ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ನಗರದ ಸೋಮುಗುದ್ದು ರಸ್ತೆಯ ಸಾಹಿತ್ಯ ಪ್ರಾವಿಷನ್ ಸ್ಟೋರ್ ನ ಮುಂಭಾಗದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿ ಬಳಗದ ವತಿಯಿಂದ ಸಾಹಸಸಿಂಹ ವಿಷ್ಣುವರ್ಧನ್ ಅವರ 72ನೇ ಜನ್ಮದಿನ ಆಚರಣೆಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ವಿಷ್ಣುವರ್ಧನ್ ಅವರ ಭಾವಚಿತ್ರಕ್ಕೆ ಅಭಿಮಾನಿಗಳು ಪುಷ್ಪ ನಮನ ಸಲ್ಲಿಸಿ, ನಂತರ ಕೇಕ್ ಕಟ್ ಮಾಡಿ ಸಿಹಿ ಹಂಚಿ ಸಂಭ್ರಮಿಸಿದರು.
ವಿಷ್ಣುವರ್ಧನ್ ಅಭಿಮಾನಿ ಬಳಗದ ರಾಜು ಸಾಹಸಸಿಂಹ ವಿಷ್ಣುವರ್ಧನ್ ಮಾತನಾಡಿ, ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ವಿಷ್ಣುವರ್ಧನ್, ನಟನೆ ಮಾಡಿದ್ದಂತಹ ಸಿನಿಮಾಗಳೆಲ್ಲವೂ ಸಮಾಜಕ್ಕೆ ಉತ್ತಮವಾದ ಕೊಡುಗೆ ಕೊಡುವಂತಹ ದೃಶ್ಯಗಳನ್ನು ಅಳವಡಿಸಿದ್ದರು. ಅವರು ರೈತನಾಗಿ, ಸೈನಿಕನಾಗಿ, ಪೊಲೀಸ್ ಅಧಿಕಾರಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟನೆ ಮಾಡಿದ್ದರು. ಅವರು ನಟನೆ ಮಾಡಿದಂತಹ ನಾಗರಹಾವು ಸಂಪೂರ್ಣ ಚಿತ್ರಕರಣ ಚಿತ್ರದುರ್ಗದಲ್ಲಿ ನಡೆದಿದ್ದು. ಜಿಲ್ಲೆಗೆ ದೊಡ್ಡಮಟ್ಟದ ಹೆಸರು ತಂದು ಕೊಟ್ಟಿತು ಎಂದರು.
Also read: ಗಂಗಾಮತ ಸಮಾಜದ ಅಭಿವೃದ್ಧಿಗೆ ಸಂಘಟನಾತ್ಮಕವಾಗಿ ಶ್ರಮಿಸಿದ್ದೇನೆ: ದೇವೇಂದ್ರಪ್ಪ ಚನ್ನಾಪುರ
ಈ ಸಂದರ್ಭದಲ್ಲಿ ಅಭಿಮಾನಿ ಬಳಗದ ಹಿರಿಯರಾದ ಸೈಯದ್, ಸರ್ವರ್ ಶಿವಣ್ಣ, ನಾಗಣ್ಣ, ಕುಶಲಪ್ಪ, ತಿಪ್ಪೇಶ್, ಸಿ. ಎಸ್. ವಿನಯ್, ಮನು, ಅಭಿಷೇಕ್, ಮಣಿ, ಪ್ರೀತಮ್, ನಿಂಗಮ್ಮ, ಪ್ರಿಯಾಂಕ, ಲಕ್ಷ್ಮಿ ದೇವಿ, ನಾಗಮಣಿ, ಮಂದಾರ, ಬೇಗಂ ಉನ್ನಿಸಾ, ನಜ್ಮಕೌಸರ್, ಕಾಜಲ್ ಪುಟಾಣಿಗಳಾದ ಮಾಹಿರಾ, ದಿಯಾ, ಉಸ್ನಾ, ಸಾಹಿತ್ಯ ಬೆಳೆಗೆರೆ, ಸಂಸ್ಕೃತ ಬೆಳಗೆರೆ, ಸಹಜನ್ ಸಮೀರ್, ಪರ್ವೀನ್, ಆರ್. ಋಷಿಕಾ, ಅಟೋ ಚಾಲಕರು, ವಿಷ್ಣುವರ್ಧನ್ ಅಭಿಮಾನಿ ಬಳಗದ ಸದಸ್ಯರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post