ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಕಾಂಗ್ರೆಸ್ ಮುಖಂಡರಾದ ಲಕ್ಷ್ಮೀ ಹೆಬ್ಬಾಳ್ಕರ್ Lakshmi Hebbalkar ಇಂದು ನಗರದ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಅರ್ಚಕ ರಂಗನಾಥ್ ಶರ್ಮ ದೇವಸ್ಥಾನದ ಚರಿತ್ರೆಯನ್ನು ವಿವರಿಸಿದರು. ದೇವಸ್ಥಾನ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ತಾವು ಮಂತ್ರಿಯಾಗಿ ಆಯ್ಕೆಯಾದರೆ ಅಭಿವೃದ್ಧಿ ಕಾರ್ಯಗಳಿಗಾಗಿ 25 ಕೋಟಿ ರೂ. ಕೊಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬಸಂತಪ್ಪ, ಶಿವಕುಮಾರ್, ಜಗನ್ನಾಥ್, ನರಸಿಂಹಾಚಾರ್, ಗಿರಿ ಇತರರು ಉಪಸ್ಥಿತರಿದ್ದರು.
Also read: ಕಾರ್ಯಕರ್ತರ ಶ್ರಮದಿಂದಲೇ ತಮ್ಮ ಗೆಲುವು: ಸಂಸದ ರಾಘವೇಂದ್ರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post