ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಇಲ್ಲಿನ ಮಂಜುನಾಥ ಸಾಮಿಲ್ನಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಅಗ್ನಿ ಅನಾಹುತದ ವಿಷಯ ತಿಳಿದ ಕ್ಷಣ ಅಗ್ನಿಶಾಮಕ ದಳದ ಕ್ಷಿಪ್ರ ಕಾರ್ಯಾಚರಣೆಯಿಂದ ಸಂಭವನೀಯ ಅತೀ ದೊಡ್ಡ ಅನಾಹುತ ತಪ್ಪಿದೆ.
ರಾತ್ರಿ 11ಗಂಟೆ ವೇಳೆಗೆ ಬೆಂಕಿ ಕಾಣಿಸಿಕೊಂಡ ವಿಷಯ ಅಗ್ನಿಶಾಮಕ ದಳಕ್ಕೆ ತಿಳಿಯುತ್ತಲೇ ಕೇವಲ ನಾಲ್ಕೈದು ನಿಮಿಷದಲ್ಲೇ ಸ್ಥಳಕ್ಕೆ ಧಾವಿಸಿದ ಎರಡು ವಾಹನಗಳಲ್ಲಿನ ಸಿಬ್ಬಂದಿಗೆ ಕಂಡಿದ್ದು, ಬೃಹತ್ ತೆಂಗಿನಮರದ ಎತ್ತರಕ್ಕೆ ಉರಿಯುತ್ತಿದ್ದ ಬೆಂಕಿ. ಸ್ಥಳಕ್ಕೆ ದಾಮಿಸಿದಾಕ್ಷಣ ಕಾರ್ಯಾಚರಣೆ ಆರಂಭಿಸಿದ ಸಿಬ್ಬಂದಿಗಳು ಅದರ ತೀವ್ರತೆಯನ್ನು ಅರಿತು ತತಕ್ಷಣವೇ ಅಕ್ಕಪಕ್ಕದ ಊರುಗಳಿಂದ ಹೆಚ್ಚಿನ ಅಗ್ನಿಶಾಮಕ ವಾಹನಗಳನ್ನು ತರಿಸಿಕೊಂಡಿದ್ದಾರೆ.
ಭದ್ರಾವತಿ ನಗರ, ಎಂಪಿಎಂ ವಿಐಎಸ್ಎಲ್ ಮಾತ್ರವಲ್ಲದೆ ತರೀಕೆರೆ, ಕಡೂರು, ಚನ್ನಗಿರಿ, ಶಿವಮೊಗ್ಗ ಹಾಗೂ ಶಿಕಾರಿಪುರದಿಂದ ಸುಮಾರು ೯ ವಾಹನಗಳನ್ನು ತರಿಸಿಕೊಂಡು ನಿರಂತರವಾಗಿ ಮುಂಜಾನೆ 8 ಗಂಟೆಯವರೆಗೂ ಕಾರ್ಯಾಚರಣೆ ನಡೆಸಲಾಗಿದೆ.
ಇಷ್ಟು ವಾಹನಗಳು ಕಾರ್ಯಾಚರಣೆ ನಡೆಸಿದರೂ, ಮುಂಜಾನೆ 7 ಗಂಟೆಯವರೆಗೂ ಬೆಂಕಿಯನ್ನು ಪೂರ್ಣವಾಗಿ ಆರಿಸಲು ಸಾಧ್ಯವಾಗಿರಲಿಲ್ಲ. ಬೆಂಕಿಯ ತೀವ್ರತೆ ಎಷ್ಟಿತ್ತು ಎಂದರೆ ಅಕ್ಕಪಕ್ಕದ ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿದ್ದು, ಒಂದು ಕಟ್ಟಡದ ಗೋಡೆ ಸಂಪೂರ್ಣ ಕುಸಿದಿದೆ. ಬೆಂಕಿಯ ತೀವ್ರತೆಗೆ ಅಕ್ಕಪಕ್ಕದ ಮನೆಗಳ ಶೀಟ್ಗಳು, ಟ್ಯೂಬ್ಲೈಟ್ಗಳು ಹಾಗೂ ತೆಂಗಿನ ಮರಗಳು ಸುಟ್ಟುಭಸ್ಮವಾಗಿದೆ. ಇಂತಹ ಭೀಕರ ಪರಿಸ್ಥಿತಿಯಲ್ಲೂ ಅಗ್ನಿಶಾಮಕ ಸಿಬ್ಬಂದಿಗಳು ತಮ್ಮ ಜೀವವನ್ನು ಲೆಕ್ಕಿಸದೆ ಶಾಮಿಲ್ನ ಒಳಭಾಗಕ್ಕೆ ತೆರಳಿ ಬೆಂಕಿ ನಂದಿಸುವ ಪ್ರಯತ್ನದಲ್ಲಿ ತೊಡಗಿದ್ದು, ನಿಜಕ್ಕೂ ಶ್ಲಾಘನೀಯ.
ಅತತ್ಯಂತ ಪ್ರಮುಖವಾಗಿ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ದಾಮಿಸಿದ ನಂತರ ಅಕ್ಕಪಕ್ಕದ ಮನೆಗಳ ಸಿಲಿಂಡರ್ಗಳನ್ನು ಬೇರೆಡೆಗೆ ಸಾಗಿಸಿ ಅಲ್ಲಿನ ನಿವಾಸಿಗಳನ್ನು ಸುರಕ್ಷಿತವಾಗಿ ಮನೆಗಳಿಂದ ಹೊರಕ್ಕೆ ತಂದಿದ್ದಾರೆ. ಒಟ್ಟಿನಲ್ಲಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಅಧಿಕಾರಿಗಳ ಕ್ಷಿಪ್ರ ಕಾರ್ಯಾಚರಣೆ ಮೂಲಕ ಸಂಭವನೀಯ ಭಾರೀ ಅನಾಹುತ ತಪ್ಪದಂತಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post