ಕಲ್ಪ ಮೀಡಿಯಾ ಹೌಸ್ | |
ಶಂಕರಘಟ್ಟ: ಸತ್ಯಾ, ಅಹಿಂಸೆ ಮತ್ತು ಸರಳತೆ ಗಾಂಧೀಜಿಯವರ ಮುಖ್ಯ ತತ್ವಗಳು ಇವುಗಳನ್ನು ನಾವುಗಳು ಸಹ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಗುಜರಾತ್ನ ಪುಟ್ಟ ಹಳ್ಳಿಯಿಂದ ಬಂದ ಪುಟ್ಟ ಬಾಲಕ ಭಾರತದ ಸ್ವತಂತ್ರಕ್ಕೆ ದಾರಿ ದೀಪವಾಗಿ ಇಂದು ನಮ್ಮೆಲ್ಲರಿಗೂ ಮಹಾತ್ಮರಾಗಿದ್ದಾರೆ ಎಂದು ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ಹೇಳಿದರು.
ಕುವೆಂಪು ವಿಶ್ವವಿದ್ಯಾಲಯದಲ್ಲಿ ಸ್ವಚ್ಚತಾ ಶ್ರಮದಾನದ ಮಾಡುವುದರ ಮೂಲಕ ಗಾಂಧೀಜಿಯವರ 152ನೇ ಜನ್ಮದಿನವನ್ನು ಆಚರಿಸಿ ಮಾತನಾಡಿದರು.
1987 ರಿಂದ 1947ರವರೆಗೆ ಸ್ವಾತಂತ್ರ ಸಂಗ್ರಾಮವಾಗಿತ್ತು ಮತ್ತು ಗಾಂಧೀಜಿಯವರ ಸ್ವಾತಂತ್ರದ ಕೂಗೂ ಇಡಿ ಭಾರತವನ್ನು ತಲುಪಿ ಅವರೊಟ್ಟಿಗೆ ನಿಲ್ಲುವಂತೆ ಮಾಡಿತ್ತು. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ನಾವುಗಳು ಇಡೀ ಪ್ರಪಂಚಕ್ಕೆ ಪರಿಚಹಿಸಬೇಕೆಂದರು.
ಕುಲಸಚಿವರಾದ ಜಿ. ಅನುರಾಧ, ಉಪಕುಲಸಚಿವ ಡಾ. ಶ್ರೀಶೈಲ, ನಿರ್ದೇಶಕರಾದ ಪ್ರೊ.ಎನ್.ಡಿ. ವಿರುಪಾಕ್ಷ, ಡಾ. ಗಜಾನನ ಪ್ರಭು, ಡಾ. ರವೀಂದ್ರ ಗೌಡ, ಅಧ್ಯಾಪಕ ಹಾಗೂ ಅಧ್ಯಾಪಕೇತರ ನೌಕರರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post