ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಪ್ರದೀಪ್ ಸಾಗರ ಮೂವೀಸ್ ಅರ್ಪಿಸುವ ಮೂರನೆಯ ಕೊಡುಗೆ ಬ್ಯಾಂಕ್ ಲೋನ್ ಚಲನಚಿತ್ರದ ಚಿತ್ರೀಕರಣ ಕಳೆದ 15 ದಿನಗಳಿಂದ ಭರದಿಂದ ಸಾಗಿದೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ನಿರ್ಮಾಪಕ ಪ್ರದೀಪ ಸೋನ್ಸ್ ಅವರು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು ಬೆಂಗಳೂರು, ಬೆಳ್ಳೂರ ಕ್ರಾಸ್, ಮಂಥನಹಳ್ಳಿ, ಕುಶಾಲನಗರದ ಸುತ್ತಮುತ್ತ ಭರದಿಂದ ಚಿತ್ರೀಕರಣ ನಡೆಸಿದ್ದಾರೆ. ಸಾಲ ಸಾಲ ಸಾಲ ಸಾಲದಯ್ಯ, ಕಾಲ ಕೊಟ್ಟ ಸಾಲ ನಮಗೆ ಸಾಲದಯ್ಯ ಎನ್ನುವ ಹಾಡಿನ ಚಿತ್ರೀಕರಣವನ್ನು ಖ್ಯಾತ ಜನಪ್ರಿಯ ಜಾನಪದ ಗಾಯಕ ಗುರುರಾಜ ಹೊಸಕೋಟೆ ಅವರ ಆಭಿನಯದಲ್ಲಿ ಮಂಥನಹಳ್ಳಿ ಸುತ್ತಮುತ್ತ ಚಿತ್ರೀಕರಿಸಲಾಗಿದ್ದು ಇದೀಗ ಇನ್ನೊಂದು ಹಾಡಿನ ಚಿತ್ರೀಕರಣಕ್ಕಾಗಿ ಚಿತ್ರತಂಡ ಹೊನ್ನಾವರದಲ್ಲಿ ಬೀಡುಬಿಟ್ಟಿದೆ.
ಬೆಂಗಳೂರಿನಂತಹ ನಗರದಲ್ಲಿ ಹೆಣ್ಣುಮಕ್ಕಳು ಸ್ವಾವಲಂಬಿಗಳಾಗಿ ಬದುಕಲು ಎದುರಾಗುವ ಅಡಚಣೆಗಳ ಬಗ್ಗೆ ಚಿತ್ರ ಬೆಳಕು ಚೆಲ್ಲಲಿದೆ. ಇದೊಂದು ಬದುಕಿನ ಪಯಣದ ಚಿತ್ರವಾಗಿದ್ದು ಹಲವಾರು ತಿರುವುಗಳನ್ನು ಒಳಗೊಂಡರೂ ತಮ್ಮ ಗುರಿಯನ್ನು ಹೇಗೆ ಮುಟ್ಟುತ್ತಾರೆ ಎಂಬ ಕಥಾವಸ್ತುವನ್ನು ಚಿತ್ರ ಒಳಗೊಂಡಿದೆ.
ಈ ಕುರಿತಂತೆ ಮಾತನಾಡಿರುವ ನಿರ್ದೇಶಕಿದ್ವಯರಾದ ಆರ್. ಪೂರ್ಣಶ್ರೀ ಹಾಗೂ ಎಸ್. ರಶ್ಮಿ, ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುವ ಚಿತ್ರ ಪ್ರೇಕ್ಷಕರ ಮನ ತಟ್ಟುತ್ತದೆ. ಈ ಚಿತ್ರ ಕೂಡ ಯಶಸ್ಸು ಕಾಣುವದರಲ್ಲಿ ಸಂದೇಹವೇ ಇಲ್ಲ. ಇದಕ್ಕಾಗಿ ನಾವು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದು ಈಗಾಗಲೇ ಶೇ. 80ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಶಿವಕುಮಾರ್ ಆರಾಧ್ಯ, ಗುರುರಾಜ ಹೊಸಕೋಟೆ ಅವರೂ ತುಂಬಾ ಮನೋಜ್ಞವಾಗಿ ಅಭಿನಯಿಸಿದ್ದಾರೆ. ನಾವು ಅಂದುಕೊಂಡಂತೆ ಈ ಚಿತ್ರದ ಚಿತ್ರೀಕರಣ 25 ರಿಂದ 30 ದಿನಗಳೊಳಗೆ ಸಂಪೂರ್ಣ ಮುಗಿಸುತ್ತಿದ್ದೇವೆ ಎಂದಿದ್ದಾರೆ.
ಇನ್ನು, ಈ ಕುರಿತಂತೆ ಮಾತನಾಡಿದ ನಿರ್ಮಾಪಕ ಪ್ರದೀಪ್ ಸೋನ್ಸ್, ಇದು ನನ್ನ ನಿರ್ಮಾಣದ ಮೂರನೇ ಚಿತ್ರವಾಗಿದೆ. ನಿರ್ದೇಶಕರು ಕಥೆ ಹೇಳಿದಾಗ ಇಷ್ಟ ಆಯ್ತು. ಇಂಥ ಘಟನೆಗಳು ನಿಜಜೀವನದಲ್ಲಿ ನಡೆದದ್ದು ಕೇಳಿದ್ದೆ. ಅದನ್ನೇ ಇದೀಗ ತೆರೆಗೆ ತರುತ್ತಿರುವೆ ಎಂದು ತಿಳಿಸಿದ್ದಾರೆ.
ಮುಖ್ಯ ತಾರಾಗಣದಲ್ಲಿ ಪ್ರದೀಪ ಸೋನ್ಸ್, ಮತ್ತೊಬ್ಬ ಯುವ ನಾಯಕ ನವರಸ ನಟನಾ ಅಕಾಡೆಮಿಯ ಮನೋಜ್ ಶೆಟ್ಟಿ, ಸೇರಾ(ಟೆಂಟ್ ಸಿನಿಮಾ), ಲಿಖಿತಾ ಅನಂತ್, ಶಿವಕುಮಾರ್ ಆರಾಧ್ಯ, ಕಾವ್ಯ, ಅವಿನಾಶ್ ಗಂಜಿಹಾಳ, ಮುರುಳೀಧರ್ ಮುಂತಾದವರಿದ್ದಾರೆ.
ಛಾಯಾಗ್ರಹಣ ಶೇಖರ್, ಚಿತ್ರಕಥೆ-ಸಂಕಲನ-ತಾಂತ್ರಿಕ ನಿರ್ದೇಶನ ಟಿ. ಮುತ್ತುರಾಜು, ಸಂಭಾಷಣೆ ಶ್ರೀದೇವಿ ಮಂಜುನಾಥ, ಸಾಹಿತ್ಯ-ಸಂಗೀತ ವಿ. ಮನೋಹರ್, ಪ್ರಸಾದನ ಮೋಹನ್, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ, ಸಹನಿರ್ದೇಶಕರಾಗಿ ಸತೀಶ ಜೋಶಿ ಅವರುಗಳು ಜವಾಬ್ದಾರಿ ನಿರ್ವಹಿಸಿದ್ದಾರೆ. ಹಿಂದೆ, ಪೌರಾಣಿಕ ಸಿನಿಮಾ ಶ್ರೀ ಕಬ್ಬಾಳಮ್ಮ ಹಾಗೂ ಈಗಾಗಲೇ ಸುಮಾರು ೯೭ ರಾಷ್ಟ್ರೀಯ, ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿರುವ ಮನೆ ಕಲಾತ್ಮಕ ಚಲನಚಿತ್ರದ ಜಂಟಿ ನಿರ್ದೇಶಕಿಯರಾದ ಆರ್. ಪೂರ್ಣಶ್ರೀ ಮತ್ತು ಎಸ್. ರಶ್ಮಿ ನಿರ್ದೇಶನ ಮಾಡುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post