ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಕೊರೋನಾ Corona ಸಾಂಕ್ರಾಮಿಕ ರೋಗದ ಅಲೆಯಲ್ಲಿ ದೇಶದಾದ್ಯಂತ ಲಕ್ಷಾಂತರ ಮಂದಿ ಬಲಿಯಾಗಿದ್ದು, ಬಹಳಷ್ಟು ಮಕ್ಕಳು ಅನಾಥರಾಗಿ ಜೀವನವನ್ನೇ ಕಳೆದುಕೊಂಡಿದ್ದಾರೆ. ಇಂತಹ ಮಕ್ಕಳ ಪಾಲಿನ ಆಶಾಕಿರಣವಾಗುವ ಯೋಜನೆಯೇ ಪಿಎಂ ಕೇರ್ಸ್ ಫಂಡ್ ಫಾರ್ ಚಿಲ್ಡ್ರನ್… PM Cares Fund for Children
ಹೌದು… ಕೊರೋನಾ ಸಂದರ್ಭದಲ್ಲಿ ಪೋಷಕರನ್ನು ಕಳೆದುಕೊಂಡು ಬದುಕಿನ ಸವಾಲನ್ನು ಎದುರಿಸುತ್ತಿರುವ ಮಕ್ಕಳಿಗಾಗಿ ಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರ ಪಿಎಂ ಕೇರ್ಸ್ ಫಂಡ್ ಯೋಜನೆ ಕೈಗೊಂಡಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿಯವರು PM Narendra Modi ಇಂದು ಲೋಕಾರ್ಪಣೆಗೊಳಿಸಿದ್ದಾರೆ.
2020 ರ ಮಾರ್ಚ್ 11ರಿಂದ 2022ರ ಫೆಬ್ರವರಿ 28ರ ನಡುವೆ, ಕೋವಿಡ್ ಕಾರಣದಿಂದಾಗಿ ತಂದೆ-ತಾಯಿ, ಪೋಷಕರು, ಒಂಟಿ ತಾಯಂದಿರು ಮತ್ತು ತಂದೆಯನ್ನು ಕಳೆದುಕೊಂಡಿರುವ ಮಕ್ಕಳಿಗೆ ಪಿಎಂ ಕೇರ್ಸ್’ನಿಂದ ನೆರವು ನೀಡಲಿದೆ. ಇದು ವಿದ್ಯಾರ್ಥಿವೇತನ, ಭಾರತೀಯ ವೈದ್ಯಕೀಯ ವಿಮಾ ಕಾರ್ಡ್ಗಳು ಮತ್ತು ಪಿಎಂ ಕೇರ್ಸ್ ಪಾಸ್ ಪುಸ್ತಕಗಳನ್ನು ಒದಗಿಸುತ್ತದೆ.
Also read: ಮಕ್ಕಳಿಗಾಗಿ ಪಿಎಂ ಕೇರ್ಸ್ ಯೋಜನೆ ಬಿಡುಗಡೆ : ಪ್ರಧಾನಿ ಮೋದಿ
ಈ ಯೋಜನೆಯ ಉದ್ದೇಶವು ಮಕ್ಕಳಿಗೆ ವಸತಿ ಒದಗಿಸುವ ಮೂಲಕ ನಿರಂತರವಾದ ರೀತಿಯಲ್ಲಿ ಮಕ್ಕಳ ಸಮಗ್ರ ಆರೈಕೆ ಮತ್ತು ರಕ್ಷಣೆ ನೀಡುವುದು, ಶಿಕ್ಷಣ ಮತ್ತು ವಿದ್ಯಾರ್ಥಿವೇತನದ ಮೂಲಕ ಅವರನ್ನು ಸಬಲೀಕರಣಗೊಳಿಸುವುದಾಗಿದೆ. 23 ವರ್ಷಗಳನ್ನು ತಲುಪಿದ ನಂತರ 10 ಲಕ್ಷ ರೂ. ಆರ್ಥಿಕ ಬೆಂಬಲದೊಂದಿಗೆ ಸ್ವಾವಲಂಬಿ ಅಸ್ತಿತ್ವಕ್ಕೆ ಅವರನ್ನು ಸಜ್ಜುಗೊಳಿಸುವುದು. ವಯಸ್ಸು ಮತ್ತು ಆರೋಗ್ಯ ವಿಮೆಯ ಮೂಲಕ ಅವರ ಯೋಗಕ್ಷೇಮವನ್ನು ನೋಡಿಕೊಳ್ಳುವುದಾಗಿದೆ.
ಪ್ರಯೋಜನ ಹೇಗೆ ದೊರೆಯಲಿದೆ?
ಕೊರೋನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ 18 ವರ್ಷ ತುಂಬುವವರೆಗೆ ಅವರ ಹೆಸರಿನಲ್ಲಿ 10 ಲಕ್ಷ ರೂ.ಗಳನ್ನು ಬ್ಯಾಂಕ್’ನಲ್ಲಿ ಠೇವಣಿ ಇರಿಸಲಾಗುತ್ತದೆ. 18 ರಿಂದ 23 ವರ್ಷಗಳ ನಡುವಿನ ಠೇವಣಿಯ ಮೇಲೆ ಗಳಿಸಿದ ಬಡ್ಡಿಯನ್ನು ಅವರಿಗೆ ಆರ್ಥಿಕ ಸಹಾಯವಾಗಿ ನೀಡಲಾಗುತ್ತದೆ. 23 ವರ್ಷಗಳ ನಂತರ ಸಂತ್ರಸ್ತರಿಗೆ ಹತ್ತು ಲಕ್ಷ ಸಂಪೂರ್ಣವಾಗಿ ನೀಡಲಾಗುವುದು.
ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ?
ಪಿಎಂ ಕೇರ್ಸ್ ಫಂಡ್ ಯೋಜನೆಯ ವೆಬ್’ಸೈಟನ್ನು ಪ್ರಧಾನಿಯವರು ಇಂದು ಲೋಕಾರ್ಪಣೆ ಮಾಡಿದ್ದಾರೆ. ಪೋರ್ಟಲ್ ಏಕ-ಗವಾಕ್ಷಿ ವ್ಯವಸ್ಥೆಯಾಗಿದ್ದು, ಇದರ ಮೂಲಕ ನೋಂದಣಿ ಮಾಡಿಕೊಳ್ಳಬಹುದು.
ಅಗತ್ಯವಿರುವವರು ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ https://www.pmcares.gov.in/en/ ಗೆ ಭೇಟಿ ನೀಡಬಹುದು.
ಉಚಿತ ಶಾಲಾ ಶಿಕ್ಷಣದ ಜೊತೆಗೆ ಉನ್ನತ ಶಿಕ್ಷಣಕ್ಕಾಗಿ ಶೈಕ್ಷಣಿಕ ಸಾಲದ ನೆರವು
ಶಿಕ್ಷಣದ ಸಾಲದ ಮೇಲಿನ ಬಡ್ಡಿಯನ್ನು ಪಿಎಂ ಕೇರ್ಸ್ ಭರಿಸುತ್ತದೆ.
ಆಯುಷ್ಮಾನ್ ಭಾರತ್ ಯೋಜನೆಯಡಿ 23 ವರ್ಷ ತುಂಬುವವರೆಗೆ 5 ಲಕ್ಷ ರೂ. ವರೆಗೆ ಆರೋಗ್ಯ ವಿಮಯ ನೆರವು
ವಿಮೆಯ ಪ್ರೀಮಿಯಂ ಮೊತ್ತವನ್ನು ಪಿಎಂ-ಕೇರ್ಸ್ ನಿಧಿಯಿಂದ ಭರಿಸಲಾಗುವುದು.
18 ವರ್ಷ ತುಂಬುವವರೆಗೆ ದೈನಂದಿನ ಅಗತ್ಯಗಳಿಗಾಗಿ ಪ್ರತಿ ತಿಂಗಳು ಆರ್ಥಿಕ ಸಹಾಯಧನ
3 ವರ್ಷ ಪೂರ್ಣಗೊಳಿಸಿದ ಬಳಿಕ ಪಿಎಂ ಕೇರ್ಸ್ ನಿಧಿಯಿಂದ 10 ಲಕ್ಷ ರೂ. ಆರ್ಥಿಕ ನೆರವು
1-12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಾರ್ಷಿಕ 20,000 ರೂ. ವಿದ್ಯಾರ್ಥಿವೇತನ ಕೌಶಲ್ಯ ತರಬೇತಿಗಾಗಿ ಕರ್ಮ ವಿದ್ಯಾರ್ಥಿ ವೇತನ.
ತಾಂತ್ರಿಕ ಶಿಕ್ಷಣಕ್ಕಾಗಿ ಸ್ವನತ್ ವಿದ್ಯಾರ್ಥಿವೇತನ
50,000 ರೂ. ಪರಿಹಾರಧನ ವಿತರಣೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post