ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ಇಲ್ಲಿ ಸೇರಿಕೊಂಡಿರುವ ಚಿರತೆಯನ್ನು ಸೆರೆ ಹಿಡಿಯಲು ಸತತವಾಗಿ 22 ದಿನಗಳಿಂದ ಪ್ರಯತ್ನ ಪಟ್ಟರೂ ಎಲ್ಲ ಪ್ರಯತ್ನಗಳು ವಿಫಲವಾಗುತ್ತಿದ್ದು, ಹಣ ಮಾತ್ರ ನೀರಿನಂತೆ ವೆಚ್ಚವಾಗುತ್ತಿದೆ.
Another one that is doing the rounds 🙂 pic.twitter.com/hhD2zGMOPB
— Amit Upadhye (@Amitsen_TNIE) August 26, 2022
ಇಲ್ಲಿನ ಗಾಲ್ಫ್ ಮೈದಾನದ ಬಳಿಯಲ್ಲಿ ಸೇರಿಕೊಂಡಿರುವ ಚಿರತೆಯನ್ನು ಸೆರೆ ಹಿಡಿಯುವ ಪ್ರಯತ್ನಗಳು ಸತತವಾಗಿ 22 ದಿನಗಳಿಂದ ನಡೆಯುತ್ತಿದ್ದರೂ, ಕಣ್ಣಿಗೆ ಕಂಡಂತೆ ಕಂಡು, ಕ್ಷಣ ಮಾತ್ರದಲ್ಲಿ ಅದು ಮಾಯವಾಗುತ್ತಿದೆ.
ಸುಮಾರು 150ಕ್ಕೂ ಅಧಿಕ ಸಿಬ್ಬಂದಿಗಳು ಹಾಗೂ ಪೊಲೀಸರು ಇಲ್ಲಿ ಕಾರ್ಯಾಚರಣೆ ನಡೆಸಿದ್ದು, ಬಲೆ, ಗನ್ ಬಳಕೆ ಮಾಡಲಾಗುತ್ತಿದ್ದು, ಚಿರತೆ ಸೆರೆಗಾಗಿ ಶಿವಮೊಗ್ಗದ ಸಕ್ರೆಬೈಲ್’ನಿಂದ ಗಜ ಪಡೆ ಹಾಗೂ ಎಕ್ಸ್’ಪರ್ಟ್ ಅಧಿಕಾರಿಗಳನ್ನು ಕರೆಸಿಕೊಳ್ಳಲಾಗಿದೆ. ಆದರೆ, ಚಿರತೆ ಮಾತ್ರ ಬಲೆಗೆ ಬೀಳದೇ ಆಟವಾಡಿಸುತ್ತಿದೆ.
Also read: ಶಾಂತಿಯುತ ಗಣೇಶೋತ್ಸವ ಆಚರಣೆಗೆ ಮುಂಜಾಗ್ರತ ಕ್ರಮ: ಎಸ್ಪಿ ಲಕ್ಷ್ಮೀ ಪ್ರಸಾದ್
ಇನ್ನು, ಚಿರತೆ ಸೆರೆಗೆ ನಿಯೋಜನೆಗೊಂಡಿರುವ ಅಧಿಕಾರಿ, ಸಿಬ್ಬಂದಿಗಳ ಊಟ, ವಸತಿ, ಭತ್ಯೆ ಹಾಗೂ ಕಾರ್ಯಾಚರಣೆಗಾಗಿ ದಿನವೊಂದಕ್ಕೆ ಬರೋಬ್ಬರಿ 2.5 ಲಕ್ಷ ರೂ. ವೆಚ್ಚವಾಗುತ್ತಿದ್ದು, ಚಿರತೆ ಮಾತ್ರ ಸಿಗದೇ ತಪ್ಪಿಸಿಕೊಳ್ಳುತ್ತಲೇ ಇದೆ.
ಇನ್ನು, 22 ದಿನಗಳಾದರೂ ಚಿರತೆಯನ್ನು ಹಿಡಿಯಲು ಸಾಧ್ಯವಾಗದ ಪರಿಸ್ಥಿತಿ ಒಂದೆಡೆಯಾದರೆ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಾಗಿ ಸಖತ್ ಮೀಮ್ಸ್’ಗಳು ಹರಿದಾಡುತ್ತಿವೆ. ಒಂದೆರಡು ಮೀಮ್ಸ್ ಇಲ್ಲಿದೆ ನೋಡಿ…
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post