ್, ಪಕ್ಷೇತರ ಅಭ್ಯರ್ಥಿಯಾಗಿ ವಿ. ವಿನಯ.
ವಾರ್ಡ್ ನಂ. 10, ಹನುಮಂತನಗರ, ಅಶ್ವತ್ಥ್ನಗರ: ಬಿಜಪಿಯಿಂದ ಎಸ್. ಅನಿತಾ ಎರಡು ನಾಮಪತ್ರ, ಕಾಂಗ್ರೆಸ್ನಿಂದ ಎಸ್. ಶಶಿಕಲಾ.
ವಾರ್ಡ್ ನಂ. 9: ಭದ್ರಾಕಾಲೋನಿ: ಕಾಂಗ್ರೆಸ್ ನಿಂದ ಚನ್ನಪ್ಪ.
ವಾರ್ಡ್ ನಂ. 11: ಸುಭಾಷ್ ನಗರ: ಕಾಂಗ್ರೆಸ್ನಿಂದ ಮಣಿ ನಾಮಪತ್ರ ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















